ಮಂಗಳೂರು: ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಪ್ರಕಟಿತ “ರಿಕಾಲಿಂಗ್ ಅಮರ ಸುಳ್ಯ” – (ಬಲಿದಾನ್ ಆಫ್ ಬ್ರೇವ್ ತುಳುವಾಸ್ ಫಾರ್ ಇಂಡಿಯಾಸ್ ಫ್ರೀಡಮ್) ಪುಸ್ತಕವನ್ನು ಅಕಾಡೆಮಿಯಿಂದ ನಮ್ಮ ವಿಶ್ವದ ಅತೀ ಎತ್ತರದ ಮೋಟಾರ್ ವೇ ಕಾಶ್ಮೀರದ ಲಡಾಖ್ ವರೆಗೆ ಬೈಕ್ ರ್ಯಾಲಿ ಮೂಲಕ ತಲುಪಿಸುವ ಕಾರ್ಯವನ್ನು “screw riders” ನ ಅನುಭವಿ ಯುವಕರು ದಿನಾಂಕ 17/09/2022 ರಂದು ಹಮ್ಮಿಕೊಂಡಿದ್ದಾರೆ.
ಈ ಬೈಕ್ ರ್ಯಾಲಿಯನ್ನು ಅಕಾಡೆಮಿ ಅಧ್ಯಕ್ಷರಾದ ದಯಾನಂದ ಜಿ. ಕತ್ತಲ್ಸಾರ್ ತುಳುನಾಡಿನ ಬಾವುಟ ಹಾರಿಸುವ ಮುಖೇನ ಚಾಲನೆ ನೀಡಲಿದ್ದಾರೆ. ಈ ಸಂದರ್ಭ ಪುಸ್ತಕದ ಲೇಖಕರಾದ ಅನಿಂದಿತ್ ಗೌಡ ಕೊಚ್ಚಿ ಬಾರಿಕೆ, ಹಾಗೂ ತುಳು ಪರ ಹೋರಾಟಗಾರರಾದ ರೋಶನ್ ರೋನೊಲ್ಡ್ ಭಾಗವಹಿಸಲಿದ್ದಾರೆ.