ಮಂಗಳೂರು: ಥ್ಯಾಂಕ್ ಯೂ ಕರ್ನಾಟಕವು ನ್ಯೂಸ್ ಕರ್ನಾಟಕದ ದಶಮಾನೋತ್ಸವವನ್ನು ಆಚರಿಸಲು ಆಯೋಜಿಸಲಾದ ಕಾರ್ಯಕ್ರಮಗಳ ಸರಣಿಯಾಗಿದೆ. ಈ ಮೈಲಿಗಲ್ಲನ್ನು ಸಾಧಿಸಲು ಸ್ಪಿಯರ್ ಹೆಡ್ ಮೀಡಿಯಾ ಗ್ರೂಪ್ ಅನ್ನು ಬೆಂಬಲಿಸಿದ್ದಕ್ಕಾಗಿ ಜಗತ್ತಿನಾದ್ಯಂತದ ಕನ್ನಡಿಗರಿಗೆ ಸಂಸ್ಥೆ ಧನ್ಯವಾದ ತಿಳಿಸಿದೆ.
ಥ್ಯಾಂಕ್ ಯೂ ಕರ್ನಾಟಕ ಸರಣಿಯ ಕಾರ್ಯಕ್ರಮಗಳಲ್ಲಿ ಒಂದಾದ ಆರೋಗ್ಯ ಮಂಥನ, ಪ್ರತಿ ಸೋಮವಾರ ಪ್ರಸಾರವಾಗುವ ಆರೋಗ್ಯದ ಕುರಿತ ಕಾರ್ಯಕ್ರಮ.
ಏಪ್ರಿಲ್ 10 ರಂದು ಪ್ರಸಾರವಾದ 18 ನೇ ಸಂಚಿಕೆಯಲ್ಲಿ ಕೆಎಂಸಿ ಮಂಗಳೂರು ನೋವು ಔಷಧ ವಿಭಾಗದ ಡಾ. ಗೌರವ್ ಗೋಮೆಜ್ ( ಎಂಬಿಬಿಎಸ್ ಎಂಡಿ) ಪಾಲ್ಗೊಂಡು ಮಾಹಿತಿ ಹಂಚಿಕೊಂಡರು. ಕಾರ್ಯಕ್ರಮದ ನಿರೂಪಕರಾಗಿ ಮೂಡಬಿದ್ರಿಯ ಕಾಕುಂಜೆ ಆಯುರ್ವೇದಿಕ್ ವೆಲ್ ನೆಸ್ ಕ್ಲಿನಿಕ್ ನ ಡಾ.ಅನುರಾಧಾ ಕೆ.ಸಿ ಪಾಲ್ಗೊಂಡರು.
ಕಾರ್ಯಕ್ರಮವನ್ನು NewsKarnataka.com ನ ಯೂಟ್ಯೂಬ್ ಚಾನೆಲ್ನಲ್ಲಿ ಪ್ರೀಮಿಯರ್ ಮಾಡಲಾಯಿತು.
ಡಾ. ಗೌರವ್ ಗೊಮೆಜ್ ಅವರು ನೋವು ಔಷಧಿ ಎಂದರೇನು, ಅದರ ಮಹತ್ವ ವಿವರಿಸಿದರು. ಮೂರು ತಿಂಗಳಿಗಿಂತ ಹೆಚ್ಚಿನ ಕಾಲ ಅಸ್ತಿಪಂಜರದ ನೋವು ಉಂಟಾದಲ್ಲಿ ಈ ಬಗ್ಗೆ ಹೆಚ್ಚಿನ ಚಿಕಿತ್ಸೆ, ಪರಿಶೀಲನೆ ಅಗತ್ಯ ಎಂದು ವಿವರಿಸಿದರು. ದೇಹಕ್ಕೆ ಉಂಟಾಗುವ ನೋವಿನ ಸಂಜ್ಞೆ ಮೆದುಗಳಿಗೆ ರವಾನೆಯಾಗುತ್ತದೆ. ನೋವು ಔಷಧಿ ಹಾಗೂ ಇತರ ಔಷಧಿಗಳ ವ್ಯತ್ಯಾಸವನ್ನು ಡಾ.ಗೌರವ್ ಗೋಮೆನ್ ವಿವರಿಸಿದರು.
ವಿವಿಧ ಕಾಯಿಲೆಗಳಿಗೆ ನೋವು ನಿವಾರಕ ಶಾಖೆಯಲ್ಲಿ ಒಳಗೊಂಡಿರುವ ಮೌಲ್ಯಮಾಪನ, ಪರೀಕ್ಷೆ, ಔಷಧಿ ಮತ್ತು ಚೇತರಿಕೆಯ ಪ್ರಕ್ರಿಯೆಯ ಬಗ್ಗೆ ವೈದ್ಯರು ವಿವರಿಸಿದರು.
ಡಾ.ಗೌರವ್ ಗೊಮೆಜ್ ಅವರು ಔಷಧಿ ಕ್ಷೇತ್ರಕ್ಕೆ ಪ್ರವೇಶಿಸಲು ತಮ್ಮ ಸ್ಫೂರ್ತಿಯ ಕುರಿತು ಮಾತನಾಡುತ್ತಾ, “ನನ್ನ ಪೋಷಕರು ರಕ್ಷಣಾ ಕ್ಷೇತ್ರದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸಿದರು ಮತ್ತು ಅವರು ನನ್ನನ್ನು ಈ ವೃತ್ತಿಗೆ ಬರಲು ಪ್ರೇರೇಪಿಸಿದರು” ಎಂದು ಅನಿಸಿಕೆ ಹಂಚಿಕೊಂಡರು.
ನಿಮ್ಮ ಆರೋಗ್ಯದ ಜವಾಬ್ದಾರಿ ನಿಮ್ಮ ಕೈಯಲ್ಲಿಯೇ ಇದೆ ಎಂದು ಡಾ.ಗೌರವ್ ಗೋಮೆಜ್ ತಿಳಿಸಿದರು. ವೈದ್ಯರಿಗೆ ಡಾ. ಅನುರಾಧಾ ಕೆ.ಸಿ ಕೃತಜ್ಞತೆ ಸಲ್ಲಿಸಿದರು.