ಮಂಗಳೂರು: ಮತಾಂತರ ಕಾಯ್ದೆ ರದ್ದು ಮಾಡಿದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಿಡಿ ಕಾರಿದ್ದಾರೆ. ಟ್ಬೀಟ್ ಮೂಲಕ ಕಾಂಗ್ರೆಸ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಕಾಂಗ್ರೆಸ್ ಸರ್ಕಾರ ಘೋಷಿಸಿದ ಗ್ಯಾರಂಟಿಗಳನ್ನ ಜನರಿಗೆ ತಲುಪಿಸಿಲ್ಲ. ಆದರೆ ಹಿಂದೂ ಸಮಾಜದ ಮೇಲೆ ದ್ವೇಷ ಕಾರಲು ಆರಂಭಿಸಿದೆ.
ಬಿಜೆಪಿ ಸರ್ಕಾರ ಜಾರಿಗೆ ತಂದ ಮತಾಂತರ ನಿಷೇಧ ಕಾನೂನನ್ನು ವಜಾ ಮಾಡಿದ್ದಿರಿ. ಈ ಮೂಲಕ ತಮ್ಮ ಹಿಂದೂ ದ್ವೇಷವನ್ನು ಬಹಿರಂಗಪಡಿಸಿದ್ದೀರಿ. ಈ ವಿಷಯದಲ್ಲಿ ನಿಮಗೆ ಇಷ್ಟು ಆತುರವೇಕೆ. ಯಾವ ಒತ್ತಡವಿತ್ತು. ಹೈಕಮಾಂಡ್ ಒತ್ತಡವೇ..? ಸಿದ್ದರಾಮಯ್ಯನವರೇ..? ಎಂದು ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಅಲ್ಪಸಂಖ್ಯಾತರ ಓಲೈಕೆಗಾಗಿ ಸದಾ ಹಿಂದೂ ವಿರೋಧಿ ನೀತಿಯನ್ನ ಅನುಸರಿಸುತ್ತಿದ್ದೀರಿ. ಬಲವಂತದ ಮತಾಂತರ, ಲವ್ ಜಿಹಾದ್ ನಂತಹ ಪ್ರಕರಣಗಳಿಗೆ ಗ್ರೀನ್ ಸಿಗ್ಮಲ್ ನೀಡಿದ್ದಿರಿ ಟ್ವೀಟ್ನಲ್ಲಿ ಹೇಳಿದ್ದಾರೆ.