ಮಂಗಳೂರು: ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಅ.25ರ ಮಂಗಳವಾರ ದೇವಾಲಯವನ್ನು ಮುಚ್ಚಲಾಗುವುದು ಎಂದು ಶ್ರೀ ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ಆಡಳಿತ ಮಂಡಳಿ ತಿಳಿಸಿದೆ.
ಅಕ್ಟೋಬರ್ ೨೫ ರಂದು ದೇವಾಲಯದಲ್ಲಿ ಯಾವುದೇ ಸೇವೆಗಳು ಅಥವಾ ಪ್ರಸಾದವನ್ನು ನೀಡಲಾಗುವುದಿಲ್ಲ.
ಅಕ್ಟೋಬರ್ 26 ರ ಬುಧವಾರ ಬೆಳಿಗ್ಗೆ 9.00 ಗಂಟೆಯಿಂದ ದೇವಾಲಯವು ಭಕ್ತರಿಗೆ ತೆರೆದಿರುತ್ತದೆ ಮತ್ತು ಎಂದಿನಂತೆ ಸೇವೆಗಳು ನಡೆಯಲಿವೆ. ಗ್ರಹಣವು ಸಂಜೆ 5.11 ಕ್ಕೆ ಪ್ರಾರಂಭವಾಗಿ ಸಂಜೆ 6.28 ಕ್ಕೆ ಕೊನೆಗೊಳ್ಳುತ್ತದೆ.