ಬೆಳ್ತಂಗಡಿ: ಯುವಕನೋರ್ವ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದ ಘಟನೆ ಕುವೆಟ್ಟು ಗ್ರಾಮದ ಮಂಜುಬೆಟ್ಟು ಎಂಬಲ್ಲಿ ಗುರುವಾರ ನಡೆದಿದೆ.
ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ನೇರೊಳ್ದಪಲಿಕೆ ಎಂಬಲ್ಲಿನ ನಿವಾಸಿ ಚರುಂಬೆ ಎಂಬವರ ಪುತ್ರ ಬಾಬು (34) ಎಂಬವರು ಬಾವಿಗೆ ಬಿದ್ದು ಮೃತಪಟ್ಟಿದ್ದಾರೆ.
ಪಿಲಿಚಂಡಿಕಲ್ಲು ಸಮೀಪದ ಮಂಜುಬೆಟ್ಟುವಿನ ಅಕ್ಕನ ಮನೆಗೆ ಬಂದಿದ್ದ ಇವರು ಫಿಟ್ಸ್ ರೋಗ ಪೀಡಿತರಾಗಿದ್ದು ದೊಡ್ಡಮ್ಮನ ಮನೆಯ ಬಾವಿಯಿಂದ ನೀರು ಸೇದುತ್ತಿದ್ದ ವೇಳೆ ಫಿಟ್ಸ್ ಖಾಯಿಲೆ ಶುರುವಾಗಿ ಬಾವಿಗೆ ಬಿದ್ದು ಮೃತಪಟ್ಟರು.
ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.