ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಸರಣಿ ಕೊಲೆ ಪ್ರಕರಣ ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಅವರೇ ಪ್ರಮುಖ ಆರೋಪಿ ಹೀಗಾಗಿ ತಕ್ಷಣ ಸಿಎಂ ಬೊಮ್ಮಾಯಿ ರಾಜಿನಾಮೆ ನೀಡಬೇಕು ಎಂದು ಎಸ್ ಡಿ ಪಿ ಐ ರಾಜ್ಯ ಸಮಿತಿಯ ಆಗ್ರಹಮಾಡಿದೆ.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಸುದ್ದಿ ಗೋಷ್ಠಿ ನಡೆಸಿದ ಆಥಾವುಲ್ಲಾ ಜೋಕಟ್ಟೆ ಸಿಎಂ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಕ್ರಿಯೆಗೆ ಪ್ರತಿಕ್ರಿಯೆ ಇದ್ದೇ ಇರುತ್ತದೆ ಎಂಬ ಸಿಎಂ ಹೇಳಿಕೆಯ ಬಳಿಕ ಜಿಲ್ಲೆಯಲ್ಲಿ ಅಶಾಂತಿ ಸೃಷ್ಠಿಯಾಗಿದೆ. ಸರ್ಕಾರದ ಹಗರಣಗಳ ದಿಕ್ಕು ತಪ್ಪಿಸಲು ಗಲಭೆ ಸೃಷ್ಟಿಸುವ ಹುನ್ನಾರ ಮಾಡಿದ್ದಾರೆ.
ಜಿಲ್ಲೆಯಲ್ಲಿ ನಡೆದ ಎಲ್ಲಾ ಕೊಲೆಗಳ ನಿಷ್ಪಕ್ಷಪಾತವಾಗಿ ತನಿಕೆಯಾಗಲಿ. ಪರಿಹಾರದ ವಿಚಾರದಲ್ಲೂ ಸರ್ಕಾರ ತಾರತಮ್ಯ ಮಾಡುತ್ತಿದೆ ಇದು ಸರಿ ಅಲ್ಲ ಎಂದರು.
ಪ್ರಕರಣಗಳನ್ಬು ಎನ್ ಐಎ ಗೆ ನೀಡುವುದಾದರೆ ಎಲ್ಲ ಪ್ರಕರಣಗಳನ್ನು ನೀಡಲಿ,ಒಂದು ಸಮುದಾಯಕ್ಕೆ ಒಂದು ನ್ಯಾಯ ಮಾಡುವುದು ಬೇಡ ಎಲ್ಲರಿಗೂ ಒಂದೇ ನ್ಯಾಯ ಸಿಗಲಿ.ಪ್ರವೀಣ್ ಮನೆಗೆ ಹೋದವರಿಗೆ ಮಸೂದ್ ,ಫಾಸಿಲ್ ಮನೆ ಕಾಣುತ್ತಿಲ್ಲವೇ? ಈ ರೀತಿಯ ನಡವಳಿಕೆಯಿಂದ ಒಂದು ಸಮೂದಾಯ ಹತಾಶೆಗೆ ಒಳಗಾಗಬಹುದು ಎಂದರು.