ಮಂಗಳೂರು: ದ್ವೇಷಕ್ಕೆ ದ್ವೇಷ ಉತ್ತರವಲ್ಲ, ದ್ವೇಷಕ್ಕೆ ಪ್ರೀತಿ,ಹಿಂಸೆಗೆ ಅಹಿಂಸೆ ಉತ್ತರ. ಜಿಲ್ಲೆಯಲ್ಲಿ ಪ್ರಚೋದನಾಕಾರಿ ಭಾಷಣ ನಿರಂತರ ಆಗುತ್ತಿದೆ ಇದರಿಂದ ಹತ್ಯೆಗಳು ನಡೆಯುತ್ತಿವೆ ಇಂತಹ ಹತ್ಯೆ ಯಲ್ಲಿ ಸಿಗುವ ಉತ್ತರ ಶವಗಳು,ಹಾಗೂ ಜೈಲಿಗೆ ಹೋಗೋದು ಎಂದು ರಮಾನಾಥ ರೈ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಸತ್ತವರಲ್ಲಿ ಹಿಂದುಳಿದ ಹಿಂದೂಗಳು ಹಾಗೂ ಮುಸ್ಲಿಂ ಹುಡುಗರು,ಜೈಲಿಗೆ ಹೋದವರು ಹಿಂದುಳಿದ ಹಿಂದೂಗಳು ಹಾಗೂ ಮುಸ್ಲೀಮರು. ಆದರೆ ಪ್ರಚೋದನಾ ಭಾಷಣ ಮಾಡುವುದು ಸಮಾಜದಲ್ಲಿ ಮುಂದುವರಿದ ವರ್ಗ ಇದು ರಾಜಕೀಯದಲ್ಲಿ ಸರಕಾರದ ನಿರ್ಲಕ್ಷ ಎದ್ದು ಕಾಣ್ತದೆ. ಪೋಲಿಸ ರಿಂದ ನೈಜ ಕೊಲೆಗಾರ ಬಂಧನ ಹಾಗೂ ಶಿಕ್ಷೆ ಆಗಬೇಕು ಶಿಕ್ಷೆಗೆ ಯಾವುದೇ ಜಾತಿ ಧರ್ಮ ಬಣ್ಣ ಬಾರಬಾರದು.ಹತ್ಯೆ ಯಾರೇ ಮಾಡಿದ್ರೂ ಆರೋಪಿಗಳಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಅವರು ಹೇಳಿದರು.
ಪ್ರವೀಣ್ ಹತ್ಯೆ ಮಾಡಿದವರನ್ನು ಶೀಘ್ರವಾಗಿ ಬಂಧಿಸಿ ಸರಿಯಾದ ಶಿಕ್ಷೆ ನೀಡಬೇಕು. ಈ ಹಿಂದಿ ಕೋಮು ಘರ್ಷಣೆ.ಈಗ ನಡೆಯುತ್ತಿರುವುದು ಟಾರ್ಗೇಟ್ ಹತ್ಯೆ. ಪ್ರಾಣ ಕಳೆದು ಕೊಳ್ಳುವವರು ದುರ್ಬಲ ವರ್ಗದವರು. ನಮ್ಮ ಜಿಲ್ಲೆಯಲ್ಲಿ ಇಂತಹ ಘಟನೆ ಮುಕ್ತಾಯವಾಗಬೇಕು.
ಮಸೂದ್, ಪ್ರವೀಣ್ ಹತ್ಯೆಗೆ ಸಂಬಂಧಿಸಿ ಯಾವುದೇ ತಾರತಮ್ಯ ಮಾಡದೆ ಶಿವಮೊಗ್ಗದಲ್ಲಿ ಹರ್ಷ ಕುಟುಂಬಕ್ಕೆ ನೀಡಿದಂತೆ ಕನಿಷ್ಠ ಸರಕಾರ ಶಿವಮೊಗ್ಗದಲ್ಲಿ ಕೊಟ್ಟ ಹಾಗೆ 25 ಲಕ್ಷ ಕೊಡಬೇಕು ಎಂದು ಸರಕಾರದ ಮೇಲೆ ಒತ್ತಾಯ ಮಾಡುತ್ತೇನೆ ಎಂದರು.
ಸುಳ್ಯ ದಲ್ಲಿ ನಡೆದ ಮಸೂದ್ ಮತ್ತು ಪ್ರವೀಣ್ ನೆಟ್ಟಾರು ಪ್ರಕರಣದಲ್ಲಿ ಸರಕಾರ ನಿರ್ಲಕ್ಷ್ಯ ವಹಿಸಿ ರುವುದು ಕಂಡು ಬರುತ್ತದೆ. ಸರ್ಕಾರ ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈ ಗೊಳ್ಳುವಲ್ಲಿ ವಿಫಲವಾಗಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಈ ಹತ್ಯೆಗಳು ನಡೆಯುತ್ತವೆ. ಹಣ, ಅಧಿಕಾರದ ಕಾರಣಕ್ಕಾಗಿ ಈ ರೀತಿಯ ಹತ್ಯೆ ಗೆ ಪ್ರಚೋದನೆ ನೀಡುವವರ ವಿರುದ್ಧ ಕಠಿಣ ಕ್ರಮ ಕೈ ಗೊಂಡರೆ ಜಿಲ್ಲೆ ಯಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಸಾಧ್ಯ.
ಪ್ರಚೋದನಕಾರಿ ಭಾಷಣ ಮಾಡುವವರು ಗಲಭೆಗಳ ಹಿಂದೆ ಇರುತ್ತಾರೆ. ಆದರೆ ಇಂತಹ ಪ್ರಕರಣ ನಡೆದಾಗ ಹಿಂದುಳಿದ ವರ್ಗ, ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರು, ಕೆಲವು ಅಮಾಯಕರು ಬಲಿಯಾಗುವುದು,ಜೈಲು ಸೇರುವುದು ನಡೆಯುತ್ತಿದೆ ಎಂದರು.