News Karnataka Kannada
Monday, May 06 2024
ಮಂಗಳೂರು

ಮಂಗಳೂರು: ಮತ್ತೆ ಪರ್ಮಿಟ್‌ ರಾಜ್‌, ಸರಕಾರಿ ಸಾರಿಗೆಗೆ ಕಂಟಕ ಖಾಸಗಿ ವಲಯದಲ್ಲೂ ಆತಂಕ

Bus free travel guarantee for coastal people
Photo Credit : Facebook

ಮಂಗಳೂರು: ರಾಜ್ಯ ಸರ್ಕಾರ ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿರುವ ಅಧಿಸೂಚನೆಯು ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಸಾಧ್ಯತೆ ಇದೆ. ಸರ್ಕಾರಿ ನಿಗಮದ ಸಂಸ್ಥೆಗಳ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಅಧಿಸೂಚನೆಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿದೆ.

ಹೊಸ ಅಧಿಸೂಚನೆಯಲ್ಲಿ 2019ರ ಸಮಗ್ರ ಕರ್ನಾಟಕ ಯೋಜನೆಯಲ್ಲಿ ಒಳಗೊಂಡ ಎಲ್ಲ ಖಾಸಗಿ ಬಸ್‌ಗಳ ಸಂಚಾರದ ಅಂತರವನ್ನು ಹೆಚ್ಚುವರಿಯಾಗಿ 24 ಕಿ.ಮೀ ವರೆಗೆ ವಿಸ್ತರಿಸಲು ಹೊಸ ಅಧಿಸೂಚನೆಯಲ್ಲಿಅವಕಾಶ ಕಲ್ಪಿಸಿಕೊಡಲಾಗಿದೆ.

ಈಗ ಕ್ರಮಬದ್ಧವಾಗಿ ನಡೆಯುತ್ತಿರುವ ಸಾರಿಗೆ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಬಹುದು. ಸ್ವತಃ ಖಾಸಗಿಯವರೇ ಹೊಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಬಸ್‌ ಮಾಲೀಕರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನೇ ಬುಡಮೇಲು ಮಾಡುವಂತಹ ಅಧಿಸೂಚನೆಯನ್ನು ರಾಜ್ಯ ಸರಕಾರ ತರಾತುರಿಯಲ್ಲಿ ಜಾರಿಗೊಳಿಸಲು ಮುಂದಾಗಿದೆ. ಇದಕ್ಕೆ ಸಾರ್ವಜನಿಕ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಕಲ್ಯಾಣ ಕರ್ನಾಟಕ, ಬಿಎಂಟಿಸಿಗಳು ತೀವ್ರ ಆಕ್ಷೇಪಣೆ ಸಲ್ಲಿಸಿವೆ.

ಹೊಸ ಅಧಿಸೂಚನೆಯಲ್ಲಿ 2019ರ ಸಮಗ್ರ ಕರ್ನಾಟಕ ಯೋಜನೆಯಲ್ಲಿ ಒಳಗೊಂಡ ಎಲ್ಲ ಖಾಸಗಿ ಬಸ್‌ಗಳ ಸಂಚಾರದ ಅಂತರವನ್ನು ಹೆಚ್ಚುವರಿಯಾಗಿ 24 ಕಿ.ಮೀ ವರೆಗೆ ವಿಸ್ತರಿಸಲು ಹೊಸ ಅಧಿಸೂಚನೆಯಲ್ಲಿಅವಕಾಶ ಕಲ್ಪಿಸಿಕೊಡಲಾಗಿದೆ. ಈ ಅಧಿಸೂಚನೆಯಿಂದ ಸರಕಾರಿ ಸ್ವಾಮ್ಯದ ಸಂಸ್ಥೆಗಳ ಆದಾಯಕ್ಕೆ ದೊಡ್ಡ ಹೊಡೆತ ಬೀಳಲಿದೆ.

ರಾಜ್ಯದಲ್ಲಿ ಸಾರಿಗೆ ವ್ಯವಸ್ಥೆಯನ್ನು ರಾಷ್ಟ್ರೀಕರಣಗೊಳಿಸಿದ ಬಳಿಕ ಹೊಸದಾಗಿ ನೋಂದಣಿಯಾದ ಬಸ್‌ಗಳಿಗೆ ಬೆಂಗಳೂರು ಪ್ರವೇಶಕ್ಕೆ ಅವಕಾಶವಿರಲಿಲ್ಲ. ಹೊಸ ಆದೇಶದ ಪ್ರಕಾರ ಎಲ್ಲ ಬಸ್‌ಗಳಿಗೂ ಬೆಂಗಳೂರು ಪ್ರವೇಶಕ್ಕೆ ಅವಕಾಶ ಸಿಗಲಿದೆ. ಇದರಿಂದ ರಾಷ್ಟ್ರೀಕೃತ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗಲಿದೆ ಎನ್ನುತ್ತಾರೆ ಹಿರಿಯ ಅಧಿಕಾರಿಗಳು.

ಖಾಸಗಿ ಸಾರಿಗೆ ವ್ಯವಸ್ಥೆಯಲ್ಲಿಈಗ ಇರುವ ಮಾರ್ಗವನ್ನೇ ವಿಸ್ತರಣೆ ಅಥವಾ ಡೈವರ್ಟ್‌ ಮಾಡಿ 24 ಕಿ.ಮೀ.ವರೆಗೆ ವಿಸ್ತರಣೆ ಮಾಡಿಕೊಳ್ಳಲು ಅವಕಾಶವಿದೆ. ಇದರಿಂದ ಈಗ ಕ್ರಮಬದ್ಧವಾಗಿ ನಡೆಯುತ್ತಿರುವ ಸಾರಿಗೆ ವ್ಯವಸ್ಥೆ ಅಲ್ಲೋಲ ಕಲ್ಲೋಲವಾಗಬಹುದು. ಸ್ವತಃ ಖಾಸಗಿಯವರೇ ಹೊಡೆದಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಲಿದೆ ಎನ್ನುತ್ತಾರೆ ಬಸ್‌ ಮಾಲೀಕರು.

1988 ಮೋಟಾರು ಕಾಯಿದೆ ಅಧ್ಯಾಯ 5ರ ಕಾನೂನು ಪ್ರಕಾರ ಹೊಸ ತಿದ್ದುಪಡಿ ಅಧಿಸೂಚನೆ ಮಾಡಲಾಗಿದೆ. ಆದರೆ ಕಾಯಿದೆಯ 6ರ ಸೆಕ್ಷನ್‌ 98ರಲ್ಲಿಅಧ್ಯಾಯ 5ರಲ್ಲಿದ್ದ ಯಾವುದೇ ಅವಕಾಶಗಳು ಅಧ್ಯಾಯ 6ಕ್ಕೆ ಬರುವಾಗ ಅನ್ವಯವಾಗುವುದಿಲ್ಲ. ರಾಷ್ಟ್ರೀಕೃತ ಯೋಜನೆ 2019ನ್ನು ಜಾರಿಗೆ ತಂದ ಮೇಲೆ ಈ ರೀತಿ ತಿದ್ದುಪಡಿಗೆ ಕಾನೂನಿನಲ್ಲಿಅವಕಾಶವಿಲ್ಲ. ಈ ಮೂಲಕ ನಿಯಮ ಉಲ್ಲಂಘಿಸಿ ಅಧಿಸೂಚನೆ ಹೊರಡಿಸಲಾಗಿದೆ ಎಂಬ ಆಕ್ಷೇಪಗಳು ಕೇಳಿಬರುತ್ತಿವೆ.

ಸರಕಾರದ ಸಾರ್ವಜನಿಕ ಸಂಸ್ಥೆಗಳಾಗಲಿ, ಖಾಸಗಿಯವರಾಗಲಿ ಪರವಾನಗಿ ವಿಸ್ತರಣೆಗೆ ಯಾವುದೇ ಒತ್ತಡ ಹಾಕಿಲ್ಲ. ಹಾಗಿರುವಾಗ ಈ ಅಧಿಧಿಸೂಚನೆ ಯಾರ ಹಿತಾಸಕ್ತಿಗಾಗಿ ಎನ್ನುವುದು ಯಕ್ಷಪ್ರಶ್ನೆಯಾಗಿದೆ. ರಾಷ್ಟ್ರೀಕೃತ ಯೋಜನೆ ಬಂದ ಮೇಲೆ ಯಾವ ಖಾಸಗಿ ಬಸ್‌ ಮಾಲೀಕರು ತಮಗೆ ಹೊಸ ಪರ್ಮಿಟ್‌ ನೀಡಿ ಎಂದು ಆರ್‌ಟಿಒಗೆ ಅರ್ಜಿ ಸಲ್ಲಿಸುತ್ತಿಲ್ಲ. ಅದರ ಪುನರಾರಂಭಕ್ಕೆ ಅಧಿಕಾರಿಗಳೇ ಚುನಾವಣೆ ಘೋಷಣೆಗೆ ಮುನ್ನ ಈ ಅಧಿಸೂಚನೆಗೆ ಒಲವು ವ್ಯಕ್ತಪಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದೆ.

ರಾಜ್ಯ ಸರಕಾರ 2023ರ ಫೆ.8 ರಂದು ಅಧಿಧಿಸೂಚನೆ ಕರಡು ಪ್ರತಿ ಹೊರಡಿಸಿತ್ತು. ಮಾ.10ರೊಳಗೆ ಆಕ್ಷೇಪ ಸಲ್ಲಿಸಲು ಅವಕಾಶ ನೀಡಲಾಗಿತ್ತು. ವಿಶೇಷ ಎಂದರೆ ರಾಜ್ಯ ಸರಕಾರ ಆಕ್ಷೇಪಣೆಗೂ ಕಾಯದೆ ಮಾ.10ರಂದೇ ಗೆಜೆಟ್‌ ನೋಟಿಫಿಕೇಶನ್‌ ಹೊರಡಿಸಿದೆ. ನಿಯಮ ಪ್ರಕಾರ ಆಕ್ಷೇಪಣೆ ಸಲ್ಲಿಸಿದ ಬಳಿಕ 2 ವಾರ ವಿಚಾರಣೆಗೆ ಅವಕಾಶ ನೀಡಬೇಕು. ಮಾ.24ರಂದೇ ವಿಚಾರಣೆಗೆ ದಿನಾಂಕ ನಿಗದಿ ಮಾಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು