ಮಂಗಳೂರು: ಪಿಲಿಕುಳದ ಡಾ. ಶಿವರಾಮ ಕಾರಂತ ಜೈವಿಕ ಮೃಗಾಲಯದಲ್ಲಿ ಎರಡು ಹುಲಿಗಳ ನಡುವೆ ಇತ್ತೀಚೆಗೆ ಕಾಳಗ ನಡೆದಿತ್ತು. ಈ ಪೈಕಿ ಗಾಯಗೊಂಡಿದ್ದ ಒಂದು ಹುಲಿ ಸಾವನ್ನಪ್ಪಿದೆ. ಗಾಯಗೊಂಡಿದ್ದ ಹುಲಿ ಇತ್ತೀಚೆಗೆ ಚೇತರಿಕೆ ಕಂಡಿತ್ತು. ಆದರೆ ಜೂನ್ 7ರಂದು ಮುಂಜಾನೆ ಹೃದಯಾಘಾತ ದಿಂದ ಒಂದು ಹುಲಿ ಸಾವನ್ನಪ್ಪಿದೆ. ಮೃತಪಟ್ಟ ಹುಲಿಯ ಮರಣೋತ್ತರ ಪರೀಕ್ಷೆ ನಡೆಯುತ್ತಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪಿಲಿಕುಳ ಜೈವಿಕ ಉದ್ಯಾನವನದ ನಿರ್ದೇಶಕ ಜಯಪ್ರಕಾಶ್ ಭಂಡಾರಿ, ಮೂರು ದಿನಗಳ ಹಿಂದೆ ನಡೆದಿದ್ದ ಹುಲಿಗಳ ಗಲಾಟೆ ನಡೆದಿತ್ತು ಎಂದು ತಿಳಿಸಿದ್ದಾರೆ.
ಬೇಟೆಗೆ ಬಂದ ಹುಲಿ ಕಾಳಗ ನಡೆಸಿದೆ. ಕಾಳಗದಲ್ಲಿ ಗಾಯಗೊಂಡಿದ್ದ ಒಂದು ೧೫ ವರ್ಷ ಪ್ರಾಯದ ಹೆಣ್ಣು ಹುಲಿ ಮೃತಪಟ್ಟಿದೆ. ವೈದ್ಯರು ಹುಲಿಗೆ ಸೂಕ್ತ ಚಿಕಿತ್ಸೆ ನೀಡಿದ್ದರೂ ಜೂನ್ 7ರಂದು ಹುಲಿ ಮೃತಪಟ್ಟಿದೆ ಎಂದು ತಿಳಿಸಿದ್ದಾರೆ.