ಮಂಗಳೂರು: ಡಾ. ಬಿ ಸಿ ರೋಯ್ ಅವರ ಜನ್ಮ ದಿನದ ಸ್ಮರಣಾರ್ಥ ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜಿನಲ್ಲಿ ಜುಲೈ 01, ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಯಿತು.
ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಯ ನಿರ್ದೇಶರಕರಾದ ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಫಾದರ್ ಮುಲ್ಲರ್ ಹೋಮಿಯೋಪಥಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ ಆಡಳಿತಾಧಿಕಾರಿ ರೆ. ಫಾ. ರೋಶನ್ ಕ್ರಾಸ್ತಾ, ಗೌರವ ಅತಿಥಿಗಳಾದ ರೆ. ಫಾ. ಜೋನ್ ವಾಸ್, ಪ್ರಾಂಶುಪಾಲರು ಡಾ ಇ. ಎಸ್. ಜೆ ಪ್ರಭುಕಿರಣ್, ಉಪಪ್ರಾಂಶುಪಾಲರು ಡಾ ವಿಲ್ಮಾ ಮೀರಾ ಡಿಸೋಜಾ, ವೈದ್ಯಕೀಯ ಅಧೀಕ್ಷಕ ಡಾ ಗಿರೀಶ್ ನಾವಡ, ಸ್ನಾತಕೋತ್ತರ ಶೈಕ್ಷಣಿಕ ಉಸ್ತುವಾರಿ ಡಾ ಜ್ಯೋಶ್ನಾ ಶಿವಪ್ರಸಾದ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಆಡಳಿತಾಧಿಕಾರಿ ರೆ. ಫಾ. ರೋಶನ್ ಕ್ರಾಸ್ತಾ ಎಲ್ಲರನ್ನು ಸ್ವಾಗತಿಸಿ ವೈದ್ಯರಿಗೆ ಶುಭ ಹಾರೈಸಿದರು. ನಿರ್ದೇಶಕರು ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊ, ಡಾ ಬಿ ಸಿ ರೋಯ್ ಮತ್ತು ರೆ. ಫಾ. ಆಗಸ್ಟಸ್ ಮುಲ್ಲರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸೂಚಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಗೆ ಮತ್ತು ಸಮುದಾಯ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಗಾಗಿ ಹೋಮಿಯೋಪತಿ ಫಾರ್ಮಸಿ ವಿಭಾಗದ ಪ್ರೊಫೆಸರ್ ಮತ್ತು ಪಿಜಿ ಗೈಡ್ ಆಗಿರುವ ಡಾ ಜೋಸೆಫ್ ಥೋಮಸ್, ಅವರನ್ನು ಸನ್ಮಾನಿಸಲಾಯಿತು. ಡಾ ರಂಜನ್ ಬ್ರಿಟ್ಟೊ ಮತ್ತು ಡಾ ಸ್ಕಂದನ್ ಕುಮಾರ್ ಅವರು ಸಿದ್ಧಪಡಿಸಿದ ಸನ್ಮಾನ ಗೌರವಾರ್ಥ ಉಲ್ಲೇಖವನ್ನು ಡಾ ವಿವೇಕ್ ಎಸ್ ವಾಚಿಸಿದರು. ಡಾ ಜೋಸೆಫ್ ಥೋಮಸ್ ಅವರು ಕಾಲೇಜಿನ ಅಧ್ಯಾಪಕರಾಗಿ ತಮ್ಮ ಅನುಭವನ್ನು ಹಂಚಿಕೊಂಡರು. ರೋಗಿಗಳಿಗೆ ಚಿಕಿತ್ಸೆ ನೀಡಲು ತಮ್ಮ ಪ್ರಾಣವನ್ನು ಪಣಕ್ಕಿಡುವಂತಹ ಉತ್ತಮ ವೃತಿಯ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಗೌರವಾನ್ವಿತ ಅತಿಥಿಗಳಾದ ರೆ. ಫಾ. ಜೋನ್ ವಾಸ್ ಅವರು ತಮ್ಮ ಸಂದೇಶವನ್ನು ನೀಡಿದರು. ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳು ನೀಡುವ ಸೇವೆಗೆ ಗೌರವಾರ್ಥವಾಗಿ ರೆ. ಫಾ. ರಿಚರ್ಡ್ ಅಲೋಶಿಯಸ್ ಕುವೆಲ್ಲೊಅವರು ಸ್ಮರಣಿಕೆ ನೀಡಿ ಗೌರವಿಸಿದರು. ಹಾಗೂ ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ವೈದ್ಯರು ಮತ್ತು ಪಿಜಿ ವಿದ್ಯಾರ್ಥಿಗಳ ಸೇವೆಯನ್ನು ಶ್ಲಾಘಿಸಿದರು.