ಮಂಗಳೂರು: ಅತ್ಯುತ್ತಮ ಕೈಗಾರಿಕಾ ಸುರಕ್ಷತಾ ನಿರ್ವಹಣೆಗಾಗಿ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಸಂಸ್ಥೆಯ ಅರೋಮ್ಯಾಟಿಕ್ಸ್ ಘಟಕವು ಮೊದಲ ಬಹುಮಾನ ಪಡೆದಿದೆ. ತೈಲ ಉದ್ಯಮಗಳಲ್ಲಿ ಸುರಕ್ಷತಾ ನಿಯಮಗಳ ಅನುಸರಣೆಗಾಗಿ 2023ನೇ ಸಾಲಿನ ಪ್ರಶಸ್ತಿ ದೊರೆತಿದೆ.
ಅತ್ಯುತ್ತಮ ಸುರಕ್ಷತಾ ನಿರ್ವಹಣೆಗಾಗಿ ಬಹುಮಾನ ನೀಡಲಾಗಿದೆ. ವಿಪತ್ತು ತಗ್ಗಿಸುವಿಕೆ ಮತ್ತು ತುರ್ತು ಪರಿಸ್ಥಿತಿ ನಿರ್ವಹಣೆಯ ಅತ್ಯುತ್ತಮ ಸಾಧನೆ ಗುರುತಿಸಿ ಪ್ರಶಸ್ತಿ ನೀಡಲಾಗಿದೆ.
ರಾಷ್ಟ್ರೀಯ ಸುರಕ್ಷತಾ ದಿನದ ಅಂಗವಾಗಿ ಮಾ.4ರಂದು ಹಿಂದುಸ್ತಾನ್ ಏರೋನಾಟಿಕ್ಸ್ ಸಂಸ್ಥೆ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ರಾಜ್ಯ ಕಾರ್ಖಾನೆಗಳು, ಬಾಯ್ಲರ್, ಕೈಗಾರಿಕಾ ಸುರಕ್ಷತಾ ಇಲಾಖೆ ವತಿಯಿಂದ ಪ್ರಶಸ್ತಿ ನೀಡಲಾಗಿದೆ.
ಸಮಾರಂಭದಲ್ಲಿ ಎಂಆರ್ಪಿಎಲ್ ಸಂಸ್ಥೆ ಇಡಿ (ರಿಫೈನರಿ) ಮುಂಡ್ಕೂರು ಶ್ಯಾಮಪ್ರಸಾದ್ ಕಾಮತ್, ಜಿಜಿಎಂ ( ಮಾರ್ಕೆಟಿಂಗ್, ಯೋಜನೆ) ಬಿ ಸುದರ್ಶನ್, ಸಹಾಯಕ ಮ್ಯಾನೇಜರ್ ( ಎಚ್ಎಸ್ಇ ಮತ್ತು ಎಎಂಪಿ, ಎಸ್) ಕುನಾಲ್ ಸಿಂಗ್ ಸಿಕರ್ವಾರ್, ಎಂಆರ್ ಪಿಎಲ್ ಸಹಾಯಕ ವ್ಯವಸ್ಥಾಪಕ ಯೋಗೇಂದ್ರ ಬಾಬು ಪ್ರಶಸ್ತಿ ಸ್ವೀಕರಿಸಿದರು. ಸಿಂಜಿನ್ ಇಂಟರ್ನ್ಯಾಷನಲ್ ಸಂಸ್ಥೆಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಮಹೇಶ್ ಭಾಲ್ಗಟ್ ಪ್ರಶಸ್ತಿ ಪ್ರದಾನ ಮಾಡಿದರು.
ಕಾರ್ಖಾನೆ, ಬಾಯ್ಲರ್, ಕೈಗಾರಿಕಾ ಸುರಕ್ಷತೆ ಇಲಾಖೆ ನಿರ್ದೇಶಕ ಮತ್ತು ರಾಜ್ಯ ಸುರಕ್ಷತಾ ಸಂಸ್ಥೆ ಕೆ.ಶ್ರೀನಿವಾಸ್ ಕಾರ್ಯದರ್ಶಿ ಕೆ.ಶ್ರೀನಿವಾಸ್ ಉಪಸ್ಥಿತರಿದ್ದರು.