News Karnataka Kannada
Sunday, May 12 2024
ಮಂಗಳೂರು

ಬೆಳ್ತಂಗಡಿ: ಮಲವಂತಿಗೆಯಲ್ಲಿ ಕಾಡಾನೆಗಳಿಂದ ದಾಳಿ , ಕೃಷಿ ಹಾನಿ!

Malavanthige
Photo Credit : By Author

ಬೆಳ್ತಂಗಡಿ : ಮಲವಂತಿಗೆ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕೃಷಿ ತೋಟಗಳಿಗೆ ಕಾಡಾನೆಗಳು ದಾಳಿ ನಡೆಸಿ ಕೃಷಿ ಹಾನಿ ಉಂಟುಮಾಡಿದ ಬಗ್ಗೆ ತಿಳಿದು ಬಂದಿದೆ.

ಇಲ್ಲಿನ ಪಡುಮಣ್ಣು, ಕುದ್ಮುಲ್, ಪಲಂದ್ರೊಟ್ಟು,ಮಿತ್ತೊಟ್ಟು ಪರಿಸರದಲ್ಲಿ ನಾಲ್ಕರಿಂದ ಐದರಷ್ಟು ಕಾಡಾನೆಗಳು ಪ್ರವೇಶಿಸಿದ್ದು, ಈ ಸಮಯ ಇದು ಸ್ಥಳೀಯರ ಗಮನಕ್ಕೆ ಬಂದಿದ್ದು ಆನೆಗಳನ್ನು ಅಟ್ಟಲು ಪ್ರಯತ್ನ ನಡೆಸಿದರು.ಆನೆಗಳ ಗುಂಪು ಇಲ್ಲಿಂದ ಕಡಮಗುಂಡಿ ಪ್ರದೇಶದ ಹೋಗಿರುವ ಕುರಿತು ಸ್ಥಳೀಯರು ತಿಳಿಸಿದ್ದಾರೆ.

ಇದೇ ಪ್ರದೇಶದ ಸಮೀಪದ ತುಳುಪುಳೆ ಪರಿಸರದಲ್ಲಿ ಒಂಟಿ ಸಲಗ ಶುಕ್ರವಾರ ರಾತ್ರಿ ತೋಟಗಳಲ್ಲಿ ಕಾಣಿಸಿಕೊಂಡಿದೆ.
ಆನೆಗಳು ಹಾನಿ ಉಂಟು ಮಾಡಿದ ಪ್ರದೇಶಗಳಿಗೆ ಅರಣ್ಯ ಇಲಾಖೆಯ ವನ್ಯಜೀವಿ ವಿಭಾಗದ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮಲವಂತಿಗೆ ಪರಿಸರದಲ್ಲಿ ಎಲೆ ಚುಕ್ಕಿ ರೋಗ ವಿಪರೀತವಾಗಿದ್ದು ಇದರ ಜತೆ ವನ್ಯಜೀವಿಗಳ ಕಾಟವು ಹೆಚ್ಚುತ್ತಿದ್ದು ಪ್ರದೇಶದ ಕೃಷಿಕರು ಹೈರಾಣಾಗುತ್ತಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
154
Deepak Atavale

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು