ಮಂಗಳೂರು: ಕಾಂಗ್ರೆಸ್ ಮುಖಂಡ, ಮೂಲ್ಕಿ ಮೂಡುಬಿದಿರೆ ಕಾಂಗ್ರೆಸ್ ಚುನಾವಣಾ ಸಮಿತಿ ಉಸ್ತುವಾರಿ ಮಿಥುನ್ ರೈ ಅವರಿಗೆ ಬೆದರಿಕೆ ಕರೆ ಬಂದಿರುವ ಬಗ್ಗೆ ದೂರು ದಾಖಲಾಗಿದೆ.
ಈ ಬಗ್ಗೆ ಮೂಲ್ಕಿ ಕಾಂಗ್ರೆಸ್ ಸಮಿತಿ ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಜೈಶ್ರೀರಾಮ್ ಹೆಸರಿನ ವಾಟ್ಸಪ್ ಗ್ರೂಪ್ನಲ್ಲಿ ಹನಿ ಹಿಂದುಸ್ಥಾನಿ ಮುಂಬೈ ಎಂಬ ಹೆಸರಿನಲ್ಲಿದೆ. ಪೋಸ್ಟ್ನ ಮೊದಲಿಗೆ ಹಿಂದು ದೇಗುಲದ ವಿಷಯದಲ್ಲಿ ಮುಸ್ಲಿಂ ಓಲೈಕೆ ಮಾಡುವ ಕಾಂಗ್ರೆಸ್ ನಾಯಕರಿಗೆ ಇದೊಂದು ಎಚ್ಚರಿಕೆ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಅವರೇ ಎರಡು ವರ್ಷಗಳ ಹಿಂದೆ ಯೋಗಿ ಆದಿತ್ಯನಾಥ ಅವರ ವಿರುದ್ಧ ಅವ್ಯಾಚ್ಚ ಶಬ್ದ ಬಳಸಿದ್ದಕ್ಕೆ ನಿಮ್ಮ ಹೊಟ್ಟೆಯೊಳಗೆ ಗುಂಡು ತುಂಬಿಸುವೇ ಎಂದು ಬೆದರಿಕೆಯೊಡ್ಡಿದ್ದು ನೆನಪಿದೆಯೇ ? ಮತ್ತೊಮ್ಮೆ ನಿಮ್ಮ ಚಾಳಿ ಹಿಂದು ದೇಗುಲದ ಬಗ್ಗೆ ಆರಂಭವಾಗಿದೆ. ಇನ್ನು ನಾನು ಸುಮ್ಮನೆ ಕೂರುವುದು ನನ್ನ ಪವಿತ್ರ ಹಿಂದು ಧರ್ಮಕ್ಕೆ ಅವಮಾನಿಸಿದಂತೆ ನುಡಿದಿರುವ ಮಾತು ಮಾಡಿ ತೋರಿಸಬೇಕಾದೀತು. ಗುಂಡಿನೂಟ ಮಾಡಿಸುವುದೇ ಸೂಕ್ತ ಏಕೆಂದರೆ ಮಾತಿನಲ್ಲಿ ಬಗ್ಗದಿದ್ದರೆ ಮಾಡಿ ತೋರಿಸುವುದೇ ಧರ್ಮ.