ಮಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ಅವರ ಮೆರವಣಿಗೆಯ ವೇಳೆ ನಡೆಸಿದ ಲಾಠಿಚಾರ್ಜ್ ನಲ್ಲಿ ಗಾಯಗೊಂಡ ಕೇರಳದ ಆರ್ ಎಸ್ ಎಸ್ ಕಾರ್ಯಕರ್ತ ಕಾಸರಗೋಡು ಜಿಲ್ಲೆಯ ತಾಳಿಪಡ್ಪುವಿನ ರಮೇಶ್ ಅವರ ಮನೆಗೆ ಸಚಿವ ಅಂಗಾರ ಭೇಟಿ ನೀಡಿದ್ದಾರೆ.
ಲಾಠಿಚಾರ್ಜ್ ವಿಡಿಯೋ ವೈರಲ್ ಆದಾಗಿನಿಂದ ಆರ್ ಎಸ್ ಎಸ್ ನಾಯಕರಿಂದ ಬಿಜೆಪಿ ಮುಖಂಡರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಸುಳ್ಯ ಮತ್ತು ಪುತ್ತೂರಿನ ಬಿಜೆಪಿ ನಾಯಕರ ಜೊತೆ ತೆರಳಿದ ಎಸ್ ಅಂಗಾರ ಅವರಿಗೆ ನೂರಕ್ಕೂ ಅಧಿಕ ಕೇರಳದ ಪೊಲೀಸರಿಂದ ಬಿಗಿ ಭದ್ರತೆ ನೀಡಲಾಯಿತು.