News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಮಾ. 29 ರಂದು ವಿಕಸನ ಬೇಸಿಗೆ ಶಿಬಿರ 2023

Mangaluru: Ma. Evolution Summer Camp 2023 on 29th
Photo Credit : News Kannada

ಮಂಗಳೂರು: ಮಾ.29ರಂದು ನಗರದ ಶ್ರೀ ಭುವನೇಂದ್ರ ಸಭಾಭವನದಲ್ಲಿ ಕೆನರಾ ಕಲ್ಚರಲ್ ಅಕಾಡೆಮಿ ವತಿಯಿಂದ ಆಯೋಜಿಸಲಾದ ಹತ್ತು ದಿನಗಳ ವಿಕಸನ ಬೇಸಿಗೆ ಶಿಬಿರಕ್ಕೆ ಚಾಲನೆ ನೀಡಲಾಯಿತು. ಪುತ್ತೂರು ವಿವೇಕಾನಂದ ಕಾಲೇಜಿನ ಸಂಸ್ಕೃತ ಉಪನ್ಯಾಸಕರಾದ ಡಾಕ್ಟರ್ ಶ್ರೀಶಕುಮಾರ್ ದೀಪ ಬೆಳಗಿಸಿ ಶಿಬಿರಾರ್ಥಿಗಳಿಗೆ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶ್ರೀಯುತ ಎಂ. ರಂಗನಾಥ್ ಭಟ್, ಜೊತೆ ಕಾರ್ಯದರ್ಶಿಗಳಾದ ಶ್ರೀಯುತ ಕೆ.ಸುರೇಶ್ ಕಾಮತ್, ಆಡಳಿತ ಮಂಡಳಿಯ ಸದಸ್ಯರಾದ ಶ್ರೀಯುತ ನರೇಶ್ ಶೆಣೈ ,ಕೆನರಾ ಕಲ್ಚರಲ್ ಅಕಾಡೆಮಿಯ ಸಂಯೋಜಕರಾದ ಶ್ರೀಯುತ ಶೃತ ಕೀರ್ತಿ, ವಿಕಸನ ಬೇಸಿಗೆ ಶಿಬಿರದ ಸಂಯೋಜಕಿಯಾದ ಶ್ರೀಮತಿ ಮಮತಾ, ಪಿ ಆರ್ ಓ ಶ್ರೀಮತಿ ಉಜ್ವಲ್ ಮಲ್ಯ, ಕೆನರಾ ಶಾಲೆಗಳ ಮುಖ್ಯ ಶಿಕ್ಷಕಿಯರಾದ ಶ್ರೀಮತಿ ಕವಿತಾ ಮೌರ್ಯಾ, ಶ್ರೀಮತಿ ಲಲನಾ ಶೆಣೈ, ಶ್ರೀಮತಿ ಸುರೇಖಾ ಎಮ್ ಹೆಚ್, ಶಿಕ್ಷಕ ಶಿಕ್ಷಕೇತರ ವೃಂದದವರು, ನೂರಕ್ಕೂ ಮೇಲ್ಪಟ್ಟು ಶಿಬಿರಾರ್ಥಿಗಳು ಮತ್ತು ಪೋಷಕರು ಉಪಸ್ಥಿತರಿದ್ದರು.

ಶಿಕ್ಷಕಿಯಾದ ಶ್ರೀಮತಿ ತೃಪ್ತಿ ರೈ ಕಾರ್ಯಕ್ರಮವನ್ನು ನಿರೂಪಿಸಿದರು. ಹತ್ತು ದಿನಗಳ ಕಾಲ ನಡೆಯುವ ಈ ಶಿಬಿರದಲ್ಲಿ ನಾಟಕ, ರಂಗಕಲೆ, ಅಜ್ಜಿ ಕಥೆಗಳು, ಕರಕುಶಲ ಚಿತ್ರಕಲೆ, ಆಭರಣ ತಯಾರಿಕೆ, ಜನಪದ ಗೀತೆ ಗಾಯನ ಹಾಗೂ ನೃತ್ಯ, ಮುಖವಾಡ ತಯಾರಿಕೆ, ಪುರಾಣ ಕಥೆ, ಭಗವದ್ಗೀತೆ,ಯೋಗ, ಕುಣಿತ ಭಜನೆ, ದಾಂಡಿಯಾ ನೃತ್ಯ ಮೊದಲಾದ ಹಲವಾರು ಸಕ್ರಿಯ ಚಟುವಟಿಕೆಗಳನ್ನು ಆಯ್ದುಕೊಳ್ಳಲಾಗಿದೆ. ಅಷ್ಟೇ ಅಲ್ಲದೆ ಮಕ್ಕಳಿಗಾಗಿ ಸೈಬರ್ ಸೇಫ್ಟಿ, ಟ್ರಾಫಿಕ್ ರೂಲ್ಸ್, ವ್ಯಕ್ತಿತ್ವ ವಿಕಸನ ಮಾಹಿತಿ ಕಾರ್ಯಾಗಾರ ಮೊದಲಾದ ವಿಶಿಷ್ಟ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.

ವಿಹಾರಕ್ಕಾಗಿ ಪಿಲಿಕುಳ ಪ್ರಾಣಿ ಸಂಗ್ರಹಾಲಯ ಹಾಗೂ ಹೆರಿಟೇಜ್ ವಿಲೇಜ್, ಕೃಷಿ ಮತ್ತು ಹೈನುಗಾರಿಕೆಯ ಅನುಭವ ಪಡೆದುಕೊಳ್ಳುವ ನಿಟ್ಟಿನಲ್ಲಿ ಹೆಜಮಾಡಿಯ ಆಗ್ರೋ ಫಾರ್ಮ್ಸ್ ಮತ್ತು ಗೋಶಾಲೆಗೆ ಶಿಬಿರಾರ್ಥಿಗಳನ್ನು ಕರೆದೊಯ್ಯಲಾಗುವುದು ಮತ್ತು ಪರ್ವತಾರೋಹಣದಲ್ಲಿ ಆಸಕ್ತಿ ಹೊಂದಿರುವ ಶಿಬಿರಾರ್ಥಿಗಳನ್ನು ಬೆಳ್ತಂಗಡಿಯ ಖಾಜೂರು ಫಾರೆಸ್ಟ್ ಗೆ ಕರೆದೊಯ್ಯಲಾಗುವುದು ಎಂದು ಅಕಾಡೆಮಿ ವ್ಯಕ್ತಪಡಿಸಿದೆ.

ಶಿಬಿರಾರ್ಥಿಗಳ ಆಸಕ್ತಿಗೆ ಸರಿಹೊಂದುವಂತಹ ಚಟುವಟಿಕೆಯಿಂದಾಗಿ ಈ ಶಿಬಿರವು ಮಕ್ಕಳ ಮನೋವಿಕಸನದ ಅಭಿವೃದ್ಧಿಗೆ ಪೂರಕವಾಗ ಬಲ್ಲದು ಎಂದು ಅಭಿಪ್ರಾಯಪಡಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು