News Karnataka Kannada
Saturday, April 27 2024
ಮಂಗಳೂರು

ಮಂಗಳೂರು:  ಕಾವೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸವಾರಿಗೆ ಸಮರ್ಪಕ ಕ್ರಮ

Kavooru
Photo Credit : By Author

ಮಂಗಳೂರು: ಕಾವೂರು ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ನಡೆಯಲಿದ್ದು ಜನವರಿ 16ರಂದು ದೇವರ ಪಡು ಸವಾರಿ ಕಾರ್ಯಕ್ರಮಕ್ಕೆ ದೇವರ ಮೆರವಣಿಗೆಯಲ್ಲಿ ಯಾವುದೇ ವ್ಯಕ್ತಿಯವಾಗದಂತೆ ಬೇಕಾದ ಕ್ರಮವನ್ನು ಸ್ಥಳೀಯ ಕಾರ್ಪೊರೇಟರ್ ಗಾಯತ್ರಿ ರಾವ್ ಕೈಕೊಂಡಿದ್ದಾರೆ.

ಸ್ಥಳೀಯವಾಗಿ ಶಿವನಗರ ಮಂಜಲ್ ಕಟ್ಟಿಯಲ್ಲಿ ಎಕರೆ ಗಟ್ಟಲೆ ಜಾಗದಲ್ಲಿ ನಿಂತಿದ್ದ ಮಳೆ ನೀರನ್ನು ರಾಜ ಕಾಲುವೆಗೆ ಹರಿದು ಹೋಗುವಂತೆ ಮಾಡಲು ರಸ್ತೆಯನ್ನು ಜೆಸಿಬಿ ಮೂಲಕ ಆಗಿದ್ದು ಪೈಪು ಅಳವಡಿಸಲಾಯಿತು.

ದೇವರು ಪಡುವವರಿ ಹೋಗುವ ಗದ್ದೆಯ ಮಾರ್ಗದಲ್ಲಿ ಮಣ್ಣು ಹಾಕಿ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರ ಕೋರಿಕೆಯಂತೆ ಸಂಪ್ರದಾಯಕ್ಕೆ ಯಾವುದೇ ಚ್ಯುತಿ ಬಾರದಂತೆ ಪಡುಸವಾರಿ ನಡೆಯುವುದೆಂದು ಕಾರ್ಪೊರೇಟರ್ ಗಾಯತ್ರಿ ರಾವ್ ನುಡಿದರು.

ನೀರು ನಿಂತ ಜಾಗ ಖಾಸಗಿ ಜಮೀನಾಗಿದ್ದರಿಂದ ತೋಡನ್ನ ಮಾಡಿ ನೀರು ಸರಾಗವಾಗಿ ಹರಿದು ಹೋಗಲು ಸಂಬಂಧಪಟ್ಟ ಮನೆಯವರ ಅನುಮತಿಗಾಗಿ ಕೋರಿಕೊಂಡಿದ್ದೆವು. ಆದರೆ ಕೆಲವೊಂದು ಕಾರಣದಿಂದ ಅನುಮತಿ ನೀಡಲು ವಿಳಂಬ ಮಾಡಿದ್ದರಿಂದ ಮಂಗಳೂರು ಮಹಾನಗರ ಪಾಲಿಕೆಯ ವತಿಯಿಂದ ನಾವೇ ಜೆಸಿಬಿಯನ್ನ ತರಿಸಿ ಪೈಪ್ ಲೈನ್ ಅಳವಡಿಸಿ ನೀರು ಹರಿದು ಹೋಗಲು ವ್ಯವಸ್ಥೆ ಮಾಡಿದ್ದೇವೆ. ಈ ಹಿಂದೆ ಇಲ್ಲಿ ಪೈಪ್ ಒಂದನ್ನ ಅಳವಡಿಸಲಾಗಿತ್ತು. ಆದರೆ ಅದನ್ನು ಬಲವಂತವಾಗಿ ತೆಗೆದು ತೋಡನ್ನ ಮುಚ್ಚಿ ಹಾಕಲಾಗಿತ್ತು. ವರ್ಷಗಟ್ಟಲೆ ನೀರು ನಿಂತಲ್ಲಿ ಸೊಳ್ಳೆ ಉತ್ಪತ್ತಿಯಾಗಿ ಮಲೇರಿಯಾ ಡೆಂಗ್ಯೂ ಮತ್ತಿತರ ಸಾಂಕ್ರಾಮಿಕ ರೋಗ ಹರಡುವುದರಿಂದ ಇದರ ಬಗ್ಗೆ ಮುನ್ನೆಚ್ಚರಿಕೆ ತೆಗೆದುಕೊಂಡು ದಿಟ್ಟ ಕ್ರಮ ಕೈಗೊಳ್ಳಲಾಗಿದೆ . ಯಾರಾದರೂ ಮತ್ತೆ ಇಲ್ಲಿ ಪೈಪ್ ಅನ್ನ ತೆಗೆದುಹಾಕಿ, ನೀರು ನಿಲ್ಲುವಂತೆ ಉದ್ದೇಶಪೂರ್ವಕವಾಗಿ ಮಾಡಿದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳುವಂತೆ ಪಾಲಿಕೆ ಅಧಿಕಾರಿಗಳಿಗೆ ಒತ್ತಾಯಿಸಿದ್ದೇನೆ ಎಂದು ಗಾಯತ್ರಿ ರಾವ್ ಹೇಳಿದರು.

ದೇವರ ಪಡು ಸವಾರಿ ವಿಚಾರದಲ್ಲಿ ರಾಜಕೀಯವಾಗಿ ಲಾಭ ಪಡೆಯಲು ವಿರೋಧ ಪಕ್ಷದವರು ಒಬ್ಬರು ಯತ್ನಿಸಿದ್ದಾರೆ. ಯಾವುದೇ ಅಭಿವೃದ್ಧಿ ಕಾರ್ಯ ಮಾಡುವುದಿದ್ದರೂ ಅಡ್ಡಗಾಲು ಹಾಕುತ್ತಿದ್ದಾರೆ ಇದು ಸರಿಯಲ್ಲ ಪಡುಸವಾರಿ ರಸ್ತೆಯ ದುರಸ್ತಿಗೆ ಏಳೆಂಟು ದಿನಗಳ ಹಿಂದೆಯೇ ಕ್ರಮ ಕೈಗೊಳ್ಳಲಾಗಿತ್ತು ಇಲ್ಲಿನ ಸಮಸ್ಯೆಯ ಬಗ್ಗೆಯೂ ಅವರಿಗೆ ಅರಿವಿದೆ. ಖಾಸಗಿ ಜಮೀನಿನ ಮಾರಾಟದ ಸಂದರ್ಭ ನೀರಿನ ಹರಿದು ಹೋಗಲು ಯೋಜನೆ ರೂಪಿಸದೆ ಬೇಕಾಬಿಟ್ಟಿ ಮಾರಾಟ ಮಾಡುತ್ತಿರುವುದರಿಂದಲೂ ಇಂತಹ ಸಮಸ್ಯೆ ಉದ್ಭವಿಸುತ್ತಿದೆ ಎಂದವರು ಆರೋಪಿಸಿದ್ದಾರೆ.

ಸ್ಥಳೀಯ ಹಿರಿಯ ನಾಗರಿಕರು ಈ ಭಾಗದಲ್ಲಿ ಸಮರ್ಪಕ ತೋಡಿನ ವ್ಯವಸ್ಥೆ ಇದ್ದುದನ್ನು ಸ್ಮರಿಸಿಕೊಂಡರು. ರಕ್ಷಿತ್ ಪೂಜಾರಿ ಅವರು ಮಾತನಾಡಿ ದೇವರ ಪಡುಸವರಿಗೆ ಕಾರ್ಪೊರೇಟರ್ ಗಾಯತ್ರಿ ರಾವ್ ಸಮರ್ಪಕ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಇಲ್ಲಿ ಖಾಸಗಿ ಜಮೀನು ಇದ್ದುದರಿಂದ ಪರ್ಯಾಯವಾಗಿಯೂ ರಸ್ತೆ ಮಾರ್ಗವನ್ನು ನಾವು ಗುರುತಿಸಿದ್ದೆವು. ಇದೀಗ ಸಮಸ್ಯೆ ಬಗೆಹರಿದಿದ್ದು ಮಾನಪಾ ಸದಸ್ಯರಿಗೆ ಹಾಗೂ ಶಾಸಕರಿಗೆ ಕ್ಷೇತ್ರದ ಭಕ್ತರ ಪರವಾಗಿ ಕೃತಜ್ಞತೆ ಅರ್ಪಿಸುವುದಾಗಿ ನುಡಿದರು.

ಸ್ಥಳೀಯ ಬಿಜೆಪಿ ಮುಖಂಡರಾದ ಅಶ್ವಿನ್ ಅವರು ಕೆಲಸ ಕಾರ್ಯಗಳನ್ನು ನಿರ್ವಹಿಸಿದರು. ಶಾಸಕ ಡಾ.ವೈ.ಭರತ್ ಮತ್ತು ಮೇಯರ್ ಜಯಾನಂದ ಅಂಚನ್ ಅವರ ಸಹಕಾರದಲ್ಲಿ ಸೂಕ್ತ ಕ್ರಮ ಜರುಗಿಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು