ಮಂಗಳೂರು: ಕಾಸರಗೋಡು ಜಿಲ್ಲೆಯ ಮೊದಲ ವ್ಯಸನ ಮುಕ್ತ ಕೇಂದ್ರವನ್ನು ಮಂಜೇಶ್ವರದ ಸ್ನೇಹಾಲಯ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಲು ಮುಂದಾಗಿದ್ದು, ಇದಕ್ಕೆ ಸೆಪ್ಟೆಂಬರ್ ೫ರಂದು ಬೆಳಗ್ಗೆ ೧೦.೩೦ಕ್ಕೆೆ ಶಿಲಾನ್ಯಾಸ ನೆರವೇರಲಿದೆ.
‘ಸ್ನೇಹಾಲಯ’ ಮಾನಸಿಕ ಅಸ್ವಸ್ಥರ ಪುನರ್ವಸತಿ ಕೇಂದ್ರ ಮತ್ತು ವೃದ್ದಾಶ್ರಮದಲ್ಲಿ ಈ ವ್ಯಸನಮುಕ್ತ ಕೇಂದ್ರ ಕಾರ್ಯಾರಂಭವಾಗಲಿದೆ. ಸುಮಾರು ೬ ಕೋಟಿ ರು. ವೆಚ್ಚದಲ್ಲಿ ದಾನಿಗಳ ನೆರವಿನಿಂದ ಕಟ್ಟಡ ನಿರ್ಮಾಣವಾಗಲಿದೆ. ಏಕಕಾಲದಲ್ಲಿ ೬೦ ಮಂದಿಗೆ ಈ ಕೇಂದ್ರದಲ್ಲಿ ವ್ಯಸನ ಮುಕ್ತತೆಯ ಚಿಕಿತ್ಸೆ ನೀಡಬಹುದಾಗಿದೆ. ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವಿಭಾಗ ಇರಲಿದೆ ಎಂದು ಸ್ನೇಹಾಲಯದ ಸ್ಥಾಪಕ ಜೋಸೆಫ್ ಕ್ರಾಸ್ತಾ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿನ ದಿನಗಳಲ್ಲಿ ಡ್ರಗ್ಸ್ ಮದ್ಯಪಾನದಿಂದ ಮಾನಸಿಕ ಅಸ್ವಸ್ಥತೆ ಹೆಚ್ಚುತ್ತಿರುವುದು ಕಂಡುಬಂದಿದೆ. ಪ್ರಸ್ತುತ ಕಾಸರಗೋಡಿನಲ್ಲಿ ವ್ಯಸನ ಮುಕ್ತ ಕೇಂದ್ರಗಳು ಇಲ್ಲ. ದ.ಕ. ಜಿಲ್ಲೆಯಲ್ಲೂ ಪೂರ್ಣ ಪ್ರಮಾಣದಲ್ಲಿ ವೈದ್ಯರು ಲಭ್ಯವಿರುವ ಕೇಂದ್ರಗಳ ಕೊರತೆ ಇದೆ. ಹಾಗಾಗಿ ಈ ಹೊಸ ವಿಭಾಗ ಆರಂಭಿಸಲು ಯೋಜಿಸಿದ್ದಾಾಗಿ ಅವರು ಹೇಳಿದರು.
ಪ್ರಮುಖರಾದ ಪ್ರಕಾಶ್ ಪಿಂಟೊ, ಒಲಿವಿಯಾ ಕ್ರಾಸ್ತಾ, ಮಿಥುನ್, ಎಲಿಯಾಸ್ ಫರ್ನಾಂಡಿಸ್, ರೇಮಂಡ್ ಡಿಕುನ್ಹ ಉಪಸ್ಥಿತರಿದ್ದರು.