ಮಂಗಳೂರು: ಸ್ವಸ್ತಿಕ ನ್ಯಾಷನಲ್ ಸ್ಕೂಲ್ ಮಂಗಳೂರು, ಹಿಂದ್ ಕುಷ್ಟ ನಿವಾರಣಾ ಸಂಘ ಬೆಂದೂರ್ ವೆಲ್ ಮಂಗಳೂರು, ಅನಿರ್ವೇಧ ಮಂಗಳೂರು, ಹಾಗೂ ನ್ಯೂಸ್ ಕರ್ನಾಟಕ ಮಂಗಳೂರು ಇದರ ಸಹಭಾಗಿತ್ವದಲ್ಲಿ ದಿನಾಂಕ 3/09/2022 ರ ಬೆಳಗ್ಗೆ 11.30 ಕ್ಕೆ ಮಂಗಳೂರು ಕೋಟೆಕಾರು ಕನೀರುತೋಟದ ಅಂಗನವಾಡಿ ಕೇಂದ್ರ ವಾರ್ಡ್ ನಂಬರ್ 2 ರಲ್ಲಿ ಸಮುದಾಯ ಮಾಹಿತಿ ಕಾರ್ಯಕ್ರಮದ ಅಂಗವಾಗಿ ‘ಮಾನಸಿಕ ಆರೋಗ್ಯ ಜಾಗೃತ ಕಾರ್ಯಕ್ರಮ’ ನಡೆಯಲಿದೆ.
ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಮಂಗಳೂರು ಅನಿರ್ವೇಧದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಮನಶಾಸ್ತ್ರಜ್ಞ ಡಾ. ಶ್ವೇತಾ ಕೆ ಟಿ ಇವರು ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಆಯೋಜಿಸಲಾಗಿದೆ.