News Karnataka Kannada
Sunday, April 28 2024
ಮಂಗಳೂರು

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ಮುತ್ತಿಗೆ ತೀವ್ರ ಜಟಾಪಟಿ, ನೂರಾರು ಮಂದಿ ಬಂಧನ

Mangaluru: Hundreds arrested for vandalising Surathkal toll gate
Photo Credit : R Bhat

ಮಂಗಳೂರು: ಸುರತ್ಕಲ್ ಟೋಲ್ ಗೇಟ್ ವಿರುದ್ಧ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ನೂರಾರು ಜನರು ಪೊಲೀಸರ ಸರ್ಪಗಾವಲನ್ನು ಲೆಕ್ಕಿಸದೆ ಮುತ್ತಿಗೆ ಹಾಕಿದ್ದಾರೆ ಸುಮಾರು. ಒಂದು ಗಂಟೆ ಕಾಲ ಟೋಲ್ ಗೇಟನ್ನು ಬಂದ್ ಮಾಡಿದ್ದು, ಬಳಿಕ ಪೊಲೀಸರು ಮತ್ತು ಪ್ರತಿಭಟನಾಕಾರರ ಮಧ್ಯೆ ತೀವ್ರ ಜಟಾಪಟಿ ನಡೆಯಿತು. ಕೊನೆಗೆ ನೂರಾರು ಮಂದಿಯನ್ನು ಪೊಲೀಸರು ಬಲ ಪ್ರಯೋಗಿಸಿ ಬಂಧಿಸಿದ್ದಾರೆ.

ಬೆಳಿಗ್ಗೆ 9.30ರ ಸುಮಾರಿಗೆ ಕಾಂಗ್ರೆಸ್, ಕಮ್ಯುನಿಸ್ಟ್ , ಆಮ್ ಆದ್ಮಿ ಪಕ್ಷ ಸೇರಿದಂತೆ ವಿವಿಧ ಟ್ಯಾಕ್ಸಿ ಸಂಘಟನೆಗಳ ಪ್ರತಿನಿಧಿಗಳು ವಿವಿಧ ಪಕ್ಷಗಳ ಕಾರ್ಯಕರ್ತರು ಟೋಲ್ ಗೇಟ್ ಮುಂಭಾಗದಲ್ಲಿ ಸೇರಿದ್ದರು, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಭರತ್ ಶೆಟ್ಟಿ ವಿರುದ್ಧ ಧಿಕ್ಕಾರ ಘೋಷಣೆ ರಾಜೀನಾಮೆ ಒತ್ತಾಯದ ಘೋಷಣೆಯ ಬಳಿಕ ಬಿಜೆಪಿ ಸರಕಾರ ಬಿಜೆಪಿ ಪಕ್ಷದ ವಿರುದ್ಧ ಘೋಷಣೆಗಳು ಕೇಳಿಬಂದವು. 40% ಸರ್ಕಾರ ಟೋಲ್ ಗೇಟ್ ತೆರವು ಮಾಡಲಾಗದ ಸಂಸದರು ಬೇಡ ಎನ್ನುವ ಘೋಷಣೆಗಳನ್ನು ಕೂಗಲಾಯಿತು.

ಅನಂತರ ನೂರಾರು ಸಂಖ್ಯೆಯಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ಬ್ಯಾರಿಕೇಡ್ ಲೆಕ್ಕಿಸದೆ ರಸ್ತೆಗೆ ನುಗ್ಗಿ ಬಂದಿದ್ದು ಟೋಲ್ ಗೇಟಿನತ್ತ ಧಾವಿಸಿದರು. ಪೊಲೀಸರು ಅಡ್ಡ ನಿಂತು ಜಟಾಪಟಿ ನಡೆಸಿದ್ದಾರೆ ಪೋಲಿಸರನ್ನು ದೂಡಿಕೊಂಡೆ ಕೆಲವು ಕಾರ್ಯಕರ್ತರು ಮುಂದಾಗಿದ್ದು ಕಾಂಗ್ರೆಸ್ ಮುಖಂಡ ಮಿಥುನ್ ರೈ ಟೋಲ್ಗೇಟ್ ಪೆಟ್ಟಿಗೆಯ ಮೇಲೆ ಹತ್ತಿ ಘೋಷಣೆ ಕೂಗಿದರು, ಅಲ್ಲದೆ ಕೆಲವು ಕಾರ್ಯಕರ್ತರು ಟೋಲ್ ಗೇಟ್ ಕಂಬಗಳನ್ನು ಒಡೆಯುವ ಪ್ರಯತ್ನ ಮಾಡಿದರು ಅಷ್ಟರಲ್ಲಿ ಸಿಸಿಬಿ ಇನ್ ಸ್ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಪೊಲೀಸರು ಟೋಲ್ ಗೇಟ್ ಒಡೆಯಲು ಯತ್ನಿಸಿದವರನ್ನು ದೂಡುತ್ತಾ ಬಂದಿದ್ದು ಬಂಧಿಸಲು ಸೂಚಿಸಿದರು. ಈ ವೇಳೆ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ತೀವ್ರ ಜಟಾಪಟಿ ನಡೆಯಿತು ತಳ್ಳಾಟ ನಡೆದು ಪೊಲೀಸರ ಒಂದು ಹಂತದಲ್ಲಿ ಕೈಚೆಲ್ಲುವಂತಾಯಿತು.

ಜನರು ಎಲ್ಲ ಕಡೆಯಿಂದಲೂ ನುಗ್ಗಿ ಬಂದಿದ್ದು ಪೋಲಿಸರ ಮೇಲೆಯೇ ಹೊರಗೋಡುವಂತಾಗಿತ್ತು ಅನಂತರ ಪೋಲಿಸ್ ಕಮಿಷನರ್ ಶಶಿಕುಮಾರ್ ಸ್ಥಳಕ್ಕೆ ಬಂದಿದ್ದು ನೆಲದಲ್ಲಿ ಕುಳಿತಿದ್ದ ಮುಖಂಡರು ಬಂಧಿಸಲು ಪೊಲೀಸರಿಗೆ ಸೂಚನೆ ನೀಡಿದರು. ಕುಳಿತಿದ್ದ ಐವನ್ ಡಿಸೋಜಾ ಟೋಲ್ ಗೇಟ್ ಹತ್ತಿರ ಮಿಥುನ್ ರೈ ಮುನೀರ್ ಕಾಟಿಪಳ್ಳ ಅವರನ್ನು ಎತ್ತಿಕೊಂಡೇ ಹೋಗಿ ಪೋಲಿಸ್ ಬಸ್ನಲ್ಲಿ ಬಂಧಿಸಿದರು. ಕಾಂಗ್ರೆಸ್ ನಾಯಕಿ ಪ್ರತಿಭಾ ಕುಳಾಯಿ ನೆಲದಲ್ಲಿ ಮಲಗಿ ಹೈಡ್ರಾಮ ನಡೆಸಿದರು. ಮಹಿಳಾ ಪೋಲಿಸರು ಅವರನ್ನು ಬಲವಂತದಿಂದ ಎತ್ತಿಕೊಂಡು ಹೋಗಲು ಯತ್ನಿಸಿದ್ದು ಪ್ರತಿಭಾ ಅವರು ಕಿರುಚಾಡಿದ್ದಾರೆ.

ಪ್ರತಿಭಟನಾಕಾರರು ಮಹಿಳೆ ಮೇಲೆ ಯಾಕೆ ಹಲ್ಲೆ ಮಾಡುತ್ತಿದ್ದೀರಿ ಎಂದು ಪೊಲೀಸರನ್ನು ಪ್ರಶ್ನಿಸಿದ್ದಾರೆ. ಈ ವೇಳೆ ನೆಲದಲ್ಲಿ ಮಲಗಿದ ಪ್ರತಿಭಾ ಅವರನ್ನು ಎಳೆದುಕೊಂಡೇ ಬಸ್ಸಿಗೆ ಹಾಕಿದ್ದಾರೆ. ನಿತ್ರಾಣರಾಗಿ ಕುಸಿತಕ್ಕೆ ಒಳಗಾಗಿದ್ದಾರೆ ಅಲ್ಲಿದ್ದ ಕೆಲವು ರವರೆಗೆ ನೀರು ಹಾಕಿ ಆಸರೆ ನೀಡಿದ್ದಾರೆ. ಅನಂತರ ಒಬ್ಬೊಬ್ಬರನ್ನು ರಸ್ತೆಯಿಂದ ತೆರವು ಮಾಡಿದ್ದು ನಾಲ್ಕೈದು ಬಸ್ಸುಗಳಲ್ಲಿ 150 ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ಬಂಧಿಸಿ ಪಾಂಡೇಶ್ವರ ಪಣಂಬೂರು ಠಾಣೆಗೆ ಕರೆದೊಯ್ದಿದ್ದಾರೆ. ದೂರ ನಿಂತಿದ್ದ ಮಹಿಳೆಯರು ಒಂದಷ್ಟು ಯುವಕರು ಚದುರಿದ್ದಾರೆ ಜಟಾಪಟಿ ಸಂದರ್ಭ ಅಬ್ದುಲ್ ಖಾದರ್ ಎಂಬ ಯುವಕನಿಗೆ ಪೊಲೀಸರ ಲಾಠಿ ಏಟು ಬಿದ್ದು ಗಾಯಗೊಂಡಿದ್ದು ಪ್ರತಿಭಟನಕಾರರು ಎತ್ತಿಕೊಂಡು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಟೋಲ್ ಗೇಟ್ ತೆರವು ನೆಪದಲ್ಲಿ ಜನರು ಪೊಲೀಸರೊಂದಿಗೆ ಜಟಾಪಟಿ ನಡೆದಿದ್ದು ಪೊಲೀಸರ ಬಲ ಪ್ರಯೋಗ ಮಾಡಿದ್ದಾರೆ. ಜಿಲ್ಲಾಡಳಿತ ಮತ್ತು ರಾಜ್ಯ ಸರಕಾರಕ್ಕೆ – ಟೋಲ್ ಗೇಟ್ ಅಕ್ರಮ ತೆರವು ಮಾಡುತ್ತೇವೆ ಎಂದು ವಿಧಾನಸಭೆಯಲ್ಲಿ ಹೇಳಿದ ಬಳಿಕವೂ ಮೀನಮೇಷ ಎಣಿಸುತ್ತಿರುವುದು ಖಂಡಿಸಿ ಜನರು ಟೋಲ್ ಗೇಟ್ ವಿರೋಧಿ ಸಮಿತಿ ಹೆಸರಿನಲ್ಲಿ ಪಕ್ಷಭೇದ ಮರೆತು ಮುತ್ತಿಗೆ ಹಾಕಿದ್ದಾರೆ ಆದರೆ ಜಿಲ್ಲಾಡಳಿತ ನೂರಾರು ಪೊಲೀಸರ ಮುಂದಿಟ್ಟು ಹೋರಾಟವನ್ನು ಹತ್ತಿಕ್ಕಲು ಮುಂದಾಗಿದ್ದು ಜಿಲ್ಲೆಯ ಆಡಳಿತ ಬಗ್ಗೆ ನೆಗೆಟಿವ್ ಸಂದೇಶ ನೀಡಿದಂತಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು