News Karnataka Kannada
Monday, May 06 2024
ಮಂಗಳೂರು

ಮಂಗಳೂರು: ಕೊಲೆಯಾದ ಡ್ರೈವರ್ ಕುಟುಂಬಕ್ಕೆ ನೆರವಾದ “ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ”

Mangaluru: "Hindu Tourist Drivers DK" who helped the family of the murdered driver
Photo Credit : News Kannada

ಮಂಗಳೂರು: ಇತ್ತೀಚಿಗೆ ಅಮ್ಮುಂಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿ ಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವ ಜನಾರ್ದನ ಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ ಚಾಲಕ ನಿರ್ವಾಹಕರ ಕಡೆಯಿಂದ 93 ಸಾವಿರಕ್ಕೂ ಹೆಚ್ಚು ಧನ ಸಹಾಯ ಮಾಡಿ ಕರಾವಳಿಗರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.

 

ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ದಿನಕೂಲಿ ಪಡೆಯುವ ಚಾಲಕರು ತಮ್ಮ ಸವಾಲಿನ ಜೀವನದ ಮದ್ಯೆಯು ಪರಿಚಯವೇ ಇಲ್ಲದ ಚಾಲಕ ವರ್ಗದ ಬಡ ಶ್ರಮಿಕನ ಕುಟುಂಬಕ್ಕೆ ನೆರವಾಗಿ ಕರಾವಳಿಗರಿಗೆ ಪ್ರೇರಣೆಯಾಗಿದ್ದಾರೆ.

ಏಪ್ರಿಲ್ 18 ರಂದು ಜನಾರ್ಧನ ಪೂಜಾರಿ ಮಂಗಳೂರಿನ ನೆಹರು ಮೈದಾನದ ಪುಟ್​ಬಾಲ್ ಗ್ರೌಂಡ್​ನ ಪಬ್ಲಿಕ್ ಗ್ಯಾಲರಿ ಮೇಲೆ ಮಲಗಿದ್ದಾಗ ನಾಲ್ಕು ಜನ ಕ್ರಿಮಿನಲ್​ಗಳ ಗುಂಪು ಇವರ ಮೇಲೆ ಕಣ್ಣಿಟ್ಟಿತ್ತು. ದರೋಡೆಗೆ ಸ್ಕೆಚ್ ಹಾಕಿ. ಖದೀಮರು ಮೊಬೈಲ್ ಮತ್ತು ಹಣ ಕೊಡು, ಇಲ್ಲ ಸಾಯಿಸಿಬಿಡುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಪ್ರತಿರೋದ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿಗೆ ಹಿಂದಿನಿಂದ ಬಲವಾಗಿ ಹೊಡಿದಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡಿದ್ದಾರೆ. ಜನಾರ್ಧನ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು