ಮಂಗಳೂರು: ಇತ್ತೀಚಿಗೆ ಅಮ್ಮುಂಜೆ ನಿವಾಸಿ ಬಡ ಟೂರಿಸ್ಟ್ ಡ್ರೈವರ್ ಜನಾರ್ದನ ಪೂಜಾರಿ ಇವರನ್ನು ನಗರದ ಪುರಭವನದ ಬಳಿ ಕಳ್ಳತನ ಕಾರಣಕ್ಕಾಗಿ ಕೊಲೆ ಮಾಡಲಾಯಿತು. ಇದರಿಂದ ಆಧಾರ ಕಳೆದುಕೊಂಡು ಚಿಂತಾಜನಕ ಸ್ಥಿತಿಯಲ್ಲಿ ಇರುವ ಜನಾರ್ದನ ಅವರ ಕುಟುಂಬಕ್ಕೆ ಹಿಂದೂ ಟೂರಿಸ್ಟ್ ಡ್ರೈವರ್ಸ್ ದ.ಕ ಚಾಲಕ ನಿರ್ವಾಹಕರ ಕಡೆಯಿಂದ 93 ಸಾವಿರಕ್ಕೂ ಹೆಚ್ಚು ಧನ ಸಹಾಯ ಮಾಡಿ ಕರಾವಳಿಗರು ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ.
ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ದಿನಕೂಲಿ ಪಡೆಯುವ ಚಾಲಕರು ತಮ್ಮ ಸವಾಲಿನ ಜೀವನದ ಮದ್ಯೆಯು ಪರಿಚಯವೇ ಇಲ್ಲದ ಚಾಲಕ ವರ್ಗದ ಬಡ ಶ್ರಮಿಕನ ಕುಟುಂಬಕ್ಕೆ ನೆರವಾಗಿ ಕರಾವಳಿಗರಿಗೆ ಪ್ರೇರಣೆಯಾಗಿದ್ದಾರೆ.
ಏಪ್ರಿಲ್ 18 ರಂದು ಜನಾರ್ಧನ ಪೂಜಾರಿ ಮಂಗಳೂರಿನ ನೆಹರು ಮೈದಾನದ ಪುಟ್ಬಾಲ್ ಗ್ರೌಂಡ್ನ ಪಬ್ಲಿಕ್ ಗ್ಯಾಲರಿ ಮೇಲೆ ಮಲಗಿದ್ದಾಗ ನಾಲ್ಕು ಜನ ಕ್ರಿಮಿನಲ್ಗಳ ಗುಂಪು ಇವರ ಮೇಲೆ ಕಣ್ಣಿಟ್ಟಿತ್ತು. ದರೋಡೆಗೆ ಸ್ಕೆಚ್ ಹಾಕಿ. ಖದೀಮರು ಮೊಬೈಲ್ ಮತ್ತು ಹಣ ಕೊಡು, ಇಲ್ಲ ಸಾಯಿಸಿಬಿಡುತ್ತೇವೆ ಎಂದು ಧಮಕಿ ಹಾಕಿದ್ದಾರೆ. ಇದಕ್ಕೆ ಪ್ರತಿರೋದ ವ್ಯಕ್ತಪಡಿಸಿದ ಜನಾರ್ಧನ ಪೂಜಾರಿಗೆ ಹಿಂದಿನಿಂದ ಬಲವಾಗಿ ಹೊಡಿದಿದ್ದಾರೆ. ಬಳಿಕ ಅವರ ಬಳಿ ಇದ್ದ ಮೊಬೈಲ್ ಮತ್ತು ಹಣವನ್ನು ಕಿತ್ತುಕೊಂಡಿದ್ದಾರೆ. ಜನಾರ್ಧನ ಪೂಜಾರಿ ಸ್ಥಳದಲ್ಲೇ ಸಾವನ್ನಪ್ಪಿದ್ದರು.