News Karnataka Kannada
Monday, April 29 2024
ಹಾಸನ

ರಾಮನಾಥಪುರ: ಗಂಗೂರಿನಲ್ಲಿ ಎ. ಮಂಜು ಮತಯಾಚನೆ

Ramanathapuram: A Manju seeks votes in Gangur
Photo Credit : News Kannada

ರಾಮನಾಥಪುರ: ಜೆಡಿಎಸ್, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ನಿರ್ವಹಿಸಿ, ಮುಂಬರುವ ವಿಧಾನ ಸಭಾ ಕ್ಷೇತ್ರದಿಂದ ಅತಿ ಹೆಚ್ಚು ಅಂತರದಿಂದ ಜಯಗಳಿಸಲು ಪ್ರತಿಯೊಬ್ಬ ಕಾರ್ಯಕರ್ತರು ಸಹಾಯ ಮಾಡುವಂತೆ ಮಾಜಿ ಸಚಿವ ಎ. ಮಂಜು ಮನವಿಯನ್ನು ಮಾಡಿದರು.

ರಾಮನಾಥಪುರ ಹೋಬಳಿ ಗಂಗೂರು ಗ್ರಾಮದಲ್ಲಿ ಮತ ಯಾಚನೆ ಮಾಡಿದ ನಂತರ ವರದಿಗಾರೊಂದಿಗೆ ಮಾತನಾಡಿದ ಅವರು ನಾವು ಚುನಾವಣೆಯ ಸಂದರ್ಭದಲ್ಲಿ ಮಾತ್ರ ರಾಜಕೀಯ ಮಾಡುತ್ತೇವೆ ವಿನಃ ಚುನಾವಣೆ ನಂತರ ಈವ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ, ಈ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಮುಂದೆಯೂ ಸಹ ಅರಕಲಗೂಡು ಕ್ಷೇತ್ರದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ತಮ್ಮಗಳೆಲ್ಲರ ಹೆಚ್ಚಿನ ಸಹಕಾರ ನೀಡಿ ಎಂದ ಅವರು
ಕ್ಷೇತ್ರದ ಹಲವು ಕಡೆ ಆಪಾರ ಬೆಂಬಲಿಗರು, ಕಾರ್ಯಕರ್ತರ ಜೊತೆಯಲ್ಲಿ ಮನೆ- ಮನೆಗೆ ತೆರಳಿ ಪ್ರಚಾರ ಮಾಡುತ್ತಿದ್ದೇವೆ. ಎಲ್ಲರ ಸಹಕಾರ ಇದೆ. ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ, ನೋಡಿದ್ದಾಗ ಈ ಭಾರಿಯೂ ಸಹ ಬಹಳಷ್ಟು ಈ ಕ್ಷೇತ್ರದಲ್ಲಿ ಜೆಡಿಎಸ್ ಭದ್ರಕೋಟೆಯಾದ ವಿಧಾನ ಸಭಾ ಕ್ಷೇತ್ರದಲ್ಲಿ ನನ್ನ ಜೆಡಿಎಸ್ ಗೆಲುವು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ತಾಲ್ಲೂಕು ಪಂಚಾಯತಿ ಮಾಜಿ ಸದಸ್ಯರಾದ ಜಿ.ಸಿ. ಮಂಜೇಗೌಡ, ಜೆಡಿಎಸ್ ಮುಖಂಡರಾದ ಕುಮಾರಸ್ವಾಮಿ, ಎಂ.ಎಚ್. ಕೃಷ್ಣಮೂರ್ತಿ, ಕೊಣನೂರು ವೈಯ್ಸಳ ಕೋಟವಾಳು ಮಹದೇವ್, ಶ್ರೀ ಪ್ರಸನ್ನ ಸುಬ್ರಹ್ಮಣ್ಯ ಸೇವಾ ಸಹಕಾರ ಸಂಘದ ಅಧ್ಯಕ್ಷರು ಗಂಗೂರು ಬಿ.ಎಸ್. ಭರತ್, ಮಾಜಿ ಅಧ್ಯಕ್ಷರು ಕುಮಾರಸ್ವಾಮಿ, ಸದಸ್ಯರಾದ ಜಿ.ಸಿ. ಶಿವಣ್ಣ, ಗ್ರಾಮ ಪಂಚಾಯತಿ ಸದಸ್ಯರಾದ ಮೋಹನ್, ಮಾದೇಶ್, ಸಿದ್ದಯ್ಯ , ಮಂಜು, ಜೆ.ಡಿಎಸ್ ಯುವ ಮುಖಂಡರು ಎಸ್.ಬಿ. ಸುಬಾಸ್, ಕೂಡಲೂರು ಪ್ರಕಾಶ್ ಹಾಗೂ ಕೆ.ಕೆ. ರಮೇಶ್ ನಾಗೇಶ್, ಅರ್.ಎನ್. ಪ್ರವೀಣ್ ಮುಂತಾದವರು ಇದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು