ಪುತ್ತೂರು: ಪುತ್ತೂರಿನ ಚುನಾವಣಾ ಕಣ ರಂಗೇರಿದೆ. ಕಾಂಗ್ರೆಸ್ನಿಂದ ಪ್ರಬಲ ಸ್ಪರ್ಧಿಯಾಗಿ ಕಣಕ್ಕೆ ಇಳಿದಿರುವ ಅಶೋಕ್ ರೈ ಅವರು ಚುನಾವಣಾ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ.
ಬುಧವಾರ ಪುತ್ತೂರಿನ ಶೇಖಮಲೆ ಅಡಿಕೆ ಗಾರಬಲ್ಗೆ ಅಶೋಕ್ ರೈ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ಪ್ರತಿ ವರ್ಷ ದೀಪಾವಳಿಯ ದಿನ ಜನರನ್ನು ಕರೆದು ಸೀರೆ ಮತ್ತು ಭೋಜನ ವ್ಯವಸ್ಥೆ ಮಾಡುತ್ತೇನೆ. ಇದು ಕೇವಲ ಪ್ರೀತಿಗಾಗಿ ನಮ್ಮ ನಡುವೆ ಮುಂದೆ ಉಳಿಯುವುದು ಪ್ರೀತಿ ಮಾತ್ರ ಎಂದು ಅಶೋಕ್ ರೈ ತಿಳಿಸಿದ್ದಾರೆ.