News Karnataka Kannada
Saturday, May 04 2024
ಮಂಗಳೂರು

ಮಂಗಳೂರು: ಡಿವೈಎಫ್ಐ ಉರ್ವ ಸ್ಟೋರ್ ಘಟಕದ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ

Uruva Store
Photo Credit : By Author

ಮಂಗಳೂರು:  ಡಿವೈಎಫ್ಐ ಉರ್ವ ಸ್ಟೋರ್ ಘಟಕದ ವತಿಯಿಂದ 76ನೇ ಸ್ವಾತಂತ್ರ್ಯ ದಿನಾಚರಣೆಯನ್ನು ಸುಂಕದಕಟ್ಟಿ ಪ್ರದೇಶದಲ್ಲಿ ಡಿವೈಎಫ್ಐ ಕಚೇರಿ ಎದುರು ನಡೆಸಲಾಯಿತು.

ಧ್ವಜಾರೋಹಣವನ್ನು ಡಿವೈಎಫ್ಐ ಉರ್ವ ಸ್ಟೋರ್ ಘಟಕದ ಅಧ್ಯಕ್ಷರಾದ ರಾಜೇಶ್ ನೆರವೇರಿಸಿದರು. ಮುಖ್ಯ ಅತಿಥಿ ಗಳಾಗಿ ಡಿವೈಎಫ್ಐ ಜಿಲ್ಲಾ ಮುಖಂಡರಾದ ಮನೋಜ್ ವಾಮಂಜೂರು, ಡಿವೈಎಫ್ಐ ಮಂಗಳೂರು ನಗರ ಮುಖಂಡರಾದ ಪ್ರಶಾಂತ್ ಎಂಬಿ, ಕಟ್ಟಡ ಕಾರ್ಮಿಕ ಸಂಘಟನೆಯ ಮುಖಂಡರಾದ ಮನೋಜ್ ಕುಲಾಲ್, ಪ್ರಕಾಶ್ ಕೆ, ಸಂಘಟನೆಯ ಹಿತೈಷಿಗಳಾದ ಪದ್ಮನಾಭ, ಗಂಗಾಧರ್ ಭಾಗವಹಿಸಿದ್ದರು.

ಮನೋಜ್ ವಾಮಂಜೂರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಬಾವುಟದ ಪ್ರಾಮುಖ್ಯತೆ ಮತ್ತು ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷ ಕಳೆದರೂ ಜನರ ಸಂಕಷ್ಟಗಳ ಬಗ್ಗೆ ಕುರಿತು ವಿವರಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿವೈಎಫ್ಐ ಉರ್ವ ಸ್ಟೋರ್ ಘಟಕದ ಅಧ್ಯಕ್ಷರಾದ ರಾಜೇಶ್ ವಹಿಸಿದ್ದರು ಮತ್ತು ಕಾರ್ಯದರ್ಶಿಯಾದ ಸುಕೇಶ್ ಕಾರ್ಯಕ್ರಮದ ನಿರೂಪಣೆಯನ್ನು ಮಾಡಿದರು.

ಸ್ಥಳೀಯ ಸಂಘಟನೆಯ ಮುಖಂಡರುಗಳಾದ ಇಕ್ಬಾಲ್ ನಾಗೇಂದ್ರ ನಾಗರಾಜ್ ಗೌರವ್ ರಘುವೀರ್ ಮನ್ವಿತ್ ಹರ್ಷಿತ್ ಸಜನ್ ರಕ್ಷಿತ್ ಅನಿಲ್ ತಿಲಕ್ ಸುಧಾಕರ್ ಸನತ್ ಮುಂತಾದವರು ವಹಿಸಿದ್ದರು. ಕಾರ್ಯಕ್ರಮದ ನಂತರ ಡಿವೈಎಫ್ಐ ಕಾರ್ಯಕರ್ತರಿಂದ ಸ್ವಚ್ಟತಾ ಅಭಿಯಾನ ಮತ್ತು ಹಸಿರು ಅಭಿಯಾನ, ಗಿಡ ನೆಡುವ ಕಾರ್ಯಕ್ರಮ ನಡೆಸಲಾಯಿತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು