News Karnataka Kannada
Monday, May 06 2024
ಮಂಗಳೂರು

ಮಂಗಳೂರು: ಪ್ರಧಾನಿ ಆಗಮನದ ಹಿನ್ನೆಲೆ ಕೂಳೂರು ವ್ಯಾಪ್ತಿಯಲ್ಲಿ ತುರ್ತುಪರಿಸ್ಥಿತಿ ವಾತಾವರಣ!

Cpi
Photo Credit : By Author

ಮಂಗಳೂರು: ಸೆ. 2ರ ಮೋದಿ ಸಮಾವೇಶಕ್ಕಾಗಿ ಕೂಳೂರು ವ್ಯಾಪ್ತಿಯಲ್ಲಿ ಭಯದ ವಾತಾವರಣವನ್ನು ನಿರ್ಮಿಸಲಾಗುತ್ತಿದೆ. ಎರಡು ದಿನದ ಬಂದ್‌ಗೆ ಆಡಳಿತವೇ ಕರೆನೀಡಿದೆ.

ಎರಡುದಿನ ಮುಂಚಿತವಾಗಿ ನಡೆಯುವ ಕೂಳೂರಿನ ಗಣೇಶೋತ್ಸವದ ಮೆರವಣಿಗೆ ಯನ್ನು ಅನಗತ್ಯವಾಗಿ ಮೊಟಕುಗೊಳಿಸಲಾಗಿದೆ. ಗೋಲ್ಡ್ ಪಿಂಚ್ ಮೈದಾನದ ಸುತ್ತಮುತ್ತಲಿನ ನಿವಾಸಿಗಳಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಶಾಲಾ ಕಾಲೇಜುಗಳಿಗೆ ಗಣೇಶೋತ್ಸವದ ನೆಪದಲ್ಲಿ ರಜೆ ಸಾರಲಾಗಿದೆ.

ಮೊದಲೇ ಕೊರೋನಾ, ನೆರೆ, ಬೆಲೆ ಏರಿಕೆಯಂತಹ ಸಮಸ್ಯೆಗಳಿಂದ ಬಳಲುತ್ತಿರುವ ಜನ ಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

ಈ ಕಾರ್ಯಕ್ರಮವು ಒಂದು ಪಕ್ಷದ ಕಾರ್ಯಕರ್ತರ ರಾಜಕೀಯ ಸಮಾವೇಶ. ಸರಕಾರಿ ಕಾರ್ಯಕ್ರಮ ಅಲ್ಲ. ಭದ್ರತೆಯ ಆತಂಕ ಇದ್ದಲ್ಲಿ ಊರನ್ನೂ, ರಾಷ್ಟ್ರೀಯ ಹೆದ್ದಾರಿಯನ್ನೂ ಬಂದ್ ಮಾಡಿ ಜನತೆಯ ಉಸಿರುಗಟ್ಟಿಸಿ ಸಮಾವೇಶ ನಡೆಸುವ ಅಗತ್ಯವೇನಿತ್ತು? ಕಳೆದ ಎಂಟು ವರ್ಷದಿಂದ ಕೂಳೂರು ಹೆದ್ದಾರಿಯ ಸರ್ವೀಸ್ ರಸ್ತೆ ಪಾಳು ಬಿದ್ದಿತ್ತು. ವಾಹನ ಸಂಚಾರರು ಪರದಾಡುವಾಗಲೂ ಇಣುಕಿ ನೋಡದ ಬಿಜೆಪಿ ಆಡಳಿತ ತರಾತುರಿಯಲ್ಲಿ ಮಳೆಯ ನಡುವೆಯೂ ಡಾಮರಿಕರಣ ನಡೆಸಿದೆ. ಚರಂಡಿಗಳನ್ನು ಮುಚ್ಚಿ ಹಾಕಲಾಗಿದೆ.

ಜನರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಾ ಬಂದಿರುವ ಬಿಜೆಪಿ ತನ್ನ ಆಡಳಿತ ವೈಫಲ್ಯವನ್ನು ಸಂಪೂರ್ಣ ಮರೆಮಾಚುವ ತರಾತುರಿಯ ಕಾಮಗಾರಿ ನಡೆಸುತ್ತಿದೆ. ಪಕ್ಷದ ಕಾರ್ಯಕ್ರಮಕ್ಕೆ ಸರಕಾರದ ಖಜಾನೆ ಖಾಲಿ ಮಾಡಲಾಗಿದೆ. ಸಭೆಗೆ ಜನ ಸೇರಲು ಆಡಳಿತ ಯಂತ್ರದ ದುರುಪಯೋಗ ಮಾಡಲಾಗುತ್ತಿರುವ ಪ್ರಕ್ರಿಯೆಗಳನ್ನು ಮಾಜಿ ಕಾರ್ಪೋರೇಟರ್ ದಯಾನಂದ ಶೆಟ್ಟಿ ಖಂಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
15229
Jaya Kumar

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು