ಮಂಗಳೂರು: ಕುಕ್ಕರ್ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಂಕಿತ ವ್ಯಕ್ತಿಯನ್ನು ಶಾರೀಕ್ ಎಂದು ದೃಢಪಡಿಸಲಾಗಿದೆ.
ಶಾರೀಕ್ ಕುಟುಂಬಸ್ಥರು ಸೋಮವಾರ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ ಶಾರೀಕ್ ಎಂದು ದೃಢಪಡಿಸಿದರು.
ಇದರೊಂದಿಗೆ ಶನಿವಾರ ನಾಗುರಿಯಲ್ಲಿ ಸಂಭವಿಸಿದ ಕುಕ್ಕರ್ ಬಾಂಬ್ ಸ್ಪೋಟದ ಪ್ರಮುಖ ಆರೋಪಿ ಶಾರೀಕ್ ಎಂಬುದು ಖಚಿತವಾದಂತಾಗಿದೆ.