ಮಂಗಳೂರು: ನಾದನೃತ್ಯ ಕಲಾಶಾಲೆಯ ಆರು ಮಂದಿ ನರ್ತನ ಚತುರೆಯರು ಮೈಸೂರಿನಲ್ಲಿ ಇಂದು ನಡೆಯಲಿರುವ ‘ಚಿಗುರುಸಂಜೆ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.
ಈ ಕಾರ್ಯಕ್ರಮವು ಕಳೆದ ೪ ದಶಕಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ ಗುರು ನೃತ್ಯ ಗುರು ಡಾ.ವಸುಂಧರಾ ದೊರೆಸ್ವಾಮಿಯವರು ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ನೃತ್ಯ-ಸಂಗೀತ ಕಾರ್ಯಕ್ರಮಗಳ ವಸುಂಧರೋತ್ಸವ ೨೦೨೨ ರ ಅಂಗವಾಗಿ ನಡೆಯಲಿದೆ.
ನೃತ್ಯ ಗುರು ವಿದುಷಿ ಭ್ರಮರಿ ಶಿವಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ನಾದನೃತ್ಯ ಕಲಾಶಾಲೆಯ ವಿದ್ಯಾರ್ಥಿನಿಯರಾದ ಶುಕೀ ರಾವ್, ಸಂಜನಾ ಶೆಣೈ, ಶಿವಾನಿ ರಾವ್, ಮಹಾಲಕ್ಷ್ಮೀ ಶೆಣೈ, ವರ್ಣಿಕಾ ಆಚಾರ್ಯ, ಚಿನ್ಮಯೀ ಕೊಟ್ಯಾನ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.
ಇಂದು(೧೦-೧೧-೨೦೨೨) ಸಂಜೆ ೭.೧೫ಕ್ಕೆ ಸರಿಯಾಗಿ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾದಬ್ರಹ್ಮಸಂಗೀತ ಸಭಾದ ವೇದಿಕೆಯಲ್ಲಿ ಗುರು-ಶಿಷ್ಯ-ಪ್ರಶಿಷ್ಯರುಗಳು ಸಂಗಮಿಸುತ್ತಿರುವ ಅಪೂರ್ವ ಕಾರ್ಯಕ್ರಮ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.