News Karnataka Kannada
Sunday, May 19 2024
ಮಂಗಳೂರು

ಮಂಗಳೂರು: ವಸುಂಧರೋತ್ಸವ ೨೦೨೨ರಲ್ಲಿ ನಾದನೃತ್ಯದ ಚಿಣ್ಣರು

Mangaluru: Children of Nada nritya at The Vasundhara Festival 2022
Photo Credit : News Kannada

ಮಂಗಳೂರು: ನಾದನೃತ್ಯ ಕಲಾಶಾಲೆಯ ಆರು ಮಂದಿ ನರ್ತನ ಚತುರೆಯರು ಮೈಸೂರಿನಲ್ಲಿ ಇಂದು ನಡೆಯಲಿರುವ ‘ಚಿಗುರುಸಂಜೆ’ ಕಾರ್ಯಕ್ರಮದಲ್ಲಿ ನೃತ್ಯ ಪ್ರದರ್ಶನ ನೀಡಲಿದ್ದಾರೆ.

ಈ ಕಾರ್ಯಕ್ರಮವು ಕಳೆದ ೪ ದಶಕಗಳಿಂದ ಅಂತಾರಾಷ್ಟ್ರೀಯ ಖ್ಯಾತಿಯ ಗುರು ನೃತ್ಯ ಗುರು ಡಾ.ವಸುಂಧರಾ ದೊರೆಸ್ವಾಮಿಯವರು ಆಯೋಜಿಸುತ್ತಿರುವ ರಾಷ್ಟ್ರೀಯ ಮಟ್ಟದ ನೃತ್ಯ-ಸಂಗೀತ ಕಾರ್ಯಕ್ರಮಗಳ ವಸುಂಧರೋತ್ಸವ ೨೦೨೨ ರ ಅಂಗವಾಗಿ ನಡೆಯಲಿದೆ.

ನೃತ್ಯ ಗುರು ವಿದುಷಿ ಭ್ರಮರಿ ಶಿವಪ್ರಕಾಶ್ ಅವರ ಮಾರ್ಗದರ್ಶನದಲ್ಲಿ ಮಂಗಳೂರಿನ ನಾದನೃತ್ಯ ಕಲಾಶಾಲೆಯ ವಿದ್ಯಾರ್ಥಿನಿಯರಾದ ಶುಕೀ ರಾವ್, ಸಂಜನಾ ಶೆಣೈ, ಶಿವಾನಿ ರಾವ್, ಮಹಾಲಕ್ಷ್ಮೀ ಶೆಣೈ, ವರ್ಣಿಕಾ ಆಚಾರ್ಯ, ಚಿನ್ಮಯೀ ಕೊಟ್ಯಾನ್ ಇವರುಗಳು ನೃತ್ಯ ಕಾರ್ಯಕ್ರಮ ನೀಡಲಿದ್ದಾರೆ.

ಇಂದು(೧೦-೧೧-೨೦೨೨) ಸಂಜೆ ೭.೧೫ಕ್ಕೆ ಸರಿಯಾಗಿ ಮೈಸೂರಿನ ಜೆ.ಎಲ್.ಬಿ. ರಸ್ತೆಯಲ್ಲಿರುವ ಶ್ರೀನಾದಬ್ರಹ್ಮಸಂಗೀತ ಸಭಾದ ವೇದಿಕೆಯಲ್ಲಿ ಗುರು-ಶಿಷ್ಯ-ಪ್ರಶಿಷ್ಯರುಗಳು ಸಂಗಮಿಸುತ್ತಿರುವ ಅಪೂರ್ವ ಕಾರ್ಯಕ್ರಮ ಇದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

11671
Media Release

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು