ಮಂಗಳೂರು: ಮಹಾನಗರ ಪಾಲಿಕೆಯ ಪದವು ಪೂರ್ವ ವಾರ್ಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಭೂಮಿಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕಾಮತ್, ನಗರದ ಸಮಗ್ರ ಅಭಿವೃದ್ಧಿಯ ದೃಷ್ಟಿಯಿಂದ ಸಾವಿರಾರು ಕೋಟಿ ಅನುದಾನ ತರಲಾಗಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಯ ಜೊತೆಯಲ್ಲಿ ಪ್ರವಾಸೋದ್ಯಮಕ್ಕೂ ಹೆಚ್ಚಿನ ಆದ್ಯತೆ ನೀಡಲಾಗಿದ್ದು ಮುಂದಿನ ಕೆಲ ವರ್ಷಗಳಲ್ಲಿ ಮಂಗಳೂರು ಮಾದರಿ ನಗರವಾಗಿ ಗುರುತಿಸಿಕೊಳ್ಳಲಿದೆ ಎಂದು ಶಾಸಕ ಕಾಮತ್ ಹೇಳಿದ್ದಾರೆ.
ಪದವು ಪೂರ್ವ ವಾರ್ಡಿನ ಕೋಟಿಮುರ ಕೊರಗಜ್ಜನ ಗುಡಿಯಿಂದ ಮುಖ್ಯರಸ್ತೆಯ ವರೆಗೆ ಚರಂಡಿ ಅಭಿವೃದ್ಧಿ, ಕೋಟಿಮುರ ದಿಂದ ಮೇಲ್ತೋಟ ಸಂಪರ್ಕಿಸುವ ರಸ್ತೆ ಬಳಿ ಚರಂಡಿ ಅಭಿವೃದ್ಧಿ ಹಾಗೂ ಕೋಟಿಮುರದಿಂದ ಗಣಪತಿಕಟ್ಟೆಯ ವರೆಗೆ ರಸ್ತೆ ಡಾಮರಿಕರಣಕ್ಕೆ ಭೂಮಿಪೂಜೆ ನೆರವೇರಿಸಿದ್ದು, ಕಾಮಗಾರಿ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಎಂದು ಕಾಮತ್ ಹೇಳಿದರು.
ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ಸ್ಥಳೀಯ ಕಾರ್ಪೋರೇಟರ್ ಭಾಸ್ಕರ್ ಮೈೂಯ್ಲಿ, ಮುಖಂಡರಾದ ವಿಜಯ್ ಕುಮಾರ್ ಶೆಟ್ಟಿ, ಅಜಯ್ ಕುಲಶೇಖರ, ಸುಜನ್ ದಾಸ್, ದಿನೇಶ್ ಕೋಟಿಮುರ, ರತೀಶ್ ಬಾಲಕೃಷ್ಣ, ಅನಿಲ್ ರಾವ್, ರಾಜೇಶ್, ನಿತಿನ್, ಲಿಖಿತ್, ರಾಜೇಂದ್ರ ಬೈತುರ್ಲಿ, ಹರಿಣಿ ಪ್ರೇಮ್, ಅರುಣ್ ರಾವ್, ಅಕ್ಷಿತ್, ಅಲ್ವಿನ್ ರೇಗೋ, ಅನಿಲ್, ಯೋಗಿಶ್, ನಾಗರಾಜ ಆಚಾರ್ಯ ಮತ್ತಿತರು ಉಪಸ್ಥಿತರಿದ್ದರು.