News Karnataka Kannada
Tuesday, May 07 2024
ಮಂಗಳೂರು

ಮಂಗಳೂರು: ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಗೆ ಆರೆಸ್ಟ್ ಆದೇಶ

Prince
Photo Credit : News Kannada

ಮಂಗಳೂರು: ಉಳ್ಳಾಲದ ಬಟ್ಟಪ್ಪಾಡಿ ಬಳಿ ಸಮುದ್ರದಲ್ಲಿ ಮುಳುಗಿರುವ ಪ್ರಿನ್ಸೆಸ್ ಮಿರಾಲ್ ಹಡಗನ್ನು ಆರೆಸ್ಟ್ ಮಾಡಬೇಕು ರಾಜ್ಯ ಹೈಕೋರ್ಟ್ ಹೀಗೊಂದು ಆದೇಶ ನೀಡಿರುವ ವಿಚಾರ ತಿಂಗಳ ಬಳಿಕ ಬಹಿರಂಗಗೊಂಡಿದೆ.

ಒಂದೆಡೆ ಹಡಗಿನಲ್ಲಿರುವ ತೈಲ ಹೊರತೆಗೆಯುವುದಕ್ಕೆ ವೇದಿಕೆ ಸಜ್ಜಾಗುತ್ತಿರುವಾಗಲೇ ಹೈಕೋರ್ಟ್ ನಲ್ಲಿ ನಡೆದ ಈ ಬೆಳವಣಿಗೆಯಿಂದ ಜಿಲ್ಲಾಡಳಿತದ ಯತ್ನ ಹಿನ್ನಡೆ ಕಾಣುವಂತಾಗಿದೆ.

ಯುಎಇ ಗೆ ಸೇರಿದ ಮೊಂಜಾಸ್ ಡಿಎಂಸಿಸಿ ಎಂಬ ಕಂಪೆನಿಯು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ ತನಗೆ ಶಿಪ್ ಬಂಕರಿಂಗ್ ತೈಲ ಪೂರೈಕೆಗೆ ಕುರಿತು ತನಗೆ ಬೇಕಾದ ಸುಮಾರು 1 ಪಾಯಿಂಟ್ 39ಕೋಟಿ ₹ ಮೊತ್ತ ಬಂದಿಲ್ಲ ಅದು ಬರುವವರೆಗೂ ಈ ಹಡಗನ್ನು ಆರೆಸ್ಟ್ ಮಾಡಿದರೆ ತನಗೆ ನಷ್ಟ ಉಂಟಾಗಲಿದೆ.

ಎನ್ ಪಿಎ ವ್ಯಾಪ್ತಿಯಲ್ಲಿರುವ ಈ ಹಡಗನ್ನು ಅದರ ಭಾಗಗಳಾದ ಗಿಯರ್ , ಬಂಕರ್, ಮಷಿನರಿ, ಫರ್ನಿಚರ್ ಸಹಿತ ಅರೆಸ್ಟ್ ಮಾಡುವಂತೆ ವಾರಂಟ್ ಹೊರಡಿಸಬೇಕು ಹಾಗೂ ಅದನ್ನು ಮಾರಾಟ ಮಾಡಿ ಬರುವ ಮೊತ್ತದಿಂದ ತನ್ನ ನಷ್ಟವನ್ನು ಭರಿಸುವಂತೆ ಆದೇಶಿಸಬೇಕು ಎಂದು ಕೇಳಿಕೊಂಡಿತ್ತು.

ಅದರಂತೆ ವಿಚಾರಣೆ ನಡೆಸಿರುವ ಹೈಕೋರ್ಟ್ ಕಳೆದ ತಿಂಗಳು ಆದೇಶ ನೀಡಿ ಹಡಗನ್ನು ಅರೆಸ್ಟ್ ಮಾಡುವಂತೆ ನವಮಂಗಳೂರು ಬಂದರೂ ಪ್ರಾಧಿಕಾರಕ್ಕೆ ಆದೇಶ ನೀಡಿದೆ. ಆದೇಶದಲ್ಲಿ ಅಡ್ಮಿರಾಲ್ಟಿ ಕಾಯ್ದೆ 2ಸಾವಿರದ ಹದಿನೇಳು ನ್ನು ಪ್ರಸ್ತಾಪಿಸಲಾಗಿದೆ. ಪ್ರಸ್ತುತ ಎನ್ ಪಿಎ ಹೇಳುವ ಪ್ರಕಾರ ಈ ನೌಕೆ ಅದರ ವ್ಯಾಪ್ತಿಯಲ್ಲಿಲ್ಲ ಬದಲಾಗಿ ಹಳೆ ಬಂದರು ರಾಜ್ಯ ಸರಕಾರದ ಅಧೀನ ವ್ಯಾಪ್ತಿಯಲ್ಲಿದ್ದು ಜಿಲ್ಲಾಡಳಿತ ಈ ಕುರಿತು ಕ್ರಮ ಕೈಗೊಳ್ಳಬೇಕಾಗುತ್ತದೆ.

ಹಡಗಿನ ಅರೆಸ್ಟ್ ಆದೇಶವೀಗ ಅದರ ತೆರವಿಗಾಗಿ ಮುಂದುವರಿಯುತ್ತಿದ್ದ ನೌಕಾಯಾನ ಮಹಾನಿರ್ದೇಶಕರ ಕಚೇರಿ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ತಾತ್ಕಾಲಿಕ ಆಘಾತ ತಂದೊಡ್ಡಿದೆ.

ಹಡಗಿನಲ್ಲಿರುವ ಸುಮಾರು 220 ಟನ್ ತೈಲವು ಸೋರಿಕೆಯಾದರೆ ಸಮುದ್ರ ಪರಿಸರಕ್ಕೆ ತುಂಬಲಾರದ ನಷ್ಟ ಅಪಾಯ ತಂದೊಡ್ಡಬಹುದು ಎಂದು ಸರಕಾರಕ್ಕೆ ಪತ್ರ ಬರೆದು ಸರಕಾರದ ಮೂಲ ಹೈಕೋರ್ಟ್ ಗೆ ತೈಲ ತೆರವಿಗೆ ಅವಕಾಶ ಕೋರಿ ಮನವಿ ಮಾಡಿ ಕೊಳ್ಳಲಾಗುವುದು ಎಂದು ಜಿಲ್ಲಾಡಳಿತದ ಮೂಲಗಳು ತಿಳಿಸಿವೆ.

ಇದಕ್ಕೆ ಮೊದಲು ಹಡಗಿನಲ್ಲಿರುವ ತೈಲ ತೆರವಿಗೆ ಸಾಕಷ್ಟು ಸಿದ್ಧತೆ ನಡೆಸಲಾಗಿತ್ತು ಹಿಂದೆ ಎರಡೂ ಸಂಸ್ಥೆಗಳು ಇದರಲ್ಲಿ ತೈಲ ಹೊರತೆಗೆಯುವ ದಾಗಿ ಹೇಳಿದರು ಸಾಕಷ್ಟು ಸಿದ್ಧತೆ ತಂತ್ರಜ್ಞಾನ ಇಲ್ಲದ ಕಾರಣ ಹಿಂಜರಿದವು. ಈಗ ಮೂರನೇ ಸಂಸ್ಥೆ ಗುಜರಾತ್ ಮೂಲದ ಬನ್ಸಾಲ್ ಎಂಡವರ್ ಅಂತಿಮಗೊಂಡಿದೆ ಒಂದೆಡೆ ಅವಮಾನವೋ ಸೂಕ್ತವಾಗಿದ್ದರಿಂದ ತೈಲ ತೆರವಿಗೆ ಡಿಜಿ ಶಿಪ್ಪಿಂಗ್ ಹಾಗೂ ಜಿಲ್ಲಾಡಳಿತ ಸಲ್ಲಿಸುತ್ತಿದ್ದವು ತೈಲ ತೆರವಿಗೆ ಪೂರ್ವಭಾವಿಯಾಗಿ ಅಂಡರ್ ವಾಟರ್ ಸರ್ವೆ ನಡೆಸಿ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು

ಇದೇ ವರ್ಷ ಜೂನ್ 21 ರಂದು ಉಳ್ಳಾಲ ಬಟ್ಟಪ್ಪಾಡಿ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಅಪಾಯಕ್ಕೆ ಸಿಲುಕಿತ್ತು ಅದರಲ್ಲಿ ರಂಧ್ರ ಕಾಣಿಸಿಕೊಂಡು ನೀರು ಒಳಸೇರಿತು ಅದರಲ್ಲಿ 15 ಸಿರಿಯನ್ ನಾವಿಕರನ್ನು ಕೋಸ್ಟ್ ಗಾರ್ಡ್ ರಕ್ಷಿಸಿತ್ತು . ಆ ಬಳಿಕ ಬಟ್ಟಪ್ಪಾಡಿಯಲ್ಲಿ ಹಡಗಿನ ಸ್ಥಳವು ನೆಲಕ್ಕೆ ತಾಗಿ ನಿಂತಿದ್ದು ಚಲಿಸುವ ಸಾಧ್ಯತೆಯಿಲ್ಲದೆ ಮುಕ್ಕಾಲು ಭಾಗ ಮುಳುಗುವ ಸ್ಥಿತಿಯಲ್ಲಿದೆ ಅದರಲ್ಲಿ 160 ಟನ್ ಫರ್ನೇಸ್ ಆಯಿಲ್ ಹಾಗೂ 60 ಡೀಸೆಲ್ ಇರುವುದಾಗಿ ಮಾಹಿತಿ ಇದೆ .ಚೀನಾದಿಂದ ಲೆಬನಾನ್ ಗೆ 8ಸಾವಿರ ಟನ್ ತೂಕದ ಸ್ಟೀಲ್ ಕಾಯಿಲೆ ಸಾಗಿಸುತ್ತಿದ್ದ ಹಡಗು ಇದಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು