ಮಂಗಳೂರು: ಸ್ಮಾರ್ಟ್ ಸಿಟಿ ಕಮಾಂಡ್ ಕಂಟ್ರೋಲ್ ಸೆಂಟರ್ ಫೇಸ್-2 ಯೋಜನೆಯಲ್ಲಿ32 ಕೋಟಿ ರೂ. ಟೆಂಡರ್ನಲ್ಲಿಭ್ರಷ್ಟಾಚಾರವಾಗಿದೆ. ಮಧ್ಯಪ್ರದೇಶ ಸರಕಾರದಿಂದ ಕಪ್ಪು ಪಟ್ಟಿಗೆ ಸೇರಿದ, ಅಮೆರಿಕ ಹಾಗೂ ಇಂಗ್ಲೆಂಡ್ನಲ್ಲಿನಿಷೇಧಿಸಿದ ಸಂಸ್ಥೆಗೆ ನಗರದಲ್ಲಿಅವಕಾಶ ನೀಡಲಾಗಿದೆ ಎಂದು ಪ್ರತಿಪಕ್ಷ ಸದಸ್ಯ ಎ.ಸಿ.ವಿನಯರಾಜ್ ಆರೋಪಿಸಿದರು.
ಟೆಂಡರ್ನಲ್ಲಿಆರು ಕಂಪನಿಗಳು ಭಾಗವಹಿಸಿದ್ದು, ಟೆಕ್ ಸಿಸ್ ಸೆಕ್ಯುರಿಟೀಸ್ ಪ್ರೈವೈಟ್ ಲಿಮಿಟೆಡ್ ಎಂಬ ಕಂಪನಿಗೆ ಟೆಂಡರ್ ವಹಿಸಲಾಗಿದೆ. ಈ ಕಂಪನಿ ಭೋಪಾಲ್ ಮತ್ತು ಘಾಜಿಯಾಬಾದ್ನಲ್ಲಿಯೋಜನೆ ಅನುಷ್ಠಾನ ಮಾಡುವಲ್ಲಿವಿಫಲವಾಗಿ ಕಪ್ಪು ಪಟ್ಟಿಗೆ ಒಳಪಟ್ಟಿತ್ತು. ಈ ಕಂಪನಿಗೆ ಈ ಯೋಜನೆ ಸಿಗುವಂತೆ ಮಾಡಲು ಯೋಜನೆಯ ಕನ್ಸಲ್ಟೆಂಟ್ ಆಗಿರುವ ಸ್ಟೆಪ್ ಇನ್ ಸ್ಟೋನ್ ಕಂಪನಿ ಸಹಕರಿಸಿದೆ. ಈ ಕನ್ಸಲ್ಟೆಂಟ್ ಕಂಪನಿ ಸ್ವತಃ ರಡಾರ್ ಹಾರ್ಡ್ವೇರ್ ಡಿಸ್ಟ್ರಿಬ್ಯೂಟರ್ ಆಗಿದ್ದು, ಅವರ ಇ ಹಾರ್ಡ್ವೇರ್ ಈ ಟೆಕ್ನಾಸಿಸ್ ಕಂಪನಿ ಖರೀದಿಗೆ ಸಂಚು ಮಾಡಿದೆ. ಈ ಟೆಂಡರ್ ಭ್ರಷ್ಟಾಚಾರದಿಂದ ಕೂಡಿದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು.
ಟೆಂಡರ್ ಮೂಲಕ ಕಾಮಗಾರಿಯನ್ನು ಐಎಎಸ್ ಅಧಿಕಾರಿಗಳ ಪರಿಶೀಲನೆಯ ಮೂಲಕವೇ ನೀಡಲಾಗಿದೆ. ಸಂಸ್ಥೆಯ ಕಪ್ಪು ಪಟ್ಟಿ ಕುರಿತು ನ್ಯಾಯಾಲಯದಲ್ಲಿಪ್ರಕರಣ ವಜಾಗೊಂಡಿತ್ತು. ಅದನ್ನು ನಾವು ಪರಿಶೀಲಿಸಿದ್ದೇವೆ. ಎಫ್ಐಆರ್ ಆದ ತಕ್ಷಣ ಆರೋಪಿ ಆಗಬೇಕಾಗಿಲ್ಲ. ನಿಮ್ಮ ಆರೋಪ ದುರುದ್ದೇಶದಿಂದ ಕೂಡಿದೆ ಎಂದು ಆಡಳಿತ ಪಕ್ಷದ ಸುಧೀರ್ ಶೆಟ್ಟಿ ಹೇಳಿದರು.
ಆಯುಕ್ತ ಅಕ್ಷಯ್ ಶ್ರೀಧರ್ ಕಾನೂನಿನ ವಿಚಾರ ಪ್ರಸ್ತಾಪಿಸಿದಾಗ, ನನಗೆ ಕಾನೂನು ಕಲಿಸಬೇಡಿ, ನನಗೆ ಗೊತ್ತಿದೆ ಎಂದು ವಿನಯ್ರಾಜ್ ಹೇಳಿದರು. ನಿಮಗೆ ಗೊತ್ತಿದ್ದರೆ ಕುಳಿತುಕೊಳ್ಳಿ ಎಂದು ಆಯುಕ್ತರು ಹೇಳಿದ್ದು, ಪ್ರತಿಪಕ್ಷದ ಸದಸ್ಯರನ್ನು ಕೆರಳಿಸಿತು. ಅವರು ವೇದಿಕೆ ಬಳಿ ತೆರಳಿ ಪ್ರತಿಭಟಿಸಿದರು. ಅವರು ಆ ಅರ್ಥದಲ್ಲಿಹೇಳಿಲ್ಲಎಂದು ಮೇಯರ್ ಸಮಾಧಾನಪಡಿಸಿ, ಸ್ವಸ್ಥಾನಕ್ಕೆ ಮರಳುವಂತೆ ಮಾಡಿದರು.
ಎಲ್ಇಡಿ ದಾರಿದೀಪ ಅಳವಡಿಕೆ ಕಾರ್ಯ ಟೆಂಡರ್ ವಹಿಸಿದವರ ಅವಧಿ ಮುಗಿದರೂ ದೀಪಗಳು ಅಳವಡಿಕೆಯಾಗಿಲ್ಲ. ಈ ಬಗ್ಗೆ ಸ್ಪಷ್ಟ ಉತ್ತರ ಬೇಕು ಎಂದು ಪ್ರತಿಪಕ್ಷ ನಾಯಕ ನವೀನ್ ಡಿಸೋಜ ಆಗ್ರಹಿಸಿದರು.
ಕಳೆದ ನವೆಂಬರ್ಗೆ ಗುತ್ತಿಗೆದಾರರ ಅವಧಿ ಮುಗಿದಿದ್ದರೂ ಕೋವಿಡ್ ಕಾರಣದಿಂದ ಈ ವರ್ಷದ ನವೆಂಬರ್ಗೆ ಅವಧಿ ವಿಸ್ತರಿಸಿದ್ದರೂ ಶೇ.20ರಷ್ಟು ದೀಪಗಳ ಅಳವಡಿಕೆಯಾಗಿಲ್ಲ. ಅವರ ಗುತ್ತಿಗೆ ರದ್ದುಪಡಿಸಿ ಹೊಸ ಟೆಂಡರ್ಗೆ ನಿರ್ಧರಿಸಲಾಗಿದೆ ಎಂದು ಆಯುಕ್ತ ಅಕ್ಷಯ್ ಶ್ರೀಧರ್ ಹೇಳಿದರ
ಉಪ ಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಶಕಿಲ ಕಾವ, ಹೇಮಲತಾ ರಘು ಸಾಲ್ಯಾನ್, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್ ಉಪಸ್ಥಿತರಿದ್ದರು.