News Karnataka Kannada
Friday, May 03 2024
ಮಂಗಳೂರು

ಮಂಗಳೂರು: ಸಮಸ್ಯೆಗಳನ್ನು ಸೃಷ್ಟಿಸುತ್ತಿರುವ ಸ್ಮಾರ್ಟ್ ಸಿಟಿ ಕಾಮಗಾರಿ

Mangaluru: Smart city works creating problems
Photo Credit :

ಮಂಗಳೂರು: ನಗರದ ಪ್ರಮುಖ ಜಂಕ್ಷನ್ ಹಂಪನ ಕಟ್ಟೆಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆಯುತ್ತಿರುವ ಕಾಮಗಾರಿ ಸಮಸ್ಯೆಗಳನ್ನು ಸೃಷ್ಟಿಸುತ್ತಿದೆ. ಸ್ಮಾರ್ಟ್ ಸಿಟಿಯಲ್ಲಿ, ಅಧಿಕಾರಿಗಳು ಯಾವುದೇ ಪೂರ್ವಾಲೋಚನೆ, ಸೂಕ್ತ ತಯಾರಿ ಇಲ್ಲದೆ ಕಾಮಗಾರಿಗಳನ್ನು ನಡೆಸುವುದು ಮತ್ತೆ ತೆರವುಗೊಳಿಸುವವಂತಾಗಿದೆ.

ಹಂಪನಕಟ್ಟೆಯ ಸಿಗ್ನಲ್ ಬಳಿ ವೆನ್ಲಾಕ್‌ಯಿಂದ ನೆಹರೂ ಮೈದಾನಕ್ಕೆ ಹೋಗುವ ಪ್ರಮುಖ ರಸ್ತೆಯಲ್ಲಿ ಝೀಬ್ರಾ ಕ್ರಾಸಿಂಗ್ ವ್ಯವಸ್ಥೆ ಮಾಡಲಾಗಿದೆ. ಆದರೆ ರಸ್ತೆಯ ಇನ್ನೊಂದು ಬದಿಯಲ್ಲಿ ಫುಟ್‌ಪಾತ್‌ಗೆ ಸ್ಟೀಲ್‌ ರಾಡ್‌ಗಳ ಸುರಕ್ಷಾ ವ್ಯವಸ್ಥೆಯನ್ನು ಉದ್ದಕ್ಕೂ ಅಳವಡಿಸಲಾಗಿದೆ. ಈ ಝೀಬ್ರಾ ಕ್ರಾಸಿಂಗ್‌ನಲ್ಲಿ ರಸ್ತೆ ದಾಟಿ ಪಾದಚಾರಿಗಳು ಫುಟ್‌ಪಾತ್‌ಗೆ ಹೋಗಬೇಕಾದರೆ ಈ ಬ್ಯಾರಿಕೇಡ್‌ಗಳ ಮೇಲಿಂದ ಜಂಪ್ ಮಾಡಬೇಕಾದ ಪರಿಸ್ಥಿತಿ. ರಸ್ತೆಯ ಉದ್ದಕ್ಕೂ ಅಳವಡಿಸಲಾಗಿರುವ ಬ್ಯಾರಿಕೇಡ್ ನಡುವೆ ಪಾದಚಾರಿಗಳು ಪ್ರವೇಶಿಸಲು ಅಗತ್ಯವಾದ ಪ್ರವೇಶ ವ್ಯವಸ್ಥೆಯೇ ಇಲ್ಲದಂತಾಗಿದೆ.

ಫುಟ್ಪಾತ್ ರಚನೆ ಮಾಡುವಾಗ ಪಿವಿಎಸ್ ಬಳಿ ರೇಲಿಂಗ್‌ನೊಂದಿಗೆ ನಿರ್ಮಿಸಲಾಗಿರುವ ಫುಟ್ಪಾತ್ ಮಧ್ಯದಲ್ಲೇ ವಿದ್ಯುತ್ ಕಂಬವಿದ್ದು ಅದನ್ನು  ಸ್ಥಳಾಂತರ ಮಾಡದೆ ಜನಸಾಮಾನ್ಯರು ನಡೆದಾಡುವ ಫುಟ್ಪಾತನ್ನು ಇಕ್ಕಟ್ಟುಗೊಳಿಸಲಾಗಿದೆ.

2020ರಲ್ಲಿ ಹಂಪನ ಕಟ್ಟೆ ಜಂಕ್ಷನ್ ಜಂಕ್ಷನ್ ಅನ್ನು ಸ್ಮಾರ್ಟ್ ಸಿಟಿ ಅನುದಾನದಲ್ಲಿ ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿ ಟ್ರಾಫಿಕ್ ಸಿಗ್ನಲ್ ಅಳವಡಿಸಲು ನಿರ್ಧರಿಸಲಾಯಿತು. ಇದಕ್ಕೆ ಸಾರ್ವಜನಿಕರು ಬಸ್ ಮಾಲೀಕರಿಂದಲೇ ವಿರೋಧ ವ್ಯಕ್ತವಾಗಿ ಹಂಪನಕಟ್ಟೆ ಜಂಕ್ಷನ್ ಅನ್ನು ಟ್ರಾಫಿಕ್ ಮುಕ್ತಗೊಳಿಸಿ ಸಿಗ್ನಲ್ ಅಳವಡಿಕೆ ಬೇಡ ಎಂಬ ಅಭಿಪ್ರಾಯ ಕೇಳಿ ಬಂದಿತ್ತು. ಆದರೆ ಸಾರ್ವಜನಿಕರ ಆಕ್ಷೇಪವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿತ್ತು. ಇದರಿಂದ ಅಪಘಾತಗಳು ಟ್ರಾಫಿಕ್  ಬ್ಲಾಕ್ ಸಮಸ್ಯೆ ಹೆಚ್ಚಾಗಿತ್ತು ಆದರೆ ಇದೀಗ ಅಧಿಕಾರಿಗಳು ಹಳೆ ಯೋಜನೆಯನ್ನೇ ಮಾಡಲು ಮುಂದಾಗಿದ್ದು ಈಗ, ಜಂಕ್ಷನ್ ನಲ್ಲಿ ಡಿವೈಡರ್ ಮಾದರಿಯಲ್ಲಿ ಬ್ಯಾರಿಕೇಡ್‌ ಹಾಕಿ ಟ್ರಾಫಿಕ್ ಸಿಗ್ನಲ್ ಮುಕ್ತಗೊಳಿಸಲಾಗಿದೆ.

ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿ ಹಲವು ರಸ್ತೆಗಳು ಕಾಂಕ್ರಿಟೀಕರಣಗೊಂಡಿವೆ. ಒಂದೆಡೆ ಕ್ರಾಂಕಿಟೀಕರಣ ನಡೆಯುತ್ತಿದೆ. ಇನ್ನೊಂದೆಡೆ ಹಾಕಿರುವ ಕಾಂಕ್ರಿಟ್ ಅನ್ನು ರಸ್ತೆಯಡಿ ವಿದ್ಯುತ್ ತಂತಿ, ನೀರು ಸರಬರಾಜು ಪೈಪ್‌ಲೈನ್ ಒಡೆಯುವುದು ಸಾಮಾನ್ಯವಾಗಿಬಿಟ್ಟಿದೆ. ಕಾಮಗಾರಿ ನಡೆಸುವ, ಕಾಂಕ್ರಿಟ್ ಹಾಕುವ ಸಂದರ್ಭ ಅಧಿಕಾರಿಗಳು, ಇಂಜಿನಿಯರ್‌ಗಳು ಈ ಬಗ್ಗೆ ಪೂರ್ವ ಲೆಕ್ಕಾಚಾರದೊಂದಿಗೆ ಕಾಂಕ್ರಿಟೀಕರಣ ಮಾಡದೆ ಸಮಸ್ಯೆ ಸೃಷ್ಟಿಮಾಡುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

ಸ್ಮಾರ್ಟ್ ಸಿಟಿ ಯೋಜನೆಯ ಅಧಿಕಾರಿಗಳು, ಇಂಜಿನಿಯರ್‌ಗಳು ಯಾವುದೇ ಪೂರ್ವಾಲೋಚನೆ ಇಲ್ಲದೆ ಈ ರೀತಿ ಕಾಂಕ್ರಿಟೀಕರಣ ನಡೆಸಿ ಮತ್ತೆ ಅಗೆಯುವುದಾದರೆ ಇಂತಹ ಯೋಜನೆಗಳು ಯಾಕೆ? ಎಂಬ ಬಗ್ಗೆ ಮನಪಾ ಅಧಿಕಾರಿಗಳ ಆಡಳಿತವನ್ನು ಸಾರ್ವಜನಿಕರು ಪ್ರಶ್ನೆ ಮಾಡುತ್ತಿದ್ದಾರೆ.

Photo Credit: GK.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು