ಮಂಗಳೂರು: ಮಂಗಳೂರಿನಿಂದ ದುಬೈಗೆ ಹೊರಡಬೇಕಾದ ವಿಮಾನ ವಿಳಂಬ ಹಿನ್ನೆಲೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಪರದಾಡಿದ ಘಟನೆ ನಡೆದಿತ್ತು. ನಿನ್ನೆ(ಜು.10) ರಾತ್ರಿ 11ಕ್ಕೆ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ಫ್ಲೈಟ್ ವಿಳಂಬವಾಗಿದೆ. ಆದ್ರೆ ಅಧಿಕಾರಿಗಳು ಪ್ರಯಾಣಿಕರಿಗೆ ಬದಲಿ ಫ್ಲೈಟ್ ವ್ಯವಸ್ಥೆ ಮಾಡದೆ ಸುಮ್ಮನಿದ್ದಾರೆ. ಇದರಿಂದ ನಿನ್ನೆ ರಾತ್ರಿಯಿಂದ ವಿಮಾನ ನಿಲ್ದಾಣದಲ್ಲೇ ಪ್ರಯಾಣಿಕರು ಪರದಾಡಿದ್ದರು.
ಇದೀಗ ಏರ್ ಇಂಡಿಯಾ ಎಕ್ಸ್ಪ್ರೆಸ್ ಬೇರೆ ವಿಮಾನದ ವ್ಯವಸ್ಥೆ ಮಾಡಿದ ಹಿನ್ನೆಲೆಯಲ್ಲಿ 130 ಪ್ರಯಾಣಿಕರು ವಿಮಾನ ಹತ್ತಿದ್ದಾರೆ. ಇನ್ನು ತಡವಾದ್ರೆ ದುಬೈನಲ್ಲಿ ಕೆಲಸ ಕಳೆದುಕೊಳ್ಳೋ ಭೀತಿಯಲ್ಲಿ ಉದ್ಯೋಗಿಗಳು ಇದ್ದರು. ಹೀಗಾಗಿ ಉದ್ಯೋಗಿಗಳು ವಿವರಣೆ ಪತ್ರ ಬರೆದುಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಅದರಂತೆ ಏರ್ ಇಂಡಿಯಾ ಕಂಪೆನಿ ವಿವರಣೆ ಪತ್ರ ಕೂಡ ಬರೆದುಕೊಟ್ಟಿದೆ.