ಮಂಗಳೂರು: ಕನ್ನಡ ಮಾತನಾಡ ಬಯಸುವ ಉದ್ಯೋಗಿಗಳಿಗೆ ಕನ್ನಡ ಭಾಷೆಯನ್ನು ಪರಿಚಯಿಸಲು ಮತ್ತು ಅವರ ಕನ್ನಡ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಲು, 30 ದಿನಗಳ ಸ್ಪೋಕನ್ ಕನ್ನಡ ತರಗತಿಗಳನ್ನು ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್
ಲಿಮಿಟೆಡ್, ಮಂಗಳೂರಿನಲ್ಲಿ ಆಯೋಜಿಸಲಾಗಿದೆ.
ಮಂಗಳೂರಿನ ಪಂಜಾಬ್ ನ್ಯಾಷನಲ್ ಬ್ಯಾಂಕ್ನ ನಿವೃತ್ತ ಅಧಿಕಾರಿ ಮತ್ತು ಕನ್ನಡ ಬರಹಗಾರರಾದ ಶ್ರೀ ಎ. ಕರಿಯ ಕುಡಿಯ ಅವರು ಕಾರ್ಯಕ್ರಮವನ್ನು 16 ಡಿಸೆಂಬರ್ 2022 ರಂದು ಮಂಗಳೂರಿನ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ನಲ್ಲಿ ಉದ್ಘಾಟಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಸ್ಪೋಕನ್ ಕನ್ನಡ ತರಗತಿಗಳನ್ನು ನಡೆಸುವ ಹೊಸ ಅಭ್ಯಾಸದ ಕಡೆಗೆ ಎಂ.ಆರ್.ಪಿ.ಎಲ್ ನ ಪ್ರಯತ್ನಗಳನ್ನು ಶ್ಲಾಘಿಸಿದರು. ಪ್ರಾದೇಶಿಕ ಸಂಸ್ಕೃತಿಗಳನ್ನು ಶ್ರೀಮಂತಗೊಳಿಸುವಲ್ಲಿ ಮತ್ತು ಶಿಕ್ಷಣದ ಮೂಲಕ ಜನರನ್ನು ಸಬಲೀಕರಣಗೊಳಿಸುವಲ್ಲಿ ಎಂ.ಆರ್.ಪಿ.ಎಲ್ ಕೊಡುಗೆಯನ್ನು ಅವರು ಶ್ಲಾಘಿಸಿದರು.
ಯಾವುದೇ ಕಲಿಕೆಯ ಪ್ರಕ್ರಿಯೆಯಲ್ಲಿ ಹಿನ್ನೆಲೆ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ಕಲಿಯುವವರು ಕೆಲವು ಹಿನ್ನೆಲೆ ಅಧ್ಯಯನವನ್ನು
ಮಾಡುವುದು ಮತ್ತು ಕನ್ನಡ ಭಾಷೆಯ ಶ್ರೀಮಂತ ಇತಿಹಾಸವನ್ನು ತಿಳಿದುಕೊಳ್ಳಲು ಪ್ರಯತ್ನಿಸುವುದು ಅತ್ಯಗತ್ಯ” ಎಂದು ಅವರು
ಹೇಳಿದರು.
ಗೌರವಾನ್ವಿತ ಅತಿಥಿ, ಸಂದೇಶ್ ಜೆ ಕುಟಿನ್ಹೋ, ಮುಖ್ಯ ಪ್ರಧಾನ ವ್ಯವಸ್ಥಾಪಕರು (ಮಾನವ ಸಂಪನ್ಮೂಲ), ಕರಾವಳಿ ಪ್ರದೇಶದ ಬಹುಭಾಷಿತ್ವನ್ನು ಪ್ರಸ್ತುತ ಪಡಿಸಿ ಅದರ ಪ್ರಯೋಜನಗಳನ್ನು ಪ್ರತಿಪಾದಿಸಿದರು. ಕೃಷ್ಣ ಹೆಗಡೆ ಸಮೂಹ ಪ್ರಧಾನ ವ್ಯವಸ್ಥಾಪಕರು (ಮಾನವ ಸಂಪನ್ಮೂಲ), ಅವರು ಸ್ಪೋಕನ್ ಕನ್ನಡ ತರಗತಿಗಳ ಅನುಷ್ಠಾನದಲ್ಲಿ ರಾಜಭಾಷೆ ಸೆಲ್ ನ ಪ್ರಯತ್ನಗಳನ್ನು ಶ್ಲಾಘಿಸಿ, ಅವರು ಸಂವಹನದ ಸಮಯದಲ್ಲಿ ಸ್ಥಳೀಯರೊಂದಿಗೆ ಸೌಹಾರ್ದಯುತ ಸಂಬಂಧಕ್ಕಾಗಿ ಕನ್ನಡ ಭಾಷೆಯನ್ನು ತಿಳಿದುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು ಮತ್ತು ಹೇಗೆ ಭಾಷೆಯನ್ನು ಕೌಶಲ್ಯವಾಗಿ ಹೊಂದಬಹುದು ಎಂಬುದರ ಕುರಿತು ವಿವರಿಸಿದರು.
ಡಾ.ಬಿ.ಆರ್. ಪಾಲ್, ಮುಖ್ಯ ವ್ಯವಸ್ಥಾಪಕರು (ರಾಜಭಾಷೆ), ತರಗತಿಗಳ ರೂಪರೇಖೆಯನ್ನು ವಿವರಿಸಿದರು. ಮನೀಶ್, ತರಬೇತಿ ಸಹಾಯಕ (ರಾಜಭಾಷೆ) ಮುಖ್ಯ ಅತಿಥಿಯನ್ನು ಪರಿಚಯಿಸಿದರು. ದೀಪ್ತಿ ಜೆ ಅತ್ತಾವರ , ಅಧಿಕಾರಿ (ಹಿಂದಿ ಅನುವಾದಕರು) ವಂದಿಸಿದರು. ಸಂದೀಪ್ ಖಾರ್ವಿ, ಕಿರಿಯ ಅಧಿಕಾರಿ (ರಾಜಭಾಷೆ ಅನುಷ್ಠಾನ) ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಕನ್ನಡ ತರಗತಿಗಳನ್ನು ಪ್ರತಿ ಮಂಗಳವಾರ ಮತ್ತು ಗುರುವಾರದಂದು ಸಂಜೆ 04.00 ರಿಂದ 5.15 ರ ವರೆಗೆ ಎಂ.ಆರ್.ಪಿ.ಎಲ್ ತರಬೇತಿ ಕೇಂದ್ರದಲ್ಲಿ ಆಯೋಜಿಸಲಾಗಿದೆ. ನೋಂದಾಯಿತ 241 ಉದ್ಯೋಗಿಗಳಲ್ಲಿ 35 ನೌಕರರು ಪ್ರಸ್ತುತ ಬ್ಯಾಚ್ನಲ್ಲಿ ಸ್ಪೋಕನ್ ಕನ್ನಡ ತರಗತಿಗಳಿಗೆ ಹಾಜರಾಗಲಿದ್ದಾರೆ.