ಮಂಗಳೂರು: ಕರಾವಳಿಯ ಹುಲಿ ಕುಣಿತದಲ್ಲಿ ಹಲವು ಪ್ರಕಾರಗಳಿದ್ದು, ಅದು ಪ್ರದೇಶದಿಂದ ಪ್ರದೇಶಕ್ಕೆ ವಿಬಿನ್ನವಾಗಿದೆ. ಆದರೆ ಮಂಗಳೂರಿನ ಹುಲಿ ತಂಡಗಳು ಕುಣಿತದ ಜೊತೆಗೆ ಮಾಡುವ ಸಾಹಸಗಳು ಮೈರೋಮಾಂಚನಗೊಳಿಸುತ್ತದೆ. ಇನ್ನು ಹುಲಿ ಬ್ಯಾಂಡ್ಗೆ ಎಂತಹವರೂ ಕೂಡಾ ಎದ್ದು ನಲಿಯಲು ಹಾಗೂ ಕುಣಿಯಲು ಮುಂದಾಗುತ್ತಾರೆ ಅನ್ನೋದಕ್ಕೆ ಇದೇ ವೇದಿಕೆಯಲ್ಲಿ ಪುಟಾಣಿ ಮಕ್ಕಳು ಹಾಕಿದ ಸ್ಟೆಪ್ ಗಳೇ ಸಾಕ್ಷಿಯಾಗಿದೆ. ಇನ್ನು ಇಲ್ಲಿ ಆಯೋಜನೆ ಮಾಡಿರುವ ಉದ್ದೇಶ ಕೇವಲ ಕುಣಿತ ಮಾತ್ರವಾಗಿರದೆ ಇದೊಂದು ಸ್ಪರ್ಧೆಯಾಗಿತ್ತು. ಸುಮಾರು ಹನ್ನೆರಡು ತಂಡಗಳು ಭಾಗವಹಿಸಿದ್ದವು.
ಈ ಕಾರ್ಯಕ್ರಮದಲ್ಲಿ ಗೆಲ್ಲುವ ತಂಡಕ್ಕೆ ಐದು ಲಕ್ಷ ಬಹುಮಾನವನ್ನೂ, ಭಾಗವಹಿಸುವ ಪ್ರತಿ ತಂಡಕ್ಕೂ 50 ಸಾವಿರ ರೂಪಾಯಿ ಪ್ರೋತ್ಸಾಹ ಧನವನ್ನೂ ನೀಡಲಾಗುತ್ತದೆ. ಇದಲ್ಲದೆ ವ್ಯಯಕ್ತಿಕ ಬಹುಮಾನಗಳನ್ನು ಗೆಲ್ಲುವ ತಂಡಕ್ಕೆ ರಾಜ್ಯ ಸರ್ಕಾರದ ಕಾರ್ಯಕ್ರಮದಲ್ಲಿ ಭಾಗವಹಿಸುವ ಅವಕಾಶಕ್ಕೂ ಪ್ರಯತ್ನಿಸಲಾಗುತ್ತದೆ ಎಂದು ದಕ್ಷಿಣ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್ ರವರು ಭರವಸೆ ನೀಡಿದರು.
ಮಂಗಳೂರು ದಸರಾದಲ್ಲಿ ಹುಲಿವೇಷ ಹಾಕಿ ನಲಿಯೋದು ಕರಾವಳಿ ಜಿಲ್ಲೆಯಲ್ಲಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದ ಪರಂಪರೆ. ಇತ್ತೀಚಿನ ದಿನಗಳಲ್ಲಿ ಬಣ್ಣ ಹಾಗೂ ಬ್ಯಾಂಡ್ಗಳು ದುಭಾರಿಯಾದ ಕಾರಣ ಕೆಲವೊಂದು ತಂಡಗಳು ಹುಲಿ ವೇಷ ಹಾಕುವುದನ್ನು ನಿಲ್ಲಿಸಿದ್ದಾರೆ. ಹೀಗಾಗಿ ಈ ಸಂಪ್ರದಾಯ ನಿಲ್ಲಬಾರದು ಅನ್ನುವ ಕಾರಣಕ್ಕೆ ಕುಡ್ಲಾ ಸಾಂಸ್ಕೃತಿಕ ಪ್ರತಿಷ್ಠಾನ ಸಂಸ್ಥೆಯ ಮೂಲಕ ಈ ಸ್ಪರ್ಧೆ ಏರ್ಪಡಿಸಿರುವುದು ಕಲಾವಿಧರಿಗೆ ಖುಷಿ ನೀಡಿದೆ ಎಂದು ದಕ್ಷಿಣ ಮಂಗಳೂರು ಶಾಸಕರಾದ ವೇದವ್ಯಾಸ ಕಾಮತ್ ತಿಳಿಸಿದರು.