ಮಂಗಳೂರು: ಕ್ರಿಶ್ಚಿಯನ್ ಕೌನ್ಸಿಲ್ ಇದರ ವಜ್ರಮಹೋತ್ಸವ ಹಾಗೂ ಕ್ರಿಸ್ಮಸ್ ಕಾರ್ಯಕ್ರಮವು ರೊಸಾರಿಯೊ ಕಲ್ಚರಲ್ ಸಭಾಂಗಣದಲ್ಲಿ ಡಿ.14ನೇ ಬುಧವಾರ ಸಂಜೆ ನಡೆಯಿತು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಧರ್ಮಕ್ಷೇತ್ರದ ಧರ್ಮಧ್ಯಕ್ಷರಾದ ಅತೀ ಪೂಜ್ಯ ಪೀಟರ್ ಪಾವ್ಲ್ ಸಲ್ಡಾನ್ಹಾ ಇವರು ವಹಿಸಿದರು. ಮುಖ್ಯ ಅಥಿತಿಗಳಾಗಿ ಸಿ.ಎಸ್. ಐ. ಕರ್ನಾಟಕ ದಕ್ಷಿಣ ಸಭಾ ಪ್ರಾಂತದ ನೂತನ ಧರ್ಮಧ್ಯಕ್ಷರಾದ ಬಿಷಪ್ ಹೇಮಚಂದ್ರ ಕುಮಾರ್, ಫಾದರ್ ಬ್ಯಾಪಟಿಸ್ಟ್ ಮಿನೆಸಸ್, ನ್ಯಾಶನಲ್ ಎಕ್ಯುಮಿನಿಕಲ್ ಸೆಕ್ರೆಟರಿ, ಮಲಂಕರ ಪುತ್ತೂರು ಧರ್ಮಕ್ಷೇತ್ರದ ಧರ್ಮಾಧ್ಯಕ್ಷರಾದ ಅತೀ ಪೂಜ್ಯ ಗೀವರ್ಗೀಸ್ ಮಾರ್ ಮಕಾರಿಯೋಸ್ ರವರು ವಜ್ರ ಮಹೋತ್ಸವದ ಸಂದೇಶ ನೀಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ಥಿಯೊಲೊಜಿಕಲ್ ಕಾಲೇಜಿನ ಪ್ರಾಂಶುಪಾಲರಾದ ರೆವೆ.ಡಾ.ಎಚ್.ಎಮ್ ವಾಟ್ಸನ್ ಹಾಗೂ ಸಂತಜೋಸೆಫ್ ಸೆಮಿನರಿಯ ರೆಕ್ಡರ್ ಆದ ಡಾ.ರೊನಾಲ್ಡ್ ಸೆರಾವೊ ವಿಶೇಷ ಪ್ರಾರ್ಥನೆ ಅರ್ಪಿಸಿದರು. ರೆವೆ. ಎಮ್. ಪ್ರಭುರಾಜ್ ಚರ್ಚ್ಆಫ್ ಸೌತ್ ಇಂಡಿಯಾ ದಕ್ಷಿಣ ಕನ್ನಡ ವಲಯದ ಅಧ್ಯಕ್ಷರು, ಮಿಸ್ಟರ್ ಆಲ್ಫೆಡ್ ಮನೋಹರ್, ಆಲ್ ಕರ್ನಾಟಕ ಯುನೈಟೆಡ್ ಕ್ರಿಶ್ಚಿಯನ್ ಫೋರಂ ಫಾರ್ ಹ್ಯುಮನ್ ರೈಟ್ಸ್ – ಪಶ್ಚಿಮ ವಲಯದಿಂದಲೂ ಉಪಸ್ಥಿತರಿದ್ದರು.
ನೂತನ ಧರ್ಮಾಧ್ಯಕ್ಷರಿಗೆ ಹಾಗೂ 2012-2022 ವೇಳೆ ಸೇವೆ ಸಲ್ಲಿಸಿದ ಕಾರ್ಯದರ್ಶಿಗಳಾದ ರೆವೆ ಡಾಜೆ.ಬಿ ಸಲ್ಡಾನ್ಹಾ, ರೆವೆ. ಕ್ಲಿಫರ್ಡ ಫೆರ್ನಾಂಡಿಸ್, ರೆವೆ. ಸಾಗರ್ ಸುಂದರ್ ರಾಜ್ ಹಾಗೂ ಖಜಾಂಜಿರವರಾದ ಎಫ್.ಎಂ ಲೋಬೋರವರನ್ನು ಸನ್ಮಾನಿಸಲಾಯಿತು. ಪ್ರಬಂಧ ಸ್ಪರ್ಧೆಗಳಲ್ಲಿ ವಿಜೇತರಾದ,
ಕೊಂಕಣಿ (16-30 ವರ್ಷಗಳು)
1. ನವೀನ್ ಶೆರ್ವಿನ್ ಡಿ’ಸೋಜಾ, ಬಂಟ್ವಾಳ
2. ವಿಯೋಲಾ ಮಸ್ಕರೇನ್ಹಸ್, ಗಂಟಲಕಟ್ಟೆ
3. ಲೀಶಾ ವಿನಿಶಾ ಲೋಬೊ, ಬಂಟ್ವಾಳ
ಇಂಗ್ಲಿಷ್ (16-30 ವರ್ಷಗಳು)
1. ಆನ್ ಮೇರಿ ವರ್ಗೀಸ್, ಮಂಗಳೂರು
2. ಡಯೋನಾಲಿಟಾ ಡಿಸೋಜಾ, ಫೆರಾರ್
3. ಡೇನಿಯಲ್ ಥಾಮಸ್, ಕೇರಳ
ಕನ್ನಡ
1. ಸೌಜನ್ಯ ಜೆ, ಚಿಕ್ಕಮಗಳೂರು
2. ಗೀತಾ ಹಂಸ, ಮಂಗಳೂರು
3. ಸುಶೀಲಾ ಈಡೋರ, ಮಂಗಳೂರು
ಕೊಂಕಣಿ (30 ವರ್ಷ ಮೇಲ್ಪಟ್ಟವರು)
1. ಲವಿನಾಲೀರಾಮೆನೆಜಸ್, ಬಾಲ್ಜುಂಜೆ
2. ರಿಚರ್ಡ್ ಅಲ್ವಾರೆಸ್, ಕಾರ್ಡೆಲ್
3. ಒಡ್ರಿನ್ ಡಿಸೋಜಾ, ಬಂಟ್ವಾಳ
ಇಂಗ್ಲಿಷ್ (30 ವರ್ಷ ಮೇಲ್ಪಟ್ಟವರು)
1. ರೋಸಿನಾ ಫ್ಲಾರೆನ್ಸ್ ಡಿ’ಸೋಜಾ, ಮಂಗಳೂರು
2. ಮೆಲೆನಾ ಜ್ಯೋತಿ ಗೋನ್ಸಾಲ್ವಿಸ್, ಬಂಟ್ವಾಳ
3. ಪೀಮಾಮೆಲಿಟಾ ಪಿಂಟೋ, ಮಂಗಳೂರು
ಇವರಿಗೆಬಹುಮಾನ ವಿತರಣೆ ನಡೆಯಿತು. ವಿಶೇಷ ಆಕರ್ಷಣೆಯಾಗಿ ಅನೇಕ ಚರ್ಚ್ ಹಾಗೂ ಸಂಸ್ಥೆಗಳಿಂದ ಕ್ರಿಸ್ಮಸ್ ಹಾಗೂ ಇನ್ನಿತರ ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆದವು.
ರೆವೆ. ರೂಪೇಶ್ ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್ನ ಕಾರ್ಯದರ್ಶಿ ಎಲ್ಲರನ್ನು ಸ್ವ್ವಾಗತಿಸಿದರು ಅನಿಲ್ ಹಾಗೂ ಗ್ಲೋರಿಯರವರು ಈ ಕಾರ್ಯಕ್ರಮವನ್ನು ನಿರೂಪಿಸಿದರು.
ರೆವೆ.ಡಾ.ಸಂದೀಪ್ ಥಿಯೋಫಿಲ್ ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್ನ ಕಾರ್ಯದರ್ಶಿ ವಂದನಾರ್ಪಣೆ ನೆರೆವೇರಿಸಿದರು.
ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್ ಕ್ರೈಸ್ತ ಸಮುದಾಯದ ಒಕ್ಕೂಟವಾಗಿದ್ದು ಚರ್ಚ್ಆಫ್ ಸೌತ್ ಇಂಡಿಯಾ-ದಕ್ಷಿಣ ಕರ್ನಾಟಕ ಧರ್ಮಪ್ರಾಂತ್ಯ ಮತ್ತು ಮಂಗಳೂರು ಕಥೊಲಿಕ್ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರ ಆಶ್ರಯದಲ್ಲಿ ನಡೆಯುತ್ತಿದೆ.
ಮಂಗಳೂರಿನ ಕ್ರೈಸ್ತ ಸಮುದಾಯದ ವಿವಿಧ ಸಭೆಗಳ ವ್ಯಕ್ತಿಗಳು ಇದರ ಸದಸ್ಯರಾಗಿದ್ದು ಸೌಹಾರ್ದತೆ, ಶಾಂತಿ ಹಾಗೂ ಯೇಸು ಕ್ರಿಸ್ತರ ಮೌಲ್ಯಗಳೊಂದಿಗೆ ಸಂಸ್ಥೆಯು ಒಗ್ಗಟ್ಟಿನಲ್ಲಿ ಮುನ್ನಡೆಯುತ್ತಿದೆ. ಯೇಸು ಕ್ರಿಸ್ತರ ಹೆಸರಲ್ಲಿ ಮನುಕುಲದ ಸೇವೆ, ಪ್ರೀತಿ, ಕ್ಷಮೆ, ಕರುಣೆ, ಸೇವೆ, ಕ್ರೈಸ್ತ ಸಭೆಗಳ ನಡುವೆ ಸಾಮರಸ್ಯವನ್ನು ಬೆಳೆಸುವುದು, ಈ ಎಲ್ಲಾ ಕಾರ್ಯಗಳ ಮೂಲಕ ಒಗ್ಗಟ್ಟನ್ನು ತರಲು ಮಂಗಳೂರು ಕ್ರಿಶ್ಚಿಯನ್ ಕೌನ್ಸಿಲ್ ಶ್ರಮಿಸುತ್ತಿದೆ.