ಮೈಸೂರು: ನಾಗರಹೊಳೆ ಉದ್ಯಾನವನದ ಹೊರವಲಯ ತಾಲೂಕಿನ ನೇರಳಕುಪ್ಪೆಯಲ್ಲಿ ಬೆಳಗ್ಗೆ ಮನೆಯವರಿಗೆ ಹುಲಿಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಇಡೀ ಗ್ರಾಮವೇ ಜೀವ ಕೈಯಲ್ಲಿ ಹಿಡಿದುಕೊಂಡು ತಿರುಗಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಾಗರಹೊಳೆ ಉದ್ಯಾನದ ಸುತ್ತಮುತ್ತಲಿನ ಗ್ರಾಮಗಳಲ್ಲಿ ಕಳೆದ ಒಂದು ವರ್ಷದಿಂದ ಅರಣ್ಯದ ಗದ್ದೆಗಳಲ್ಲಿ ಕಾಣಿಸಿಕೊಂಡಿದ್ದ ಹುಲಿ, ಡಿಸೆಂಬರ್ 12ರ ಸೋಮವಾರ ರಾತ್ರಿ ನೇರಳಕುಪ್ಪೆ ಗ್ರಾಮದ ಸುತ್ತಲೂ ಸಂಚರಿಸಿ ಮುದ್ದೇಗೌಡರ ಮನೆಯ ಅಂಗಳದಲ್ಲಿ ಹೆಜ್ಜೆಗುರುತುಗಳನ್ನು ಕಾಣಿಸಿಕೊಂಡಿತ್ತು. ಇದು ಕುಟುಂಬ ಸದಸ್ಯರು ಮತ್ತು ನೆರೆಹೊರೆಯವರಲ್ಲಿ ಆತಂಕವನ್ನು ಸೃಷ್ಟಿಸಿದೆ ಮತ್ತು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.