News Karnataka Kannada
Friday, May 03 2024
ಮಂಗಳೂರು

ಕಂಕನಾಡಿ: ಬೀದಿಬದಿ ವ್ಯಾಪಾರ ಮಾಡುತ್ತಿದ್ದವರ ಅಂಗಡಿಗಳ ತೆರವು!

Mangaluru: Mayor, Deputy Mayor to be elected on May 09
Photo Credit : Freepik

ಮಂಗಳೂರು: ನಗರದ ಕಂಕನಾಡಿಯ ಮುಖ್ಯರಸ್ತೆಯ ಬದಿಯಲ್ಲಿ ವ್ಯಾಪಾರ ಮಾಡುತ್ತಿದ್ದವರ ಅಂಗಡಿಗಳನ್ನು ಭಾನುವಾರ ಸಂಜೆ ತೆರವುಗೊಳಿಸಲಾಗಿದೆ.

ಮಂಗಳೂರು ಮಹಾನಗರ ಪಾಲಿಕೆಯ ಸೂಚನೆ ಮೇರೆಗೆ ಜೆಸಿಬಿ ಬಳಸಿ ಗೂಡಂಗಡಿ, ಸಂಚಾರಿ ಹೋಟೆಲ್ ನಡೆಯುತ್ತಿದ್ದ ಟೆಂಪೊ ಸಹಿತ 8 ವ್ಯಾಪಾರಿಗಳನ್ನು ತೆರವುಗೊಳಿಸಲಾಗಿದೆ. ಫಾಸ್ಟ್‌ಫುಡ್, ಹಣ್ಣುಗಳ ವ್ಯಾಪಾರವೂ ಇದರಲ್ಲಿ ಸೇರಿದೆ.

‘ಕಂಕನಾಡಿಯ ವೆಲೆನ್ಸಿಯಾ ರಸ್ತೆಯುದ್ದಕ್ಕೂ ಅನಧಿಕೃತ ಅಂಗಡಿಗಳಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ತೆರವು ಮಾಡಲಾಗಿದೆ. ಅಂಗಡಿಯ ಮಾಲೀಕರಿಗೆ ಈ ಬಗ್ಗೆ ಮೊದಲೇ ತಿಳಿಸಲಾಗಿತ್ತು’ ಎಂದು ಮಂಗಳೂರು ಮಹಾನಗರಪಾಲಿಕೆಯ ಆರೋಗ್ಯ ನಿರೀಕ್ಷಕರು ತಿಳಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು