ಮಂಗಳೂರು: ಕಂಕನಾಡಿ ನಗರ ಠಾಣಾ ವ್ಯಾಪ್ತಿಯ ಬಜಾಲ್ ನಲ್ಲಿ ಮನೆ ಹಟ್ಟಿಗೆ ನುಗ್ಗಿ ದನ ಕಳ್ಳತನ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಐವರನ್ನು ಬಂಧಿಸಿದ್ದಾರೆ.
ಜುಲೈ 21 ರಂದು ನಸುಕಿನ 3ಗಂಟೆ ವೇಳೆಗೆ ಜೆರ್ಸಿ ದನವನ್ನು ಕಳ್ಳರು ಹಟ್ಟಿಯಿಂದಲೇ ಕದ್ದೊಯ್ಯಲಾಗಿತ್ತು ಈ ಬಗ್ಗೆ ಅಶ್ವಿನ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದರು ತನಿಖೆ ನಡೆಸಿದ ಪೊಲೀಸರು ಮೊಹಮ್ಮದ್ ಅಶ್ಫಾಕ್ ,ಅಜರುದ್ದೀನ್ ,ಸುಹೈಲ್ ,ಮೊಹಮ್ಮದ್ ಹಫೀಜ್ ,ಶಾಹಿದ್ ಎಂಬವರನ್ನು ಬಂಧಿಸಿದ್ದಾರೆ ಆರೋಪಿಗಳು ಬಜಾಲ್ ಮತ್ತು ಅಡ್ಡೂರು ನಿವಾಸಿಗಳಾಗಿದ್ದಾರೆ ,ಬಂಧಿತರಿಂದ ಮಾರುತಿ ಕಾರು ಹಗ್ಗ ಕತ್ತಿ ವಶಕ್ಕೆ ಪಡೆಯಲಾಗಿದೆ