ಮಂಗಳೂರು: ಸ್ವಾಮಿ ವಿವೇಕಾನಂದರ 160ನೇ ಜನ್ಮ ದಿನಾಚರಣೆ ಅಂಗವಾಗಿ ಸಮರ್ಥ ಭಾರತ ಮತ್ತು ಮಿಥಿಕ್ ಸೊಸೈಟಿ ಆಯೋಜಿಸಿದ್ದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ಮಂಗಳೂರಿನ ರಿಶಲ್ ಬ್ರಿಟ್ನಿ ಫೆರ್ನಾಂಡಿಸ್ ಪ್ರಥಮ ಸ್ಥಾನ ಪಡೆದಿದ್ದಾರೆ.
ಬೆಂಗಳೂರು ಮತ್ತು ಸಂಸ್ಕೃತ ವಿಶ್ವವಿದ್ಯಾಲಯದ ಮೌಲ್ಯಮಾಪನ ಮತ್ತು ಆಡಳಿತ ವಿಭಾಗ ನಿವೃತ್ತ ಕುಲಸಚಿವ ಡಾ.ಕೊಟ್ರೇಶ್, ಹಿರಿಯ ಅಂಕಣಕಾರ, ಬರಹಗಾರ, ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ, ಸಂಪಾದಕ ದು. ಗು. ಲಕ್ಷ್ಮಣ್, ರಾಜೇಶ್ ಪದ್ಮಾರ್ , ಲೇಖಕ ಮತ್ತು ಬೆಂಗಳೂರಿನ ರಾಷ್ಟ್ರೀಯ ಪರಿಷತ್ ನ ಪ್ರಾಧ್ಯಾಪಕರಿಂದ ಸನ್ಮಾನ ಸ್ವೀಕರಿಸಿದರು. ರಿಶಲ್ ಬ್ರಿಟ್ನಿ ಪ್ರಸ್ತುತ ಮೂಡಬಿದಿರೆಯ ಶ್ರೀ ಮಹಾವೀರ ಕಾಲೇಜಿನಲ್ಲಿ ಅಂತಿಮ ಬಿ.ಎ. ವ್ಯಾಸಂಗ ಮಾಡುತ್ತಿದ್ದಾರೆ.