ಮಂಗಳೂರು: ಇತ್ತೀಚೆಗೆ ಕೆಲವು ತಿಂಗಳ ಹಿಂದೆ ದೈವದ ನರ್ತನ ಮಾಡುತ್ತಿದ್ದ ಸಂದರ್ಭದಲ್ಲೇ ದೈವ ನರ್ತಕ ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಎಡಮಂಗಲ ಗ್ರಾಮದಲ್ಲಿ ನಡೆದಿದೆ. ಕಾಂತು ಅಜಿಲ ಮೃತಪಟ್ಟ ದೈವ ನರ್ತಕ. ಈ ಘಟನೆಯ ಬಳಿಕ ಆ ಗ್ರಾಮದ ಜನ ದೈವದ ನರ್ತಕನ ಹುಡುಕಾಟದಲ್ಲಿ ತೊಡಗಿದ್ದರು.
ಇದೇ ವಿಚಾರದಲ್ಲಿ ಊರವರು ಪ್ರಶ್ನಾಚಿಂತನೆ ಇಟ್ಟಾಗ ಮೃತಪಟ್ಟವರ ಮಗನೇ ದೈವ ನರ್ತಕನಾಗಬೇಕು ಅಂತ ಕಂಡು ಬಂದಿತ್ತು. ಪ್ರಶ್ನೆಯಲ್ಲಿ ಕಂಡು ಬಂದಂತೆ ದೈವದ ಮುಂದೆ ಮೃತಪಟ್ಟ ದೈವ ನರ್ತಕನ ಮಕ್ಕಳಿಗೆ ದೀಕ್ಷೆ ಬೂಳ್ಯ ನೀಡಲಾಯಿತು.
ಕಾಂತು ಅಜಿಲನ ಮಕ್ಕಳಾದ ಮೋನಪ್ಪ ಹಾಗೂ ದಿನೇಶ್ ಅವರು ದೀಕ್ಷೆ ಬೂಲ್ಯ ಪಡೆದು, ಸಂಬಂಧಪಟ್ಟ ನಾಲ್ಕು ಗ್ರಾಮಕ್ಕೆ ದೈವಗಳ ಸೇವೆಯ ಜವಾಬ್ದಾರಿ ಹೊತ್ತರು. ಈ ಅಪೂರ್ವ ಕ್ಷಣವನ್ನು ಊರ ಹಾಗೂ ಪರವೂರಿನ ದೈವಭಕ್ತರು ಕಣ್ತುಂಬಿಕೊಂಡರು.