ಮಂಗಳೂರು: ಜೆಸಿಐ ಸಪ್ತಾಹ 2023 ಕಾರ್ಯಕ್ರಮದ ಪ್ರಯುಕ್ತ ಎಂಡಿಎಸ್ ಪದವಿ ಪೂರ್ವ ಕಾಲೇಜು, ಕುಳಾಯಿ ಇಲ್ಲಿ ಜೆಸಿಐ ಸುರತ್ಕಲ್ ವತಿಯಿಂದ ಹೆಲ್ತ್ ಕ್ಯಾಂಪ್ ನಡೆಯಿತು.
ಅನಿಲ್ ರಾಮಾನುಜಂ, ಪ್ರಾಪ್ ದೀಕ್ಷಾ ಆಪ್ಟಿಕಲ್ಸ್, ಮಂಗಳೂರು ಇವರು ಶಾಲಾ ಮಕ್ಕಳಿಗೆ ಕಣ್ಣು ಪರೀಕ್ಷೆಯನ್ನು ಮಾಡಿದರು. ಮುಖ್ಯ ಅತಿಥಿ ಜೆ ಸಿ ಆದರ್ಶ್ ಶೆಟ್ಟಿ , ಅಧ್ಯಕ್ಷರು, ಭಾರತಿ ಎಜುಕೇಷನಲ್ ಟ್ರಸ್ಟ್, ಕುಳಾಯಿ ಇವರು ದೀಪ ಬೆಳಗಿಸುವ ಮೂಲಕ ಜೆಸಿಐ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಪೂರ್ವಾಧ್ಯಕ್ಷರು ಜೆ ಸಿ ಪ್ರವೀಣ್ ಶೆಟ್ಟಿ, ಜೆಸಿಐ ಸುರತ್ಕಲ್ ನ ಅಧ್ಯಕ್ಷರು ಜೆಸಿ ಜಯರಾಜ್ ಆಚಾರ್ಯ, ಜೆ ಸಿ ಶಶಿಕುಮಾರ್ ಶೆಟ್ಟಿ, ಜೆಸಿ ಜ್ಯೋತಿ ಪಿ ಶೆಟ್ಟಿ, ಜ್ಯೋತಿ ಜೆ ಶೆಟ್ಟಿ, ಜೆಸಿ ಸವಿತಾ ಶೆಟ್ಟಿ, ಜೆಸಿ ಸೌಮ್ಯ ಶೆಟ್ಟಿ,ಜೆಸಿ ರಾಹುಲ್ ಸುವರ್ಣರವರು ಉಪಸ್ಥಿತರಿದ್ದರು.