ಉಡುಪಿ: ಮಧ್ಯರಾತ್ರಿ ವೈದ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿ ಬೈಲೂರಿನಲ್ಲಿ ನಡೆದಿದೆ.
ರಕ್ಷಿಸಲ್ಪಟ್ಟ ಒರಿಸ್ಸಾದ ಭಿಕಾಯ್ (55) ಎಂದು ಗುರುತಿಸಲಾಗಿದೆ. ಈತ 2 ದಿನಗಳ ಹಿಂದೆ ಮಧ್ಯರಾತ್ರಿ ಒಂದು ಗಂಟೆಗೆ ವ್ಯೆದ್ಯರೊಬ್ಬರ ಮನೆಗೆ ಹೋಗಿ ದಾಂಧಲೆ ನಡೆಸಿದ್ದು, ರಕ್ಷಣೆ ಮಾಡಲು ಹೋದ ವೇಳೆ ತಪ್ಪಿಸಿಕೊಂಡು ಓಡಿಹೋಗಿದ್ದನು ಎನ್ನಲಾಗಿದೆ. ಇಂದು ಬೈಲೂರಿನಲ್ಲಿ ಪತ್ತೆಯಾಗಿದ್ದು, ವಿಶುಶೆಟ್ಟಿ ಅವರು ರಕ್ಷಿಸಿದ್ದಾರೆ. ಸಂಬಂಧಿಕರು ಉಡುಪಿ ನಗರ ಪೊಲೀಸ್ ಠಾಣೆ ಅಥವಾ ಬಾಳಿಗ ಆಸ್ಪತ್ರೆ ಸಂಪರ್ಕಿಸಬಹುದು.
ರಕ್ಷಣಾ ಕಾರ್ಯಾಚರಣೆಯಲ್ಲಿ ಬೈಲೂರಿನ ಪ್ರವೀಣ್, ರಾಮದಾಸ್ ಪಾಲನ್ ಮತ್ತು ರಾಜೇಶ್ ಹೇರೂರು ಸಹಕರಿಸಿದರು.