News Karnataka Kannada
Monday, April 29 2024
ಉಡುಪಿ

ಮಧ್ಯರಾತ್ರಿ ವೈದ್ಯರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ವ್ಯಕ್ತಿಯ ಸೆರೆ

Man arrested for breaking into doctor's house in the middle of the night
Photo Credit : News Kannada

ಉಡುಪಿ: ಮಧ್ಯರಾತ್ರಿ ವೈದ್ಯರೊಬ್ಬರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದ ಮಾನಸಿಕ ಅಸ್ವಸ್ಥ ವ್ಯಕ್ತಿಯನ್ನು ಸಮಾಜ ಸೇವಕ ವಿಶುಶೆಟ್ಟಿ ರಕ್ಷಿಸಿ ಬಾಳಿಗ ಆಸ್ಪತ್ರೆಗೆ ದಾಖಲಿಸಿದ ಘಟನೆ ಉಡುಪಿ ಬೈಲೂರಿನಲ್ಲಿ ನಡೆದಿದೆ.

ರಕ್ಷಿಸಲ್ಪಟ್ಟ ಒರಿಸ್ಸಾದ ಭಿಕಾಯ್ (55) ಎಂದು ಗುರುತಿಸಲಾಗಿದೆ. ಈತ 2 ದಿನಗಳ ಹಿಂದೆ ಮಧ್ಯರಾತ್ರಿ ಒಂದು ಗಂಟೆಗೆ ವ್ಯೆದ್ಯರೊಬ್ಬರ ಮನೆಗೆ ಹೋಗಿ ದಾಂಧಲೆ ನಡೆಸಿದ್ದು, ರಕ್ಷಣೆ ಮಾಡಲು ಹೋದ ವೇಳೆ ತಪ್ಪಿಸಿಕೊಂಡು ಓಡಿಹೋಗಿದ್ದನು ಎನ್ನಲಾಗಿದೆ. ಇಂದು ಬೈಲೂರಿನಲ್ಲಿ ಪತ್ತೆಯಾಗಿದ್ದು, ವಿಶುಶೆಟ್ಟಿ ಅವರು ರಕ್ಷಿಸಿದ್ದಾರೆ. ಸಂಬಂಧಿಕರು ಉಡುಪಿ ನಗರ ಪೊಲೀಸ್ ಠಾಣೆ ಅಥವಾ ಬಾಳಿಗ ಆಸ್ಪತ್ರೆ ಸಂಪರ್ಕಿಸಬಹುದು.

ರಕ್ಷಣಾ ಕಾರ್ಯಾಚರಣೆಯಲ್ಲಿ ಬೈಲೂರಿನ ಪ್ರವೀಣ್, ರಾಮದಾಸ್ ಪಾಲನ್ ಮತ್ತು ರಾಜೇಶ್ ಹೇರೂರು ಸಹಕರಿಸಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು