ಮಂಗಳೂರು: ಸೌಜನ್ಯ ಪ್ರಕರಣದ ಮರು ತನಿಖೆಗೆ ಆಗ್ರಹಿಸಿ ಕರಾವಳಿ ಬಿಜೆಪಿಯ ಬೃಹತ್ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿದ್ದಾರೆ. ಪ್ರಕರಣ ನಡೆದ ಹನ್ನೆರಡೇ ದಿನದಲ್ಲಿ ಸಿಐಡಿಗೆ ಕೊಟ್ಟಿದ್ದು ಬಿಜೆಪಿ ಸರ್ಕಾರ. ಅ ಬಳಿಕ ಸಿಬಿಐ ತೀರ್ಪಿನ ಬಳಿಕ ಈಗ ಮತ್ತೆ ಹೋರಾಟ ಆಗ್ತಾ ಇದೆ. ಸೌಜನ್ಯ ಕೊಲೆಯಾಗಿರೋದು ಸತ್ಯ, ಹಾಗಿರುವಾಗ ಅಪರಾಧಿ ಯಾರು?
ಹೀಗಾಗಿ ಇದರ ತನಿಖೆ ಆಗಬೇಕು ಅನ್ನೋದು ಬಿಜೆಪಿ ಆಗ್ರಹ. ರಾಜ್ಯ ಸರ್ಕಾರ ಮರು ತನಿಖೆಗೆ ತಕ್ಷಣ ತೆಗೆದುಕೊಳ್ಳಬೇಕು. ಈ ಪ್ರಕರಣದ ಹಿಂದೆ ಯಾರೇ ಇದ್ದರೂ ಅವರ ಬಂಧನ ಆಗಬೇಕು. ಮಾಜಿ ಶಾಸಕರು ಇದರ ಹಿಂದೆ ಯಾರಿದ್ದಾರೆ ಗೊತ್ತಿದೆ ಅಂದಿದ್ದಾರೆ.
ಹೀಗಾಗಿ ಸತ್ಯ ಹೇಳಿ, ನಾವು ಕೇಂದ್ರದ ಮೂಲಕ ನಿಮಗೆ ಭದ್ರತೆ ಕೊಡ್ತೇವೆ. ನಾವೆಲ್ಲರೂ ಸಿಎಂ ಮತ್ತು ರಾಜ್ಯಪಾಲರನ್ನ ಭೇಟಿಯಾಗ್ತೇವೆ. ಸೌಜನ್ಯಗೆ ನ್ಯಾಯ ಕೊಡಿಸೋ ಕೆಲಸ ಮತ್ತೆ ಬಿಜೆಪಿ ಮಾಡಲಿದೆ. ಸೌಜನ್ಯ ಜೊತೆ ಇಡೀ ದ.ಕ ಜಿಲ್ಲೆ ಇದೆ, ಹಾಗಾಗಿ ನಾವು ಹೋರಾಟ ಮಾಡ್ತೇವೆ.