ಅಳ್ಳಾವರ : ಸರ್ಕಾರದ ಆದೇಶದಂತೆ ಶಕ್ತಿ ಯೋಜನೆಯ ಅಡಿಯಲ್ಲಿ ಮಹಿಳೆಯರು ಮತ್ತು ವಿದ್ಯಾರ್ಥಿಗಳು ಉಚಿತ ಪ್ರಯಾಣ ಮಾಡಬಹುದಾಗಿದ್ದು,ಪಟ್ಟಣದ ಬಸ್ ನಿಲ್ದಾಣದಲ್ಲಿ ಶಕ್ತಿ ಯೋಜನೆಗೆ ತಾಲೂಕಾ ದಂಡಾಧಿಕಾರಿ ಬಸವರಾಜ ಬೆಣ್ಣೆಶಿರೂರ ರಿಬ್ಬನ್ ಕಟ್ ಮಾಡಿ,ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು.
ತಮ್ಮ ತಮ್ಮ ಊರಿಗೆ ಹೋಗುವ ಮಹಿಳೆಯರು ಉತ್ಸಾಹದಿಂದ ಬಂದು ಶಕ್ತಿ ಯೋಜನೆಯಲ್ಲಿ ಪಾಲ್ಗೊಂಡಿದ್ದು,ಸರ್ಕಾರದ ಆದೇಶದನ್ವಯ ಅಧಿಕಾರಿಗಳು ಮಹಿಳೆಯರಿಗೆ ಶೂನ್ಯ ದರದ ಟಿಕೆಟ್ ನೀಡುವ ಮೂಲಕ ಶುಭ ಕೋರಿದರು. ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಸಿಬ್ಬಂದಿ,ಡಿಪೋ ಮ್ಯಾನೇಜರ್,ಸಚಿವ ಸಂತೋಷ್ ಲಾಡ್ ಆಪ್ತ ಸಹಾಯಕ ಸತ್ತಾರ್ ಭಾತಕಂಡೆ,ಪಿ.ಎಸ್.ಐ ಪ್ರವೀಣ ನೇಸರಗಿ,ಹಾಗೂ ಕಾಂಗ್ರೆಸ್ ಪಕ್ಷದ ಮುಖಂಡರುಗಳು ಇದ್ದರು.