ಮಂಗಳೂರು: ಎಂಸಿಎಫ್ ವತಿಯಿಂದ ನಿರ್ಮಿಸಿಕೊಟ್ಟ ಕೂಳೂರು ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮೊದಲ ಮಹಡಿಯ ಕಟ್ಟಡವನ್ನು ಮಂಗಳೂರು ನಗರ ಉತ್ತರ ಶಾಸಕ ಡಾ. ಭರತ್ ಶೆಟ್ಟಿ ಲೋಕಾರ್ಪಣೆಗೊಳಿಸಿದರು.
ಶಾಸಕರಾದ ಡಾ. ಭರತ್ ಶೆಟ್ಟಿ ಆರೋಗ್ಯ ಕ್ಷೇತ್ರದಲ್ಲಿ ವಿಶೇಷವಾದ ಅಭಿವೃದ್ಧಿಯ ಕಾಳಜಿಯನ್ನು ಹೊಂದಿದ್ದು, ಅದಕ್ಕೆ ಸೂಕ್ತ ಅನುದಾನವನ್ನು ಹೊಂದಿಸಲು ಪ್ರಮುಖ ಕಾರ್ಯಯೋಜನೆ ಹೊಂದಿರುವ ಭಾಗವಾಗಿ ಎಂಸಿಎಫ್ ಕಂಪೆನಿಗೆ ವಿಶೇಷ ಶಿಫಾರಸ್ಸು ಮಾಡಿ ಕಂಪೆನಿಯ ಸಾಮಾಜಿಕ ಬದ್ಧತಾ ನಿಧಿಯಿಂದ ಅನುದಾನ ಕೊಡಿಸಿದ್ದಾರೆ.
ಎಂಸಿಎಫ್ ಅಧಿಕಾರಿ ಗಿರೀಶ್, ಎಂಸಿಎಫ್ ವೈದ್ಯಾಧಿಕಾರಿ ಡಾ. ಯೋಗೀಶ್, ಮನಪಾ ಸದಸ್ಯರಾದ ಸುಮಂಗಲಾ ರಾವ್, ಕಿರಣ್ ಕುಮಾರ್, ಅನಿಲ್ ಕುಮಾರ್, ನಗರ ಪ್ರಾಥಮಿಕ ವೈದ್ಯಾಧಿಕಾರಿ ಚೈತ್ರಾ,ಮಾಜಿ ವೈದ್ಯಾಧಿಕಾರಿ ಡಾ. ಪ್ಯಾಟ್ರಿಕ್, ಆರೋಗ್ಯ ರಕ್ಷಾ ಸಮಿತಿ ಸದಸ್ಯರು, ಎಂಸಿಎಫ್ ಸಿಬ್ಬಂದಿ ವರ್ಗ, ಆರೋಗ್ಯ ಕೇಂದ್ರದ ಸಿಬ್ಬಂದಿ ವರ್ಗ, ಪ್ರಮುಖರು, ಗಣ್ಯರು ಉಪಸ್ಥಿತರಿದ್ದರು.