ಮಂಗಳೂರು: ಪಚ್ಚನಾಡಿಯ ಆಶ್ರಯ ನಗರದಲ್ಲಿ ನೂತನ ಅಂಗನವಾಡಿ ಕೇಂದ್ರ ನಿರ್ಮಾಣವಾಗಿದ್ದು ಶಾಸಕರಾದ ಡಾ. ಭರತ್ ಶೆಟ್ಟಿ ಅವರು ಉದ್ಘಾಟಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕರು ಎಂಸಿಎಫ್ ಸಾಮಾಜಿಕ ಬದ್ಧತಾ ನಿಧಿಯಡಿ ಈ ಅಂಗನವಾಡಿ ಮಾತ್ರವಲ್ಲದೆ ವಾರ್ಡ್ ನಂಬರ್ 19ರಲ್ಲಿ ಸಿಎಸ್ಆರ್ ನಿಧಿಯಿಂದ ಹಾಗೂ ಸರಕಾರದ ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಲಾಗಿದೆ. ಸಾರ್ವಜನಿಕರ ಸಹಕಾರ ಅವಶ್ಯಕ ಎಂದು ಶಾಸಕರು ನುಡಿದರು.
ಕಾರ್ಯಕ್ರಮದಲ್ಲಿ ಅಂಗನವಾಡಿ ಕೇಂದ್ರದ ನಿರ್ಮಾಣಕ್ಕೆ ಒತ್ತಾಸೆಯಾಗಿ ನಿಂತ ಶಾಸಕರನ್ನು, ಕಾರ್ಪೊರೇಟರ್ ಗಳನ್ನು ಎಂ ಸಿ ಎಫ್ ಅಧಿಕಾರಿಗಳನ್ನು ಅಭಿನಂದಿಸಲಾಯಿತು.
ಸುಮಾರು 25 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಅಂಗಡಿ ಬೃಹತ್ ಪಾಠಶಾಲಾ ಕೊಠಡಿ ಅಡುಗೆಮನೆ ಸಂಗ್ರಹ ಕೊಠಡಿ ಶೌಚಾಲಯ ಮಕ್ಕಳಿಗೆ ಆಟದ ಕೇಂದ್ರವನ್ನ ಇದು ಹೊಂದಿದೆ. ಮಕ್ಕಳ ಸುರಕ್ಷತೆಗಾಗಿ ಸುತ್ತಲೂ ಧರೆಯನ್ನು ನಿರ್ಮಿಸಲಾಗಿದೆ ಅತ್ಯಂತ ಸುಸಜ್ಜಿತ ಅಂಗನವಾಡಿ ಕೇಂದ್ರಗಳಲ್ಲಿ ಪಚ್ಚನಾಡಿ ಆಶ್ರಯ ನಗರದ ಈ ಕೇಂದ್ರವು ಇಂದು ಗುರುತಿಸಲ್ಪಟ್ಟಿದೆ.
ಕಾರ್ಯಕ್ರಮದಲ್ಲಿ ಎಂಸಿಎಫ್ ನ ಅಧಿಕಾರಿ ಡಾ.ಯೋಗೀಶ್ ಹಾಗೂ ಇತರ ಪ್ರಮುಖರು, ಮಹಿಳಾ ಮರ್ತು ಶಿಶು ಅಭಿವೃದ್ಧಿ ಇಲಾಖೆಯ ಸ್ಥಳೀಯ ಮೇಲ್ವಿಚಾರಕಿ ಭವ್ಯ, ಭಾಜಪಾ ಜಿಲ್ಲಾ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪೂಜಾ ಪ್ರಶಾಂತ್ ಪೈ, ಜಿಲ್ಲಾ ಒಬಿಸಿ ಮೋರ್ಚಾ ಉಪಾಧ್ಯಕ್ಷ ರಾಮ ಮುಗ್ರೊಡಿ, ಭೂ ನ್ಯಾಯ ಮಂಡಳಿ ಸದಸ್ಯರಾದ ಸಂದೀಪ್ ಪಚ್ಚನಾಡಿ, ಭಾಜಪಾ ವಿವಿಧ ಮೋರ್ಚಾಗಳ ಪ್ರಮುಖರು ಮತ್ತು ಕಾರ್ಯಕರ್ತರು, ಗುತ್ತಿಗೆದಾರ ದಯಾನಂದ ಉಪಸ್ಥಿತರಿದ್ದರು.