News Karnataka Kannada
Monday, May 06 2024
ಮಂಗಳೂರು

3.21 ಕೋಟಿ ರೂ.ವೆಚ್ಚದ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದ ಡಾ. ಭರತ್ ಶೆಟ್ಟಿ

Mangaluru: Dr. B.R. Manjunath performed 'Guddali Pooja' for various works at a cost of Rs.3.21 crore. Bharath Shetty
Photo Credit : News Kannada

ಮಂಗಳೂರು: ಮಂಗಳೂರು ನಗರ ಉತ್ತರ ಕ್ಷೇತ್ರದ ಪಾಲಿಕೆ ವ್ಯಾಪ್ತಿಯ ಹೊಸಬೆಟ್ಟು ವಾರ್ಡ್ ನಂ.8ರಲ್ಲಿ 3.21 ಕೋಟಿ ರೂ.ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಶಾಸಕರಾದ ಡಾ.ಭರತ್ ಶೆಟ್ಟಿ ವೈ ಗುದ್ದಲಿಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು ಕಡಂಬೋಡಿ ರಸ್ತೆ ಕಾಂಕ್ರೀಟಿಕರಣ ಕಾಮಗಾರಿ 1 ಕೋ.ರೂ, ಮೂಡುಪಟ್ಣ ಜಾರಂದಾಯ ದೈವಸ್ಥಾನ ರಸ್ತೆಗೆ 25 ಲ.ರೂ, ಶಿವಗಿರಿ ನಗರ ರಸ್ತೆ ಕಾಂಕ್ರಿಟ್‍ಗೆ 38 ಲ.ರೂ.,ಎನ್‍ಎಂಪಿಟಿ ಕಾಲೊನಿ ರಸ್ತೆ ಕಾಂಕ್ರಿಟ್‍ಗೆ 38 ಲಕ್ಷ ರೂ., ನವಗಿರಿ ನಗರ ರಾಜಕಾಲುವೆಗೆ ತಡೆಗೋಡೆ ನಿರ್ಮಾಣಕ್ಕೆ 40 ಲಕ್ಷ ರೂ.ವೃಂದಾವನ ನಗರ ತಡೆಗೋಡೆಗೆ 50 ಲ.ರೂ, ಗ್ರೀನ್ ಪಿಚ್ ಸಮೀಪ ರಸ್ತೆ ಅಭಿವೃದ್ಧಿಗೆ 30 ಲ.ರೂ ಕಾದಿರಿಸಲಾಗಿದ್ದು, ಈ ವಾರ್ಡ್ ಒಂದಕ್ಕೆ ಕಳೆದ 2 ವರ್ಷದಲ್ಲಿ ಅಂದಾಜು 10 ಕೋ.ರೂ ಅನುದಾನ ನೀಡಿ ಹಂತ ಹಂತವಾಗಿ ಅಭಿವೃದ್ಧಿಗೆ ಹೆಜ್ಜೆ ಇರಿಸಲಾಗಿದೆ. ಸಿಎಂ ವಿಶೇಷ ಅನುದಾನ, ಲೋಕೋಪಯೋಗಿ, ಸಮಾಜ ಕಲ್ಯಾಣ ಇಲಾಖಾ ಸಚಿವರಾದ ಶ್ರೀನಿವಾಸ ಪೂಜಾರಿ, ನಗರಾಭಿವೃದ್ಧಿ ಸಚಿವರಾದ ಬಸವರಾಜ್ ಭೈರತಿ ಅವರು ಅನುದಾನ ಒದಗಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯಿಂದ ತಡೆಗೋಡೆ ನಿರ್ಮಾಣಕ್ಕೆ ಕ್ರಮ ಜರುಗಿಸಲಾಗಿದೆ ಎಂದರು.

ಸ್ಥಳೀಯವಾಗಿ ಒಳಚರಂಡಿ ವ್ಯವಸ್ಥೆಯನ್ನು ಪೂರ್ಣಗೊಳಿಸುವುದಕ್ಕೆ ಒತ್ತು ನೀಡಲಾಗುವುದು. ಎಡಿಬಿ 2ರ ಹಂತದಲ್ಲಿ ಅನುದಾನ ನೀಡಲಾಗಿದೆ. ಸಂಪರ್ಕ ಮಾಡುವುದು ಬಾಕಿಯಿದೆ. ಈ ಹಿಂದೆ ಕೈ ಬಿಡಲಾಗಿದ್ದ ಒಳಚರಂಡಿ ವ್ಯವಸ್ಥೆ ಪೂರ್ಣಕ್ಕೆ ಸಿಎಂ ಆನುದಾನ ನೀಡುವ ಭರವಸೆ ವ್ಯಕ್ತಪಡಿಸಿದ್ದಾರೆ ಎಂದು ಶಾಸಕರು ನುಡಿದರು.

ಸ್ಥಳೀಯ ಮನಪಾ ಸದಸ್ಯ ವರುಣ್‍ಚೌಟ, ಪ್ರಮುಖರಾದ ವಿಠಲ್ ಸಾಲಿಯಾನ್, ಓಂಪ್ರಕಾಶ್ ಶೆಟ್ಟಿಗಾರ್, ಪಿ.ದಯಾಕರ್, ಆನಂದ್ ಭಂಡಾರಿ, ಬಿ.ಎ ಶೆಟ್ಟಿ, ಶಾಂತಾ ರವೀಂದ್ರ, ವಸಂತ್ ಹೊಸಬೆಟ್ಟು, ರಮೇಶ್ ಅಳಪೆ, ಪವಿತ್ರ ನಿರಂಜನ್,ಬಾಲಕೃಷ್ಣ ಶೆಟ್ಟಿ ಕೆಂಚನೂರು,ವಸಂತ್ ಹೊಸಬೆಟ್ಟು, ರಾಜೇಶ್ ಶೆಟ್ಟಿ, ಲೀಲಾವತಿ, ಸುದರ್ಶನ್ ಮೆಂಡನ್, ರಾಜೇಶ್, ಪ್ರಕಾಶ್ ಕಡಂಬೋಡಿ, ರಾಜೇಶ್ ಭಂಡಾರಿ, ದಿವ್ಯಾ, ದೀಪ, ವಿಶ್ವನಾಥ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು