News Karnataka Kannada
Friday, May 03 2024
ಮಂಗಳೂರು

ಚುನಾವಣೆಗಾಗಿ ಬರ ಪರಿಹಾರ, ಕಾವೇರಿ ನೀರು ಹಂಚಿಕೆ ವಿವಾದಕ್ಕೆ ಅಣ್ಣಾಮಲೈ ಪ್ರತಿಕ್ರಿಯೆ

ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರದಿಂದ ತಾರತಮ್ಯ ವಿಚಾರ ಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.
Photo Credit : NewsKarnataka

ಮಂಗಳೂರು: ಕರ್ನಾಟಕಕ್ಕೆ ಬರ ಪರಿಹಾರ ನೀಡುವ ವಿಚಾರದಲ್ಲಿ ಕೇಂದ್ರ ಸರಕಾರದಿಂದ ತಾರತಮ್ಯ ವಿಚಾರ ಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಪ್ರತಿಕ್ರಿಯೆ ನೀಡಿದ್ದಾರೆ.

ಇಂದು ನಗರದಲ್ಲಿ ಬಿಜೆಪಿ ಪರ ಮತಯಾಚಿಸಲು ಬಂದ ರಾಜ್ಯಾಧ್ಯಕ್ಷ ಅಣ್ಣಾಮಲೈ ಮಾಧ್ಯಮದೊಂದಿಗೆ ಮಾತನಾಡಿ, ಯುಪಿಎ ಸರಕಾರಕ್ಕೆ 10 ವರ್ಷದಲ್ಲಿ ರಾಜ್ಯ ಸರಕಾರಗಳು ಕೇಳಿದ ಬರ ಪರಿಹಾರದ ಪೈಕಿ 8 % ಮಾತ್ರ ಪರಿಹಾರ ಸಿಕ್ಕಿದೆ. 2014 -2022 ವರೆಗೂ ಎನ್ ಡಿ ಎ, ಸರಕಾರಗಳ ಬೇಡಿಕೆಯ ಪೈಕಿ 38 % ನೀಡಿದ್ದಾರೆ.

ತಮಿಳುನಾಡು -ಕರ್ನಾಟಕದ ಸರಕಾರಗಳು ಚುನಾವಣೆಗೂ ಮುನ್ನ ಇಷ್ಟು ಕೊಡಿ ಅಷ್ಟು ಅಂತ ಕೇಳುತ್ತಿದ್ದಾರೆ. ಈ ಮೂಲಕ ಒಂದು ಪೊಲಿಟಿಕಲ್ ನಾರೇಟಿವ್ ಬಿಲ್ಡ್ ಮಾಡುತ್ತಿದ್ದಾರೆ. ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಧೀಶರು ಯಾರಿಗೆ ಏನು ಕೊಡಬೇಕು ಅದನ್ನ ಕೊಟ್ಟೆ ಕೊಡುತ್ತೀವಿ ಅಂದಿದ್ದಾರೆ.

ತಮಿಳುನಾಡಿನಲ್ಲಿ ಪ್ರವಾಹ ಪರಿಹಾರ ಎಂಬ ನಾರೇಟಿವ್ ಸೆಟ್ ಮಾಡುತ್ತಿದ್ದಾರೆ. ನಾವು ಕೂಲಂಕುಷವಾಗಿ ಎಲ್ಲವನ್ನ ತಾಳೆ ಹಾಕಿದಾಗ ಎನ್ ಡಿ ಎ ಯಾರಿಗೂ ತಾರತಮ್ಯ ಮಾಡಿಲ್ಲ ಅನ್ನೋದು ಗೊತ್ತಾಗುತ್ತೆ ಎಂದಿದ್ದಾರೆ.

ಇನ್ನು ಕರ್ನಾಟಕ-ತಮಿಳುನಾಡು ಕಾವೇರಿ ನೀರು ಹಂಚಿಕೆ ವಿವಾದದ ಕುರಿತು ಪ್ರತಿಕ್ರಿಯಿಸಿದ ಅವರು, ಕರ್ನಾಟಕ ಹಾಗು ತಮಿಳುನಾಡು ನಡುವೆ ಸಹೋದರತ್ವದ ಬಾಂಧವ್ಯವಿದೆ. ಕಾಂಗ್ರೆಸ್ ತಪ್ಪು ಆಡಳಿತವೇ ಕಾವೇರಿ ವಿವಾದಕ್ಕೆ ಕಾರಣ, ಎಲ್ಲವೂ ಕಾವೇರಿ ನಿರ್ವಹಣಾ ಪ್ರಾಧಿಕಾರ, ಕೇಂದ್ರ ಸರಕಾರದ ಅನುಗುಣ ಚೆನ್ನಾಗಿ ನಡಿತಿದೆ.

ಇದರಲ್ಲಿ ಭಾವನೆಗಳನ್ನ ಮುಂದಿಡೋ ಬೇಡ. ಕರ್ನಾಟಕಕ್ಕೆ ಸಮರ್ಪಕ ಕುಡಿಯುವ ನೀರು ಸಿಗಲು ನಾವೆಲ್ಲಾ ಬೆಂಬಲ ನೀಡುತ್ತೇವೆ. ಇದರಲ್ಲಿ ರಾಜಕೀಯ ಮಾತನಾಡುವ ಪ್ರಶ್ನೆ ಇಲ್ಲ.

ಬಿಜೆಪಿ ಸರಕಾರವಿದ್ದಾಗ ಕಾವೇರಿ ವಿವಾದವೇ ಇರೋದಿಲ್ಲ. ಇದರಲ್ಲಿ ರಾಜಕೀಯ ಮಾಡುವ ಅವಶ್ಯಕತೆಯಿಲ್ಲ. ನಾನು ಇತರೆ ರಾಜಕಾರಣಿಗಳ ತರಹ ಕರ್ನಾಟಕ -ತಮಿಳುನಾಡು ಎಂಬ ಅರ್ಥದಲ್ಲಿ ಮಾತನಾಡೋದಿಲ್ಲ. ಎರಡು ರಾಜ್ಯಕ್ಕೂ ಒಳ್ಳೇದು ಆಗಬೇಕು ಅದರಲ್ಲಿ ಯಾವುದೇ ಮಾತಿಲ್ಲ ಎಂದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು