ಬೆಳ್ತಂಗಡಿ: ಯುವಕರು ಮನಸ್ಸು ಮಾಡಿದರೆ,ಅವರಿಗೆ ಅವಕಾಶ ಕೊಟ್ಟರೆ ಅವರು ಏನನ್ನೂ ಮಾಡಲು ಶಕ್ತರು. ಅವರ ಸಾಧನೆಯ ಹಿಂದೆ ಪರಿಶ್ರಮ ,ಶ್ರದ್ದೆ ,ಆಸಕ್ತಿ ಇದೆ. ವಿಭಿನ್ನತೆಯಲ್ಲಿ ಏಕತೆ ಎಂಬಂತೆ ವಿಪ್ರರು ನಾವೆಲ್ಲ ಒಂದು , ಸಮಾನರೆಂಬುದನ್ನು ಸಮಾಜಕ್ಕೆ ತೋರಿಸಿಕೊಟ್ಟಿದ್ದಾರೆ ಎಂದು ಖ್ಯಾತ ನ್ಯಾಯವಾದಿ ಬಿ.ಕೆ.ಧನಂಜಯ ರಾವ್ ಹೇಳಿದರು.
ಅವರು ಅ 23 ರಂದು ಉಜಿರೆಯ ಅಜ್ಜರಕಲ್ಲು ಕ್ರೀಡಾಂಗಣದಲ್ಲಿ ದ .ಕ.ಜಿಲ್ಲಾ ತುಳು ಶಿವಳ್ಳಿ ಬ್ರಾಹ್ಮಣರ ಸಂಘದ ಸಹಯೋಗದೊಂದಿಗೆ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾ (ರಿ) ಹಾಗೂ ತಾಲೂಕು ತುಳು ಶಿವಳ್ಳಿ ವಿಪ್ರ ಯುವ ವೇದಿಕೆ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಶಿವಳ್ಳಿ ಯುವ ವಿಪ್ರ ಪರಿಷತ್ ಉಜಿರೆ ನೇತೃತ್ವದಲ್ಲಿ ನಡೆದ ಎರಡು ದಿನಗಳ ಜಿಲ್ಲಾ ಮಟ್ಟದ ನಾಕೌಟ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ವಿಪ್ರ ಕಪ್ -2022” ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಜೇತ ತಂಡಗಳಿಗೆ ಪ್ರಶಸ್ತಿ ಫಲಕ,ಸ್ಮರಣಿಕೆ ಪುರಸ್ಕರಿಸಿ ಮಾತನಾಡುದರು.
ಬಂಟ್ವಾಳ ತುಳು ಶಿವಳ್ಳಿ ಮಹಿಳಾ ಘಟಕದ ಅಧ್ಯಕ್ಷೆ ಸುಜಾತ ಸೋಮಯಾಜಿ ವಿಪ್ರ ಸಮಾಜ ಒಗ್ಗಟ್ಟಾಗಬೇಕು. ನಮ್ಮ ಸಂಘಟನೆ ಬಲವಾಗಬೇಕು. ಕ್ರೀಡಾಕೂ ಟದ ಮೂಲಕ ನಮ್ಮ ಸಂಘಟನೆ ಬಲಿಷ್ಠ ವಾಗಿ ಎಲ್ಲ ಸವಾಲು, ಸಮಸ್ಯೆಗಳನ್ನು ಎದುರಿಸುವಂತಾಗಬೇಕು ಎಂದು ನುಡಿದು ಶುಭ ಹಾರೈಸಿದರು.
ವೇದಿಕೆಯಲ್ಲಿ ಯುವವಿಪ್ರ ವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮು ಣ್ಣಾಯ ,ಕೂಟ ಮಹಾ ಜಗತ್ತು ಸಾಲಿಗ್ರಾಮ ಇದರ ಬೆಳ್ತಂಗಡಿ ಅಂಗಸಂಸ್ಥೆಯ ವಿಶ್ವನಾಥ ಹೊಳ್ಳ, ಶ್ರೀ ಸುಬ್ರಹ್ಮಣ್ಯ ಸ್ಸ್ಥಾನಿಕ ಬ್ರ್ಹಾಹ್ಮಣ ಸಭಾ ಅಧ್ಯಕ್ಷ ರಾಧಾಕೃಷ್ಣ ರಾವ್, ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ತ್ರಿವಿಕ್ರಮ ಹೆಬ್ಬಾರ್, ಹವ್ಯಕ ಸಂಘ ಉಜಿರೆ ವಲಯ ಅಧ್ಯಕ್ಷ ಶ್ಯಾಮ ಭಟ್ ಅತ್ತಾಜೆ, ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರು ಪ್ಪಾಡಿ, ಉಜಿರೆಯ ಉದ್ಯಮಿ ರವಿ ಚಕ್ಕಿತ್ತಾಯ , ಕೂಟ ಮಹಾ ಜಗತ್ತು ಬೆಳ್ತಂಗಡಿ ಅಂಗಸಂಸ್ಥೆಯ ಮಹಿಳಾ ಘಟಕ ಅಧ್ಯಕ್ಷೆ ನಳಿನಿ ಹೊಳ್ಳ, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಸಭಾ ಮಹಿಳಾ ಘಟಕ ಅಧ್ಯಕ್ಷೆ ರೇಖಾ ಸುಧೀರ್ ರಾವ್ ಮೊದಲಾದವರು ಉಪಸ್ಥಿತರಿದ್ದರು.
ಮುರಳಿಕೃಷ್ಣ ಆಚಾರ್ ಸ್ವಾಗತಿಸಿ, ನಿರೂಪಿಸಿದ ಕಾರ್ಯಕ್ರಮದಲ್ಲಿ ಯುವ ವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮುಣ್ಣಾಯ ವಂದಿಸಿದರು.
ಉದ್ಘಾಟನೆ:
ಅ.22 ರಂದು ಪೂರ್ವಾಹ್ನ ಕ್ರೀಡಾಕೂಟ ವನ್ನು ತುಳು ಶಿವಳ್ಳಿ ಉಜಿರೆ ವಲಯಾಧ್ಯಕ್ಷ ಶರತ್ ಕೃಷ್ಣ ಪಡುವೆಟ್ನಾಯ ದೀಪ ಪ್ರಜ್ವಲಿಸಿ ಉದ್ಘಾಟಿಸಿ ಎಲ್ಲ ಬ್ರಾಹ್ಮಣ ಪಂಗಡವನ್ನು ಒಗ್ಗೂಡಿಸಿ,ಜಿಲ್ಲಾ ಮಟ್ಟದ ಪಂದ್ಯಾಟ ನಡೆಸುತ್ತಿರುವುದು ಅಭಿನಂದನೀಯ.
ಸಮಾಜದಲ್ಲಿ ಒಗ್ಗಟ್ಟು ಮೂಡಿಸಲು ಕ್ರೀಡೆ ಸೂಕ್ತ ಪರಿಹಾರ ಮಾರ್ಗ ಎಂದು ನುಡಿದು ಶುಭ ಕೋರಿದರು. ಸಮಾರಂಭದಲ್ಲಿ ತುಳು ಶಿವಳ್ಳಿ ಬ್ರಾಹ್ಮಣರ ಸಂಘದ ಜಿಲ್ಲಾಧ್ಯಕ್ಷ ಡಾ|ಎಂ.ಎಂ.ದಯಾಕರ್,ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯ, ಕಾರ್ಯದರ್ಶಿ ರಾಜಪ್ರಸಾದ್ ಪೊಲ್ನಾಯ, ತುಳು ಶಿವಳ್ಳಿ ಮಹಿಳಾ ಘಟಕದ ಉಜಿರೆ ವಲಯದ ಸರೋಜಾ ಕೆದಿಲಾಯ, ಧರ್ಮಸ್ಥಳದ ಗಿರೀಶ್ ಕುದ್ರೆತ್ತಾಯ, ಯುವ ವಿಪ್ರ ವೇದಿಕೆಯ ಆದಿತ್ಯ ಶರ್ಮ ,ಪ್ರಾಣೇಶ್ ಮೊದಲಾದವರು ಉಪಸ್ಥಿತರಿದ್ದರು.
ಯುವವೇದಿಕೆ ಅಧ್ಯಕ್ಷ ದುರ್ಗಾಪ್ರಸಾದ್ ಕೆರ್ಮು ಣ್ಣಾಯ ಸ್ವಾಗತಿಸಿ ,ನಿರೂಪಿಸಿದ ಕಾರ್ಯಕ್ರಮದಲ್ಲಿ ಸೂರ್ಯನಾರಾಯಣ ಮುರುಡಿತ್ತಾಯ ವಂದಿಸಿದರು. ಫಲಿತಾಂಶ : 4 ಓವರ್ ಗೆ ಸೀಮಿತಗೊಂಡ ನಾಕೌಟ್ ಮಾದರಿಯ ಓವರ್ ಆರ್ಮ್ ಕ್ರಿಕೆಟ್ ಪಂದ್ಯಾಟ “ವಿಪ್ರ ಕಪ್ -2022″ಕ್ರೀಡಾಕೂಟದಲ್ಲಿ ಬ್ರಾಹ್ಮಣ ಸಮಾಜದ ಶಿವಳ್ಳಿ ಸ್ಥಾನಿಕ,ಕೋಟ, ಹವ್ಯಕ, ಚಿತ್ಪಾವನ, ಕರಾಡಬ್ರಾಹ್ಮಣ ತಂಡಗಳ ಪುರುಷರು ಹಾಗು ಮಹಿಳಾ ತಂಡಗಳು ಭಾಗವಹಿಸಿದ್ದು, ಕ್ರಿಕೆಟ್ ಅಂತಿಮ ಪಂದ್ಯಾಟದಲ್ಲಿ ಆತಿಥೇಯ ಬೆಳ್ತಂಗಡಿ ವಿಪ್ರಪ್ರಿಯರು ತಂಡ ಜಯಗಳಿಸಿ “ವಿಪ್ರ ಕಪ್ -2022” ಮತ್ತು ನಗದು ಪುರಸ್ಕಾರ ಹಾಗು ರನ್ನರ್ಸ್ ಗಳಿಸಿದ ಸ್ಥಾನಿಕ ರಾಯಲ್ಸ್ ತಂಡ ರನ್ನರ್ಸ್ ಕಪ್ ಮತ್ತು ನಗದು ಪುರಸ್ಕಾರ ಪಡೆದರು.
ವಿಪ್ರ ಲೆಜೆಂಡ್ಸ್ ವಿಭಾಗದಲ್ಲಿ ವಿಪ್ರಪ್ರಿಯರ ತಂಡ ಪ್ರಥಮ ಸ್ಥಾನ ಹಾಗು ಸ್ಥಾನಿಕ ಮಾಡೆಲ್ ತಂಡ ರನ್ನರ್ಸ್ ಪಡೆಯಿತು. ವಿಷ್ಣುಪ್ರಸಾದ್ ಸರಣಿ ಶ್ರೇಷ್ಠ,ಉತ್ತಮ ಆಟಗಾರ ಹಾಗೂ ಕಾಶೀನಾಥ್ ಉತ್ತಮ ದಾಂಡಿಗ ಹಾಗೂ ಸುದರ್ಶನ್ ಉತ್ತಮ ಬೌಲರ್ ಪ್ರಶಸ್ತಿ ಪಡೆದರು ಮಹಿಳೆಯರಿಗಾಗಿ ಏರ್ಪಡಿಸಲಾದ ತ್ರೋಬಾಲ್ ಪಂದ್ಯಾಟದಲ್ಲಿ ಕೂಟ ಮಹಾ ಜಗತ್ತು ಬೆಳ್ತಂಗಡಿ ಮಹಿಳಾ ಘಟಕ ಪ್ರಥಮ ಸ್ಥಾನ ಪಡೆದು, ಬಂಟ್ವಾಳ ತುಳು ಶಿವಳ್ಳಿ ಮಹಿಳಾ ವಿಭಾಗ ದ್ವಿತೀಯ ಸ್ಥಾನ ಪಡೆಯಿತು. ಸುಕನ್ಯಾ ಭಟ್ ಉತ್ತಮ ಎಸೆತ ಹಾಗೂ ಶ್ರೀಮತಿ ಶಶಿ ಅವರು ಉತ್ತಮ ಹಿಡಿತ ಆಟಗಾರ್ತಿಯಾಗಿ ಪ್ರಶಸ್ತಿ ಪಡೆದರು . ಕ್ರೀಡಾಕೂಟದ ಪ್ರಯುಕ್ತ ಏರ್ಪಡಿಸಲಾದ ಲಕ್ಕಿ ಕೂಪನ್ ಡ್ರಾ ದಲ್ಲಿ ನಿಶಾಂತ್ ಹೆಬ್ಬಾರ್ ನಿಡ್ಲೆ ಅದೃಷ್ಟವಂತ ಮೆಂಬರ್ ಆಗಿ ವಿಶೇಷ ಬಹುಮಾನಕ್ಕೆ ಪಾತ್ರರಾದರು.