News Karnataka Kannada
Tuesday, May 14 2024
ಮಂಗಳೂರು

ವೈಟ್ ಗ್ರೋ ಅಗ್ರಿ ಫಾರ್ಮ್ ಕುರಿತು ಅಪಪ್ರಚಾರ: ನ್ಯಾಯಾಲಯದಿಂದ ತಡೆಯಾಜ್ಞೆ

Msrum
Photo Credit : News Kannada

ಮಂಗಳೂರು: ಕಳೆದ ಸುಮಾರು 3 ವರ್ಷಗಳಿಂದ ದೇಸಿ ಪದ್ಧತಿಯಲ್ಲಿ ಅಣಬೆ ಉತ್ಪಾದನೆ ಮಾಡುತ್ತಿದ್ದ ವೈಟ್ ಗ್ರೋ ಅಗ್ರಿ ಎಲ್ಎಲ್ ಪಿ ವಿಷಯದಲ್ಲಿ ಕೆಲವು ಹಿತಾಸಕ್ತಿಗಳು , ಏಕಾಏಕಿ ಇಲ್ಲ ಸಲ್ಲದ ಅರೋಪ ಮಾಡಿ , ಅಪಪ್ರಚಾರದ ಮೂಲಕ ಅಣಬೆ ಉತ್ಪಾದನೆ ನಿಲ್ಲಿಸಲು ಯತ್ನಿಸಿದ್ದರು. ಕೆಲವು ಮಾಧ್ಯಮಗಳಲ್ಲಿ ಸುಳ್ಳು ವಿಚಾರಗಳನ್ನು ಹರಿಯಬಿಡಲಾಗಿತ್ತು. ಕೆಲವರು ಸಾಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡಿದ್ದರು. ಈಗ ಮಂಗಳೂರು ಸಿವಿಲ್ ನ್ಯಾಯಾಲಯವು ಕೆಲವು ಪ್ರಮುಖ ಪತ್ರಿಕೆ, ರಾಜ್ಯ ಟಿ ವಿ ಚಾನೆಲ್ ಗಳು, ಸಾಮಾಜಿಕ ಜಾಲತಾಣದ ಸುದ್ದಿ ಮಾಧ್ಯಮಗಳು ಸಂಸ್ಥೆಯ ಕುರಿತು ಯಾವುದೇ ರೀತಿಯ ಸುಳ್ಳು ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ನೀಡಿದೆ.

ನಮ್ಮ ಸಂಸ್ಥೆಯು ಶುದ್ಧ ದೇಸಿ ಮಾದರಿಯಲ್ಲಿ ಅಣಬೆ ಉತ್ಪಾದನೆ ಮಾಡುತ್ತಿದೆ. ಸ್ಥಳೀಯರು ನಮಗೆ ಹೇಳಿದ ಸಣ್ಣಪುಟ್ಟ ಸಮಸ್ಯೆಗಳಿಗೂ ಉತ್ತಮ ರೀತಿಯಲ್ಲಿ ಸ್ಪಂದನೆ ನೀಡಿದ್ದೇವೆ. ಆದರೆ ಕೆಲವು ರಾಜಕೀಯ ಶಕ್ತಿಗಳು ಇಲ್ಲಿ ಹೋರಾಟ ನಡೆಸುತ್ತಿದ್ದು, ಆ ಬಗ್ಗೆ ನಾವು ಪ್ರತಿಕ್ರಿಯೆ ನೀಡಲು ಬಯಸುವುದಿಲ್ಲ. ನಮ್ಮ ಸಂಸ್ಥೆಯು ನೆಲದ ಕಾನೂನಿಗೆ ಬದ್ಧವಾಗಿದ್ದು, ಆ ಪ್ರಕಾರವಾಗಿ ಈಗಾಗಲೇ ಕೆಲವರ ವಿರುದ್ಧ ಮಾನನಷ್ಠ ಕ್ರಿಮಿನಲ್ ಮತ್ತು ಸಿವಿಲ್ ಮೊಕದ್ದಮೆ ಹೂಡಲು ಕ್ರಮ ಕೈಗೊಂಡಿದ್ದೇವೆ. ಆರೋಪ ಮಾಡುವವರು ನ್ಯಾಯಾಲಯದಲ್ಲಿ ಸಾಬೀತು ಪಡಿಸುವ ಸ್ವಾತಂತ್ರ್ಯವಿದೆ.

ಅದನ್ನು ಹೊರತು ಪಡಿಸಿ ಸಂಸ್ಥೆಯ ವಿರುದ್ಧ ಅಪಪ್ರಚಾರ, ಕಾರ್ಮಿಕರಿಗೆ ಕಿರುಕುಳ, ಇತ್ಯಾದಿ ಮುಂದುವರಿಸುವವರ ವಿರುದ್ಧ ಕಾನೂನು ಕ್ರಮದ ಅವಕಶ್ಯಕತೆ ಇರುವುದನ್ನು ನಾವು ಈ ಮೂಲಕ ಸ್ಪಷ್ಟಪಡಿಸುತ್ತೇವೆ ಎಂದು ಸಂಸ್ಥೆ ಪ್ರಕಟಣೆ ನೀಡಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು