ಮಂಗಳೂರು: ಕರ್ನಾಟಕ ಕಾಂಗ್ರೆಸ್ ಸರ್ಕಾರದ ವೈಫಲ್ಯದ ವಿರುದ್ಧ ಬಿಜೆಪಿ ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದೆ. ಇತ್ತ ನಗರದಲ್ಲಿಂದು ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರಾಜ್ಯದಲ್ಲಿ ಕಾಂಗ್ರೆಸ್ ನಡೆಸಿರುವ ಭ್ರಷ್ಟಾಚಾರದ ಮಿತಿಮೀರಿದೆ. ತಾಲೂಕು ಕಚೇರಿಯಿಂದ ಹಿಡಿದು ವಿಧಾನಸೌಧದವರೆಗೆ ಲಂಚದ ಪ್ರಕರಣಗಳು ಕೇಳಿ ಬರುತ್ತಿವೆ ಎಂದಿದ್ದಾರೆ.
ರಾಜ್ಯದಲ್ಲಿ ಭ್ರಷ್ಟಾಚಾರ ತಾಂಡವ ವಾಡುತ್ತಿದೆ. ರಾಜ್ಯದಲ್ಲಿ ನೀರಿನ ಆಭಾವ ತಲೆ ದೂರಿದೆ. ರೈತರು ಸಂಕಷ್ಟ ದಲ್ಲಿ ಇದ್ದಾರೆ. ಮಳೆ ಕಡಿಮೆ ಯಾಗಿದೆ ರೈತರ ಬೆಳಗಳಿಗೆ ನೀರಿಲ್ಲ. ಈ ಸಂಕಷ್ಟ ಪರಿಸ್ಥಿತಿ ನಡುವೆ ಕಾವೇರಿ ನೀರನ್ನು ರಾಜ್ಯ ಸರಕಾರ ತಮಿಳುನಾಡಿಗೆ ಹರಿಬಿಡುತ್ತಿದೆ. ಈ ವಿಚಾರದಲ್ಲಿ ಹೋರಾಟ, ಪಾದ ಯಾತ್ರೆ ಕಾಂಗ್ರೆಸ್ ಮುಖಂಡರು ಮಾಡಿದವರು. ಈಗ ರಾಜ್ಯದ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ.
ರೈತರು ಕಂಗಾಲಾಗಿರುವ ಕಾಲ ಘಟ್ಟದಲ್ಲಿ ಕಾವೇರಿ ನೀರನ್ನು ತಮಿಳುನಾಡಿಗೆ ಹರಿ ಬಿಡಲಾಗುತ್ತಿದೆ. ಸರಕಾರದ ಈ ನಿಲುವಿನ ವಿರುದ್ದ ನಾವು ಹೋರಾಟ ಆರಂಭಿಸಿದ್ದೇವೆ. ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಂಡ್ಯಕ್ಕೆ ತೆರಳಿ ಪರಿಸ್ಥಿತಿ ಪರಿಶೀಲಿಸಲಿದ್ದಾರೆ. ಪಾದಯಾತ್ರೆಯ ಮೂಲಕ ನಾವು ಹೋರಾಟ ಆರಂಭಿಸುತ್ತೇವೆ.
ರಾಜ್ಯದ ರೈತರಿಗೆ ಈ ಸರಕಾರ ಅನ್ಯಾಯ ಮಾಡುತ್ತಿದೆ. ನಾಳೆಯಿಂದ ನಮ್ಮ ಹೋರಾಟ ಆರಂಭವಾಗುತ್ತೆ. ಬಿಜೆಪಿ ಪಕ್ಷವನ್ನು ಯಾರು ಬಿಟ್ಟು ಹೋಗುವುದಿಲ್ಲ. ಎಲ್ಲರನ್ನೂ ಕರೆದು ಮಾತನಾಡಿದ್ದೇವೆ. ಸದ್ಯಕ್ಕೆ ಯಾರೂ ಪಾರ್ಟಿಯನ್ನು ಬಿಡುವುದಿಲ್ಲ ಎಂದು ಮಂಗಳೂರಿನಲ್ಲಿ ನಳಿನ್ ಕುಮಾರ್ ಕಟೀಲ್ ಕಾಂಗ್ರೆಸ್ ಸರ್ಕಾರದ ವಿರುದ್ಧ ಗುಡುಗಿದ್ದಾರೆ.